ಸ್ತ್ರೀ ವೇದನೆ

ಇಹಸುಖಕ್ಕೂ ನಾರಿ
ಪರಪ್ರಾಪ್ತಿಗೂ ನಾರಿ
ಸಕಲ ಸಂಪದಕೂ ನಾರಿ
ಕೂಗಿದರೂ ಸಾರಿ ಸಾರಿ

ತಿಳಿದವರು ಬಹಳಂತೆ
ತರತರದ ಕಹಳೆ
ತುದಿ ಮೊದಲು ಅರಿಯದೋಲ್
ಬರಿಯ ಬೊಗಳೆ

ಸ್ನಿಗ್ಧ ಪ್ರೇಮದ ನೆಪ ಮಾಡಿ
ಮುಗ್ಧ ಮನಗಳ ಜೊತೆಯಾಡಿ
ತಳ್ಳುವರು ಒಲವ
ಕೆಂಪು ದೀಪದ ಅಡಿಗೆ
ದೂಡುವರು ಅಬಲೆಯರ
ಸರ್ವನಾಶದ ಕಡೆಗೆ

ಮುದ್ದುಗಂಗಳ ಮುಗ್ಧ ಮುಖಕ್ಕೂ
ನೆತ್ತರನು ತಿಕ್ಕಿ
ಗಣಿಸುವನು ಪಾಪಿ
ಆನಂದವನು ಹೆಕ್ಕಿ
ಗಂಡಲ್ಲನಿವ ತಿಕ್ಕಲು ಭಂಡ
ತೃಷೆಗಿಲ್ಲ ಇವನಲ್ಲಿ
ಲಗಾಮು ದಂಡ

ಪತ್ರಿಕೆಯ ಪುಟಪುಟದಿ
ಶೀಲಹರಣದ ಕಥೆಯು
ಭದ್ರತೆಯ ಕೋಟೆಯಲ್ಲೂ
ಮಾನಹಾನಿಯ ವ್ಯಥೆಯೂ

*****

Previous post ೧೬ ನೋಡಬೇಡ ತಿರುಗಿ
Next post ಕಾಮ ದಹನ ೧೯೮೩

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…