Home / ಕವನ / ಕವಿತೆ / ಈ ಗೆಳೆತನ….

ಈ ಗೆಳೆತನ….

ನನ್ನೆಲ್ಲಾ ಪದ್ಯಗಳಲ್ಲಿರುವಂತೆ
ಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ.
ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ
ಇಷ್ಟವಾಗದಿದ್ದರೆ ಬೇಡ
ಕಿಂಚಿತ್ತೂ ಕೋಪವಿಲ್ಲ.

ಆದರೆ ನಾನು ಪ್ರೀತಿಸುವ
ಗಾಳಿ, ಮೋಡ, ತಾರೆಯರನ್ನು
ನಿಂದಿಸಬೇಡ.
ಅವರ ಬಗ್ಗೆ ಯಾಕೆ ಬರೆಯುತ್ತಿ?
ಎಂದು ಕೇಳಬೇಡ.
ಅವರ ಬಗ್ಗೆ ಎಷ್ಟು ಬರೆಯುತ್ತಿ?
ಎಂದು ಕಾಡಬೇಡ.

ನಾನೀಗ-
ನನ್ನ-ನಿನ್ನ ಗೆಳೆತನದ ಬಗ್ಗೆ
ಬರೆಯುತ್ತಿದ್ದೇನೆ.
ನಿನ್ನ ಗೈರು ಹಾಜರಿಯಲ್ಲಿ
ತಾರೆ, ಸೂರ್ಯ, ಮೋಡ, ಗಾಳಿ
ನನ್ನ ಜತೆಯಲ್ಲಿದ್ದಾರೆ.

ಈ ಗೆಳೆತನ ಮೋಡಗಳ ಹಾಗೆ.
ನಾಲ್ಕು ಹನಿ ತಂಪು ಚೆಲ್ಲುತ್ತೇನೆ
ಎಂದು ಹೇಳುವುದಿಲ್ಲ.
ಚೆಲ್ಲಬೇಡ ಎಂದರೆ
ಕೇಳುವುದೂ ಇಲ್ಲ.

ಈ ಗೆಳೆತನ ಕಡಲೊಳಗಿನ
ಅಲೆಗಳ ಹಾಗೆ.
ತಡಿಯಲ್ಲಿ ನಿಂತರೆ ಓಡಿಬಂದು
ಕಾಲನ್ನು ಚುಂಬಿಸುತ್ತದೆ.
ಚುಂಬಿಸುತ್ತೇನೆ ಎಂದು ಹೇಳುವುದಿಲ್ಲ
ಚುಂಬಿಸಬೇಡ ಎಂದರೆ
ಕೇಳುವುದೂ ಇಲ್ಲ.

ಈ ಗೆಳೆತನ ಗಾಳಿಯ ಹಾಗೆ.
ಎದೆಯೊಳಗೆ ನುಗ್ಗಿ ಹೊರಬರುತ್ತದೆ.
ಹೋಗುತ್ತೇನೆ ಎಂದು ಹೇಳುವುದಿಲ್ಲ.
ಹೋಗಬೇಡ ಎಂದರೆ
ಕೇಳುವುದೂ ಇಲ್ಲ.

ಆದರೂ ಅನಿಸುತ್ತದೆ.
ಒಮ್ಮೊಮ್ಮೆ ಈ ಗೆಳೆತನ
ಧೂಳಿನ ಹಾಗೆ ಮೆತ್ತಿಕೊಳ್ಳುತ್ತದೆ.
ಕೊಡವಿದರೆ ಚದುರಿ
ಚೆಲ್ಲಿ ಹೋಗುತ್ತದೆ.

ಹೌದು
ನನ್ನ-ನಿನ್ನ ಗೆಳೆತನದಲ್ಲಿ
ಮೆಚ್ಚುವಂಥಾದ್ದು ಇದೆ
ಚುಚ್ಚುವಂಥಾದ್ದು ಇದೆ
ಕೊಚ್ಚಿ ಹರಿದು ಹೋಗುವಂಥಾದ್ದು ಇದೆ.

ಅಂದಹಾಗೆ ಗೆಳೆಯಾ…
ಈ ಗೆಳೆತನದಲ್ಲಿ ನಾನು
ಶಾಮೀಲಾಗಿದ್ದರೂ ಇದು
ಇಡಿಯಾಗಿ ನಿನ್ನನ್ನು ಕುರಿತೆ
ಬರೆದ ಕವನ. ನಿಜ,
ಬರೆ ಎಂದೇನೂ ನೀನು ಕೇಳಿಲ್ಲ.
ಆದರೆ ಬರೆಯಬೇಡ ಎಂದರೆ ನಾನು ಕೇಳುವುದೂ ಇಲ್ಲ.


Tagged:

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...