ಎಲ್ಲಿಹನು ?

ಹರನ ನಾಮವ ಹಿಡಿದು ದಿನಬೆಳಗು ಹಾಡುವಿ
ಆ ಹರನು ಇನ್ನಾರು ತಿಳಿಯಲಾರಿ
ಹೃದಯ ಗಂಗೆಯ ಹೊಳೆಯಲ್ಲಿ ತೇಲಿಬಿಟ್ಟಿರುವಿ
ನಿಜಭಕ್ತಿ ತೊರೆದೀಶನನು ಕಾಣಲಾರಿ

ಹರನೆಲ್ಲಿ; ನೀನೆಲ್ಲಿ; ಅವನ ಹುಡುಕುವಿಯೆಲ್ಲಿ ?
ಅಹಂಕಾರದೊಳು ನೀ ಮರೆದು ಪೂಜಿಸಲು
ನಿನ್ನ ಪತ್ರಿ-ಪುಷ್ಪ-ಗಂಧವಾರ ಮುಡಿಯಲ್ಲಿ ?
ನಿರ್ಮಲ ಚಿತ್ತಬೇಕು ಪ್ರಭುವನರಿಯಲು

ಪೂಜೆಯಾಡಂಬರದಲಿ ಅಡಗದೇ ಆ ದೇವನು-
ಮೂಡಿ ಬೆಳಗುತಿಹನು ನಿನ್ನಂತರಂಗದಲ್ಲಿ
ಕರೆದಿಹನು ನೂರೆಂಟುಬಾರಿ ನಿನ್ನನವನು
ಓ ಗೊಡು ನೀ ಮೊದಲು ನಿನ್ನಾತ್ಮದಲ್ಲಿ !

ಸತ್ಯ-ಶಾಂತಿಯ ಹೊನಲು, ಪ್ರೇಮ-ತ್ಯಾಗದ ಕಡಲು
ಅಹಿಂಸೆಯ ಪಾವಿತ್ರವಾಗಲಿ ನಿನ್ನ ಚಾರಿತ್ರ್ಯ
ವಿಷಯ ವಾಸನೆಯು ಬಿಗಿದ ಮನದ ಬಾಗಿಲು-
ತೆರೆದು ಹೃದಯವರ್ಪಿಸಲದೇ ಮುಕ್ತಿ ಸ್ವಾತಂತ್ರ್ಯ

ಈ ಎಲ್ಲ ಸಾತ್ವಿಕತೆಯ ಮಹಾ ತತ್ವದಲಿ ತೇಲು
ಅಲ್ಲಿ ಕಾಣುವಿ ಸುಖವ, ಪರಮ ಸಂಪದವ
ಗುಡಿಯೊಳುದ್ಭವಿಸಿದ ದೇವ ಹೃದಯದೊಳುಂಟೆನಲು
ಅಂಟದೇ ಬರಿಹೆಮ್ಮೆಗೆ ಹುಡುಕು ದೇವ ಪಥವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಡಬಿಡಂಗಿ
Next post ದೂರವಾಣಿ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…