ನೀರಿನ ಜಾತ್ರೆ

ಬಳ್ಳಾರಿ ನೀರಿನ ಜಾತ್ರೆ
ನಾನೊಲ್ಲೆ ತಂಗೆಮ್ಮ ಈ ಗಂಗಾಯಾತ್ರೆ
ಕೊಡಗಳ ಪರ್ವತಶ್ರೇಣಿಯ ನೋಡಮ್ಮ
ಒಡಕು ಡಬ್ಬಗಳೇನು ಹಂಡೆಗಳೇನು!

ನೂಕು ನುಗ್ಗುಗಳೇನು, ಹಟದ ಪಂಥಗಳೇನು
ಓಕುಳೀಯಾಡುವ ಸಂರಂಭವೇನು!
ಒಬ್ಬಳ ತುರುಬು ಮತ್ತೊಬ್ಬಳ ಕೆಯ್ಯಲ್ಲಿ
ಅಬ್ಬಬ್ಬ ಇವರಿಗೆ ಈಡೇನೆ ನಾವು?

ಘಟಗಳು ಒಡೆದುವು ಬಳೆಗಳು ಸಿಡಿದುವು
ಹಟಮಾರಿ ಜನಗಳ ಮುಷ್ಕರ ನೋಡೆ!
ಸ್ತ್ರೀಯರ ಪುರುಷರ ವಾಗ್ವಾದ ಕೇಳಮ್ಮ
ನ್ಯಾಯಸ್ಥಾನದ ದೊಡ್ಡ ತೀರ್ಪು ನೋಡಮ್ಮ!

ಸಂತೆಯ ರೈತನು ಬಾಯಾರಿ ಬಂದರೆ
ವಂತಿಲ್ಲ ನಡೆಯೆಂದು ನೂಕುತಲಿಹರು!
ಪ್ರಾಣ ಸಂಕಟವಾಗಿ ನಾಲಿಗೆ ಕಳೆದರು
ನೀನಾರಿಗರುಹುವೆ ನಿಲ್ಲೆಂಬರವರು

ದಯೆಯಿಲ್ಲ ಒಂದಿನಿತು ದಾಕ್ಷಿಣ್ಯ ಮೊದಲಿಲ್ಲ
ನಯವಿಲ್ಲ ಭಯವಿಲ್ಲ ಗಂಗೆಯ ಮುಂದೆ
ಅಳತೆಯ ಭತ್ಯವನುಣ್ಣಲು ಬಹುದಮ್ಮ
ತಿಳಿನೀರ ಭವಣೆಯು ಬೇಡಮ್ಮ

ಅಣಕವಾಡಿದಳೆಂದು ಮುನಿಸುಗೊಳ್ಳುವರೇನೊ
ಜನಕಜೆ ಯತ್ನವೆ ಕವಿತೆಯ ತಡೆವುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು – ಇಂದು
Next post ಪುಚ್ಚೆ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…