ಸ್ತ್ರೀ ವೇದನೆ

ಇಹಸುಖಕ್ಕೂ ನಾರಿ
ಪರಪ್ರಾಪ್ತಿಗೂ ನಾರಿ
ಸಕಲ ಸಂಪದಕೂ ನಾರಿ
ಕೂಗಿದರೂ ಸಾರಿ ಸಾರಿ

ತಿಳಿದವರು ಬಹಳಂತೆ
ತರತರದ ಕಹಳೆ
ತುದಿ ಮೊದಲು ಅರಿಯದೋಲ್
ಬರಿಯ ಬೊಗಳೆ

ಸ್ನಿಗ್ಧ ಪ್ರೇಮದ ನೆಪ ಮಾಡಿ
ಮುಗ್ಧ ಮನಗಳ ಜೊತೆಯಾಡಿ
ತಳ್ಳುವರು ಒಲವ
ಕೆಂಪು ದೀಪದ ಅಡಿಗೆ
ದೂಡುವರು ಅಬಲೆಯರ
ಸರ್ವನಾಶದ ಕಡೆಗೆ

ಮುದ್ದುಗಂಗಳ ಮುಗ್ಧ ಮುಖಕ್ಕೂ
ನೆತ್ತರನು ತಿಕ್ಕಿ
ಗಣಿಸುವನು ಪಾಪಿ
ಆನಂದವನು ಹೆಕ್ಕಿ
ಗಂಡಲ್ಲನಿವ ತಿಕ್ಕಲು ಭಂಡ
ತೃಷೆಗಿಲ್ಲ ಇವನಲ್ಲಿ
ಲಗಾಮು ದಂಡ

ಪತ್ರಿಕೆಯ ಪುಟಪುಟದಿ
ಶೀಲಹರಣದ ಕಥೆಯು
ಭದ್ರತೆಯ ಕೋಟೆಯಲ್ಲೂ
ಮಾನಹಾನಿಯ ವ್ಯಥೆಯೂ

*****

Previous post ೧೬ ನೋಡಬೇಡ ತಿರುಗಿ
Next post ಕಾಮ ದಹನ ೧೯೮೩

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…