ಎಲ್ಲಿಹನು ?

ಹರನ ನಾಮವ ಹಿಡಿದು ದಿನಬೆಳಗು ಹಾಡುವಿ
ಆ ಹರನು ಇನ್ನಾರು ತಿಳಿಯಲಾರಿ
ಹೃದಯ ಗಂಗೆಯ ಹೊಳೆಯಲ್ಲಿ ತೇಲಿಬಿಟ್ಟಿರುವಿ
ನಿಜಭಕ್ತಿ ತೊರೆದೀಶನನು ಕಾಣಲಾರಿ

ಹರನೆಲ್ಲಿ; ನೀನೆಲ್ಲಿ; ಅವನ ಹುಡುಕುವಿಯೆಲ್ಲಿ ?
ಅಹಂಕಾರದೊಳು ನೀ ಮರೆದು ಪೂಜಿಸಲು
ನಿನ್ನ ಪತ್ರಿ-ಪುಷ್ಪ-ಗಂಧವಾರ ಮುಡಿಯಲ್ಲಿ ?
ನಿರ್ಮಲ ಚಿತ್ತಬೇಕು ಪ್ರಭುವನರಿಯಲು

ಪೂಜೆಯಾಡಂಬರದಲಿ ಅಡಗದೇ ಆ ದೇವನು-
ಮೂಡಿ ಬೆಳಗುತಿಹನು ನಿನ್ನಂತರಂಗದಲ್ಲಿ
ಕರೆದಿಹನು ನೂರೆಂಟುಬಾರಿ ನಿನ್ನನವನು
ಓ ಗೊಡು ನೀ ಮೊದಲು ನಿನ್ನಾತ್ಮದಲ್ಲಿ !

ಸತ್ಯ-ಶಾಂತಿಯ ಹೊನಲು, ಪ್ರೇಮ-ತ್ಯಾಗದ ಕಡಲು
ಅಹಿಂಸೆಯ ಪಾವಿತ್ರವಾಗಲಿ ನಿನ್ನ ಚಾರಿತ್ರ್ಯ
ವಿಷಯ ವಾಸನೆಯು ಬಿಗಿದ ಮನದ ಬಾಗಿಲು-
ತೆರೆದು ಹೃದಯವರ್ಪಿಸಲದೇ ಮುಕ್ತಿ ಸ್ವಾತಂತ್ರ್ಯ

ಈ ಎಲ್ಲ ಸಾತ್ವಿಕತೆಯ ಮಹಾ ತತ್ವದಲಿ ತೇಲು
ಅಲ್ಲಿ ಕಾಣುವಿ ಸುಖವ, ಪರಮ ಸಂಪದವ
ಗುಡಿಯೊಳುದ್ಭವಿಸಿದ ದೇವ ಹೃದಯದೊಳುಂಟೆನಲು
ಅಂಟದೇ ಬರಿಹೆಮ್ಮೆಗೆ ಹುಡುಕು ದೇವ ಪಥವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಡಬಿಡಂಗಿ
Next post ದೂರವಾಣಿ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys