ಎಲ್ಲಿಹನು ?

ಹರನ ನಾಮವ ಹಿಡಿದು ದಿನಬೆಳಗು ಹಾಡುವಿ
ಆ ಹರನು ಇನ್ನಾರು ತಿಳಿಯಲಾರಿ
ಹೃದಯ ಗಂಗೆಯ ಹೊಳೆಯಲ್ಲಿ ತೇಲಿಬಿಟ್ಟಿರುವಿ
ನಿಜಭಕ್ತಿ ತೊರೆದೀಶನನು ಕಾಣಲಾರಿ

ಹರನೆಲ್ಲಿ; ನೀನೆಲ್ಲಿ; ಅವನ ಹುಡುಕುವಿಯೆಲ್ಲಿ ?
ಅಹಂಕಾರದೊಳು ನೀ ಮರೆದು ಪೂಜಿಸಲು
ನಿನ್ನ ಪತ್ರಿ-ಪುಷ್ಪ-ಗಂಧವಾರ ಮುಡಿಯಲ್ಲಿ ?
ನಿರ್ಮಲ ಚಿತ್ತಬೇಕು ಪ್ರಭುವನರಿಯಲು

ಪೂಜೆಯಾಡಂಬರದಲಿ ಅಡಗದೇ ಆ ದೇವನು-
ಮೂಡಿ ಬೆಳಗುತಿಹನು ನಿನ್ನಂತರಂಗದಲ್ಲಿ
ಕರೆದಿಹನು ನೂರೆಂಟುಬಾರಿ ನಿನ್ನನವನು
ಓ ಗೊಡು ನೀ ಮೊದಲು ನಿನ್ನಾತ್ಮದಲ್ಲಿ !

ಸತ್ಯ-ಶಾಂತಿಯ ಹೊನಲು, ಪ್ರೇಮ-ತ್ಯಾಗದ ಕಡಲು
ಅಹಿಂಸೆಯ ಪಾವಿತ್ರವಾಗಲಿ ನಿನ್ನ ಚಾರಿತ್ರ್ಯ
ವಿಷಯ ವಾಸನೆಯು ಬಿಗಿದ ಮನದ ಬಾಗಿಲು-
ತೆರೆದು ಹೃದಯವರ್ಪಿಸಲದೇ ಮುಕ್ತಿ ಸ್ವಾತಂತ್ರ್ಯ

ಈ ಎಲ್ಲ ಸಾತ್ವಿಕತೆಯ ಮಹಾ ತತ್ವದಲಿ ತೇಲು
ಅಲ್ಲಿ ಕಾಣುವಿ ಸುಖವ, ಪರಮ ಸಂಪದವ
ಗುಡಿಯೊಳುದ್ಭವಿಸಿದ ದೇವ ಹೃದಯದೊಳುಂಟೆನಲು
ಅಂಟದೇ ಬರಿಹೆಮ್ಮೆಗೆ ಹುಡುಕು ದೇವ ಪಥವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಡಬಿಡಂಗಿ
Next post ದೂರವಾಣಿ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…