Home / ಕವನ / ಕವಿತೆ / ೧೬ ನೋಡಬೇಡ ತಿರುಗಿ

೧೬ ನೋಡಬೇಡ ತಿರುಗಿ

(ಪೂರ್ವಾರ್ಧ)

ಯಾರಲ್ಲಿ? ಯಾರಿದ್ದೀರಿ?
ಬಂದಿದ್ದೇನೆ. ಬಾಗಿಲು ತೆಗೆಯಿರಿ.

ಈತನಕ ಇದ್ದಳು, ಈಗಿಲ್ಲ
ಎಂದರೆ ಹೇಗೆ ನಂಬಲಿ?

ಕಿಟಕಿಗಳ ತೆರೆದುಕೊಳ್ಳಿ
ಬಾಗಿಲುಗಳ ತೆರೆದುಕೊಳ್ಳಿ
ಬಂದಿದ್ದೇನೆ, ಕರೆದುಕೊಳ್ಳಿ.

ಹೌದು, ಇಲ್ಲೆ ಈ ಕಿಟಕಿಯ ಬಳಿ ಕುಳಿತು
ತಾರೆಯರನ್ನು ಎಣಿಸುತ್ತಿದ್ದಳು.
ಈಗ ಆಕಾಶ ಬಟಾಬಯಲು
ಸುರಿಯುತ್ತಿದೆ ಕತ್ತಲು.

ಹೌದು. ಇಲ್ಲೆ ಈ ಮೇಜಿನ ಮೇಲೆ
ತಲೆಯಿಟ್ಟು ಕವಿತೆ ಬರೆಯುತ್ತಿದ್ದಳು.
ಈಗ ಮೌನದ ಕಾವಲು
ನೆನಪುಗಳ ನೆರಳು.

(ಉತ್ತರಾರ್ಧ)

ಗೆಳೆಯಾ…
ನಿನ್ನನ್ನು ಹೇಗೆ ಸಂತೈಸಲಿ?
ಅದೋ… ಈ ಮೂಲೆಯಲ್ಲಿ
‘ಬೆಂದು ಬೂದಿಯಾದ ಕವಿತೆಗಳ
ತುಣುಕುಗಳಿವೆ ಆಯ್ದುಕೊ…
ಹಠಮಾರಿ ಗಾಳಿ ಇಡಿಯಾಗಿ
ಹಂಚಿಕೊಳ್ಳುತ್ತಿದೆ
ತಡಮಾಡದೆ ಕಸಿದುಕೊ…

ದಯವಿಟ್ಟು ಹೋಗು
ಯಾವತ್ತಿಗೂ ಇಲ್ಲ ನಿನ್ನ ಹುಡುಗಿ
ಕದ ಮುಚ್ಚಿಕೊ…
ನೋಡಬೇಡ ತಿರುಗಿ.


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...