ನೀರಿನ ಜಾತ್ರೆ

ಬಳ್ಳಾರಿ ನೀರಿನ ಜಾತ್ರೆ
ನಾನೊಲ್ಲೆ ತಂಗೆಮ್ಮ ಈ ಗಂಗಾಯಾತ್ರೆ
ಕೊಡಗಳ ಪರ್ವತಶ್ರೇಣಿಯ ನೋಡಮ್ಮ
ಒಡಕು ಡಬ್ಬಗಳೇನು ಹಂಡೆಗಳೇನು!

ನೂಕು ನುಗ್ಗುಗಳೇನು, ಹಟದ ಪಂಥಗಳೇನು
ಓಕುಳೀಯಾಡುವ ಸಂರಂಭವೇನು!
ಒಬ್ಬಳ ತುರುಬು ಮತ್ತೊಬ್ಬಳ ಕೆಯ್ಯಲ್ಲಿ
ಅಬ್ಬಬ್ಬ ಇವರಿಗೆ ಈಡೇನೆ ನಾವು?

ಘಟಗಳು ಒಡೆದುವು ಬಳೆಗಳು ಸಿಡಿದುವು
ಹಟಮಾರಿ ಜನಗಳ ಮುಷ್ಕರ ನೋಡೆ!
ಸ್ತ್ರೀಯರ ಪುರುಷರ ವಾಗ್ವಾದ ಕೇಳಮ್ಮ
ನ್ಯಾಯಸ್ಥಾನದ ದೊಡ್ಡ ತೀರ್ಪು ನೋಡಮ್ಮ!

ಸಂತೆಯ ರೈತನು ಬಾಯಾರಿ ಬಂದರೆ
ವಂತಿಲ್ಲ ನಡೆಯೆಂದು ನೂಕುತಲಿಹರು!
ಪ್ರಾಣ ಸಂಕಟವಾಗಿ ನಾಲಿಗೆ ಕಳೆದರು
ನೀನಾರಿಗರುಹುವೆ ನಿಲ್ಲೆಂಬರವರು

ದಯೆಯಿಲ್ಲ ಒಂದಿನಿತು ದಾಕ್ಷಿಣ್ಯ ಮೊದಲಿಲ್ಲ
ನಯವಿಲ್ಲ ಭಯವಿಲ್ಲ ಗಂಗೆಯ ಮುಂದೆ
ಅಳತೆಯ ಭತ್ಯವನುಣ್ಣಲು ಬಹುದಮ್ಮ
ತಿಳಿನೀರ ಭವಣೆಯು ಬೇಡಮ್ಮ

ಅಣಕವಾಡಿದಳೆಂದು ಮುನಿಸುಗೊಳ್ಳುವರೇನೊ
ಜನಕಜೆ ಯತ್ನವೆ ಕವಿತೆಯ ತಡೆವುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು – ಇಂದು
Next post ಪುಚ್ಚೆ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…