ಮಡಲಿನ ಮಡಿಲು

ಹೆಚ್ಚಿಗೇನು ಬಯಸಿರಲಿಲ್ಲ
ಆ ಜನ
ಅಂಬಲಿಗೆ ಅನ್ನ ಬೆರೆಸಿ
ಕುದಿಸಿಟ್ಟು ಕುಡಿದರೆ
ಅಷ್ಟೇ ಸಾಕು ಅಮೃತದ ಪಾನ

ಒಡೆಯನ ಗದ್ದೆಗೆ
ಒಂದಿಷ್ಟು ಗೊಬ್ಬರ
ಎರೆದರೆ ಸಾಕು
ಆದಿನ ಎಸೆದ
ಎರಡಾಣೆಗೆ ತೃಪ್ತ ಮನ

ಹೊತ್ತು ಮರೆ ಸರಿಯೇ
ತಿಂಗಳಿಣುಕುತ್ತಿರೆ
ಒಂದಷ್ಟು ಬಿಸಿ ಬಿಸಿ ನೀರು
ಎಣ್ಣೆ ತಿಕ್ಕಿ ಹೊಯ್ದರೆ ಸಾಕು
ಮೈದಣಿವಿಗೆ ಅಭ್ಯಂಗ ಸ್ನಾನ

ಇರುಳುಗುತ್ತಲೆಯಲ್ಲಿ
ಚಿಮಣಿ ಬುಡ್ಡಿಯ ಹಚ್ಚಿ
ಒಂದೆರಡು ಜಪ ಭಜನೆ ಸಾಕು
ವಿಠಲನ ಸಾರ್ಥಕ ಆ ದಿನ

ಕುಚಲಕ್ಕಿ ಅನ್ನ
ಬಡವರ ಬಂಧು
ಭೂ ತಾಯಿ ಮೀನ ಪಳದಿಯ
ಸವಿದರೆ ಸಾಕು
ಮೃಷ್ಟಾನ್ನ ಭೋಜನ
ಮಡಲಿನ ಹಂದರದಿ
ಸಗಣಿ ಸಾರಿಸಿದ ತಾವಿಗೊರಗಿ
ಕಂಬಳಿ ಹೊದ್ದು
ಮೈಮರೆತು ಕಣ್ಣ ಮುಚ್ಚಿದರೆ ಸಾಕು
(ಫ್ಯಾನು ಎರ್‍ ಕಂಡಿಷನ್
ತೆಗೆದು ಒಲೆಯೊಳಗೆ ಹಾಕು)
ನಿದ್ರಾದೇವಿಯ ಹಿತವಾದ
ಆಲಿಂಗನ

ಆಹಾ ಎಂಥ ಬದುಕು ಕಣಾ
ಹಳಹಳಿಸಿ ಬಯಸಿದರೂ
ಸಿಕ್ಕದು ಇಂದಿಗದು ಕನಸು ಕಣಾ


Previous post ಪದ್ಯವಾಗಲಿಲ್ಲ
Next post ಬಸವನ ಹುಳ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys