ನೀರಿನ ಜಾತ್ರೆ

ಬಳ್ಳಾರಿ ನೀರಿನ ಜಾತ್ರೆ
ನಾನೊಲ್ಲೆ ತಂಗೆಮ್ಮ ಈ ಗಂಗಾಯಾತ್ರೆ
ಕೊಡಗಳ ಪರ್ವತಶ್ರೇಣಿಯ ನೋಡಮ್ಮ
ಒಡಕು ಡಬ್ಬಗಳೇನು ಹಂಡೆಗಳೇನು!

ನೂಕು ನುಗ್ಗುಗಳೇನು, ಹಟದ ಪಂಥಗಳೇನು
ಓಕುಳೀಯಾಡುವ ಸಂರಂಭವೇನು!
ಒಬ್ಬಳ ತುರುಬು ಮತ್ತೊಬ್ಬಳ ಕೆಯ್ಯಲ್ಲಿ
ಅಬ್ಬಬ್ಬ ಇವರಿಗೆ ಈಡೇನೆ ನಾವು?

ಘಟಗಳು ಒಡೆದುವು ಬಳೆಗಳು ಸಿಡಿದುವು
ಹಟಮಾರಿ ಜನಗಳ ಮುಷ್ಕರ ನೋಡೆ!
ಸ್ತ್ರೀಯರ ಪುರುಷರ ವಾಗ್ವಾದ ಕೇಳಮ್ಮ
ನ್ಯಾಯಸ್ಥಾನದ ದೊಡ್ಡ ತೀರ್ಪು ನೋಡಮ್ಮ!

ಸಂತೆಯ ರೈತನು ಬಾಯಾರಿ ಬಂದರೆ
ವಂತಿಲ್ಲ ನಡೆಯೆಂದು ನೂಕುತಲಿಹರು!
ಪ್ರಾಣ ಸಂಕಟವಾಗಿ ನಾಲಿಗೆ ಕಳೆದರು
ನೀನಾರಿಗರುಹುವೆ ನಿಲ್ಲೆಂಬರವರು

ದಯೆಯಿಲ್ಲ ಒಂದಿನಿತು ದಾಕ್ಷಿಣ್ಯ ಮೊದಲಿಲ್ಲ
ನಯವಿಲ್ಲ ಭಯವಿಲ್ಲ ಗಂಗೆಯ ಮುಂದೆ
ಅಳತೆಯ ಭತ್ಯವನುಣ್ಣಲು ಬಹುದಮ್ಮ
ತಿಳಿನೀರ ಭವಣೆಯು ಬೇಡಮ್ಮ

ಅಣಕವಾಡಿದಳೆಂದು ಮುನಿಸುಗೊಳ್ಳುವರೇನೊ
ಜನಕಜೆ ಯತ್ನವೆ ಕವಿತೆಯ ತಡೆವುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು – ಇಂದು
Next post ಪುಚ್ಚೆ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys