Home / ಕವನ / ಕವಿತೆ / ಹುಡುಗಿ ಮತ್ತು ದಾಸವಾಳ

ಹುಡುಗಿ ಮತ್ತು ದಾಸವಾಳ

ಟೀಚರ್‍….
ಆವತ್ತು ನಾನು ತಂದು
ಕೊಟ್ಟ ಹೂವನ್ನು
ನೀವು ಮುಡಿಯಲಿಲ್ಲ.

ನಿಮ್ಮ ಕುಂಕುಮದ ಬೊಟ್ಟಿಗೆ
ನಿಮ್ಮ ಎತ್ತರದ ತುರುಬಿಗೆ
ತೊಟ್ಟುಸಹಿತ ಕಿತ್ತುತಂದ
ಕೆಂಪು ದಾಸವಾಳವನ್ನು
ನೀವು ಮುಡಿಯಲಿಲ್ಲ.

ನಾನು ನಿಮ್ಮನ್ನು ಪ್ರೀತಿಸಿದ್ದೆ
ನಮಗಾಗಿ ನೀವು ಪಾಠ ಹೇಳುವ
ಗಣಿತವನ್ನೂ ಪ್ರೀತಿಸಿದ್ದೆ
ಆದರೂ ನೀವು ಹೂವು ಮುಡಿಯಲಿಲ್ಲ.

ಮರುದಿನ ನೀವೆ ಬೋರ್ಡಿನ
ಮೇಲೆ ಕೆಂಪು ದಾಸವಾಳ ಬರೆದಿರಿ
ಆಮೇಲೆ ಪರಾಗ ಕೇಸರ
ಎಂದು ಗಂಟೆಗಟ್ಟಳೆ ಕೊರೆದಿರಿ
ನನ್ನ ಕಣ್ಣಿಂದ ಅಷ್ಟೂ
ದಳಗಳುರುಳಿದವು
ನಿಮಗೆ ಕಾಣಲಿಲ್ಲ.

ನಾನು ನೋಡಿದ್ದೇನೆ
ನನ್ನ ಗೆಳತಿಯರು ತರುವ
ಗುಲಾಬಿಯನ್ನು ನಿಮ್ಮ ಮುಡಿಯಲ್ಲಿ
ಆದರೆ ಗಟ್ಟಿಮಣ್ಣಿನ
ನನ್ನ ಮನೆಯಂಗಳದಲ್ಲಿ
ಗುಲಾಬಿ ಚಿಗುರುವುದಿಲ್ಲ.

ನೀವೇ ನನ್ನೆದೆಯೊಳಗೆ
ಬೇರಿಳಿಸಿದ ಪ್ರೀತಿಯ ಗಿಡದಲ್ಲಿ
ನೂರು ದಾಸವಾಳದ ಹೂಗಳರಳಿದರೂ
ಟೊಂಗೆ ಟೊಂಗೆಯಲಿ
ಒಂದೂ ನಿಮ್ಮ ಮುಡಿಗೇರಲಿಲ್ಲ.

*****

Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...