ನೀರಿನ ಜಾತ್ರೆ

ಬಳ್ಳಾರಿ ನೀರಿನ ಜಾತ್ರೆ
ನಾನೊಲ್ಲೆ ತಂಗೆಮ್ಮ ಈ ಗಂಗಾಯಾತ್ರೆ
ಕೊಡಗಳ ಪರ್ವತಶ್ರೇಣಿಯ ನೋಡಮ್ಮ
ಒಡಕು ಡಬ್ಬಗಳೇನು ಹಂಡೆಗಳೇನು!

ನೂಕು ನುಗ್ಗುಗಳೇನು, ಹಟದ ಪಂಥಗಳೇನು
ಓಕುಳೀಯಾಡುವ ಸಂರಂಭವೇನು!
ಒಬ್ಬಳ ತುರುಬು ಮತ್ತೊಬ್ಬಳ ಕೆಯ್ಯಲ್ಲಿ
ಅಬ್ಬಬ್ಬ ಇವರಿಗೆ ಈಡೇನೆ ನಾವು?

ಘಟಗಳು ಒಡೆದುವು ಬಳೆಗಳು ಸಿಡಿದುವು
ಹಟಮಾರಿ ಜನಗಳ ಮುಷ್ಕರ ನೋಡೆ!
ಸ್ತ್ರೀಯರ ಪುರುಷರ ವಾಗ್ವಾದ ಕೇಳಮ್ಮ
ನ್ಯಾಯಸ್ಥಾನದ ದೊಡ್ಡ ತೀರ್ಪು ನೋಡಮ್ಮ!

ಸಂತೆಯ ರೈತನು ಬಾಯಾರಿ ಬಂದರೆ
ವಂತಿಲ್ಲ ನಡೆಯೆಂದು ನೂಕುತಲಿಹರು!
ಪ್ರಾಣ ಸಂಕಟವಾಗಿ ನಾಲಿಗೆ ಕಳೆದರು
ನೀನಾರಿಗರುಹುವೆ ನಿಲ್ಲೆಂಬರವರು

ದಯೆಯಿಲ್ಲ ಒಂದಿನಿತು ದಾಕ್ಷಿಣ್ಯ ಮೊದಲಿಲ್ಲ
ನಯವಿಲ್ಲ ಭಯವಿಲ್ಲ ಗಂಗೆಯ ಮುಂದೆ
ಅಳತೆಯ ಭತ್ಯವನುಣ್ಣಲು ಬಹುದಮ್ಮ
ತಿಳಿನೀರ ಭವಣೆಯು ಬೇಡಮ್ಮ

ಅಣಕವಾಡಿದಳೆಂದು ಮುನಿಸುಗೊಳ್ಳುವರೇನೊ
ಜನಕಜೆ ಯತ್ನವೆ ಕವಿತೆಯ ತಡೆವುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು – ಇಂದು
Next post ಪುಚ್ಚೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…