ಸ್ತ್ರೀ ವೇದನೆ

ಇಹಸುಖಕ್ಕೂ ನಾರಿ
ಪರಪ್ರಾಪ್ತಿಗೂ ನಾರಿ
ಸಕಲ ಸಂಪದಕೂ ನಾರಿ
ಕೂಗಿದರೂ ಸಾರಿ ಸಾರಿ

ತಿಳಿದವರು ಬಹಳಂತೆ
ತರತರದ ಕಹಳೆ
ತುದಿ ಮೊದಲು ಅರಿಯದೋಲ್
ಬರಿಯ ಬೊಗಳೆ

ಸ್ನಿಗ್ಧ ಪ್ರೇಮದ ನೆಪ ಮಾಡಿ
ಮುಗ್ಧ ಮನಗಳ ಜೊತೆಯಾಡಿ
ತಳ್ಳುವರು ಒಲವ
ಕೆಂಪು ದೀಪದ ಅಡಿಗೆ
ದೂಡುವರು ಅಬಲೆಯರ
ಸರ್ವನಾಶದ ಕಡೆಗೆ

ಮುದ್ದುಗಂಗಳ ಮುಗ್ಧ ಮುಖಕ್ಕೂ
ನೆತ್ತರನು ತಿಕ್ಕಿ
ಗಣಿಸುವನು ಪಾಪಿ
ಆನಂದವನು ಹೆಕ್ಕಿ
ಗಂಡಲ್ಲನಿವ ತಿಕ್ಕಲು ಭಂಡ
ತೃಷೆಗಿಲ್ಲ ಇವನಲ್ಲಿ
ಲಗಾಮು ದಂಡ

ಪತ್ರಿಕೆಯ ಪುಟಪುಟದಿ
ಶೀಲಹರಣದ ಕಥೆಯು
ಭದ್ರತೆಯ ಕೋಟೆಯಲ್ಲೂ
ಮಾನಹಾನಿಯ ವ್ಯಥೆಯೂ

*****

Previous post ೧೬ ನೋಡಬೇಡ ತಿರುಗಿ
Next post ಕಾಮ ದಹನ ೧೯೮೩

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys