ಮಡಲಿನ ಮಡಿಲು

ಹೆಚ್ಚಿಗೇನು ಬಯಸಿರಲಿಲ್ಲ
ಆ ಜನ
ಅಂಬಲಿಗೆ ಅನ್ನ ಬೆರೆಸಿ
ಕುದಿಸಿಟ್ಟು ಕುಡಿದರೆ
ಅಷ್ಟೇ ಸಾಕು ಅಮೃತದ ಪಾನ

ಒಡೆಯನ ಗದ್ದೆಗೆ
ಒಂದಿಷ್ಟು ಗೊಬ್ಬರ
ಎರೆದರೆ ಸಾಕು
ಆದಿನ ಎಸೆದ
ಎರಡಾಣೆಗೆ ತೃಪ್ತ ಮನ

ಹೊತ್ತು ಮರೆ ಸರಿಯೇ
ತಿಂಗಳಿಣುಕುತ್ತಿರೆ
ಒಂದಷ್ಟು ಬಿಸಿ ಬಿಸಿ ನೀರು
ಎಣ್ಣೆ ತಿಕ್ಕಿ ಹೊಯ್ದರೆ ಸಾಕು
ಮೈದಣಿವಿಗೆ ಅಭ್ಯಂಗ ಸ್ನಾನ

ಇರುಳುಗುತ್ತಲೆಯಲ್ಲಿ
ಚಿಮಣಿ ಬುಡ್ಡಿಯ ಹಚ್ಚಿ
ಒಂದೆರಡು ಜಪ ಭಜನೆ ಸಾಕು
ವಿಠಲನ ಸಾರ್ಥಕ ಆ ದಿನ

ಕುಚಲಕ್ಕಿ ಅನ್ನ
ಬಡವರ ಬಂಧು
ಭೂ ತಾಯಿ ಮೀನ ಪಳದಿಯ
ಸವಿದರೆ ಸಾಕು
ಮೃಷ್ಟಾನ್ನ ಭೋಜನ
ಮಡಲಿನ ಹಂದರದಿ
ಸಗಣಿ ಸಾರಿಸಿದ ತಾವಿಗೊರಗಿ
ಕಂಬಳಿ ಹೊದ್ದು
ಮೈಮರೆತು ಕಣ್ಣ ಮುಚ್ಚಿದರೆ ಸಾಕು
(ಫ್ಯಾನು ಎರ್‍ ಕಂಡಿಷನ್
ತೆಗೆದು ಒಲೆಯೊಳಗೆ ಹಾಕು)
ನಿದ್ರಾದೇವಿಯ ಹಿತವಾದ
ಆಲಿಂಗನ

ಆಹಾ ಎಂಥ ಬದುಕು ಕಣಾ
ಹಳಹಳಿಸಿ ಬಯಸಿದರೂ
ಸಿಕ್ಕದು ಇಂದಿಗದು ಕನಸು ಕಣಾ


Previous post ಪದ್ಯವಾಗಲಿಲ್ಲ
Next post ಬಸವನ ಹುಳ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…