Home / ಕವನ / ಕವಿತೆ / ಬೆಳ್ದಿಂಗಳು

ಬೆಳ್ದಿಂಗಳು

ಬಂದನೂ ಬಂದನೂ ಚಂದ ಮಾಮಣ್ಣ
ತಂದನೂ ಜಗಕೆಲ್ಲ ಹಾಲಿನಾ ಬಣ್ಣ
ಕುಳಿತಳು ನಮ್ಮಜ್ಜಿ ಅಂಗಳಕೆ ಬಂದು
ಹಾಕಿದೆನು ನಾನಿಂತು ಕುಣಿವ ಕೂಗೊಂದು

ಪಾರ್ವತೀ ಜಯಲಕ್ಷ್ಮೀ ಕೋಮಲೇ ಸೀತೆ
ಸಾವಿತ್ರಿ ಕಾವೇರಿ ರುಕ್ಮಿಣೀ ಲಲಿತೆ
ನಿರ್ಮಲಾ ಕುಂತಳಾ ಕುಮುದಿನೀ ರಾಧೆ
ಭಾರತೀ ಕೌಸಲ್ಯ ವನಜಾಕ್ಷಿ ಶಾರದೆ

ಬನ್ನಿರೇ ಆಡುವಾ ಕಣ್ಣುಮುಚ್ಚಾಲೆ
ಸರಿಸಿರೇ ಕಾಲ್ಗಡಗ ರುಳಿಗಳನು ಮೇಲೆ
ಓಡಿರೇ ಕೈಬಳೆಯ ಸಪ್ಪುಳವ ನಿಲಿಸಿ
ಹಾಡಿರೇ ಗೀತೆಗಳ ಒಂದಾಟ ಮುಗಿಸಿ

ತಟ್ಟಿರೇ ಗುಬ್ಬಿಗಳ ಶ್ರೀ ತುಳಸಿ ಸುತ್ತು
ಮುಡಿಯಿರೇ ಅರಳುತಿಹ ಮೊಗ್ಗುಗಳ ಕಿತ್ತು
ಅಜ್ಜಿ ಮುಚ್ಚುವಳಂತೆ ಕಣ್ಣುಗಳ ನಮಗೆ
ತುತ್ತು ಹಾಕುವಳಂತೆ ಬೆಳ್ದಿಂಗಳೊಳಗೆ

ಆಡಿದೆವು ಆಟಗಳ ನಾವೆಲ್ಲ ಕಲೆತು
ಮಾಡಿದೆವು ಊಟಗಳ ಒಟ್ಟಾಗಿ ಕುಳಿತು
ತೀಡಿದನು ತಣ್ಗದಿರ ನಮ್ಮೆಲರೊಳಗೆ
ಹಾಡಿದೆವು ನಾವಿಂತು ಪೂರ್ಣಚಂದ್ರನಿಗೆ

ಬಾರಣ್ಣ ಚಂದದಾ ಚೆಲುವಿನಾ ಕಣಿಯೆ
ಬಾರಣ್ಣ ತಾರೆಗಳ ಧರಿಸಿರುವ ದಣಿಯೆ
ಬಾರಣ್ಣ ರಸಿಕರಾ ಬಾಳಿನಾ ತಿರುಳೆ
ಬಾರಣ್ಣ ಅನುರಾಗದುತ್ಸಹದ ಪ್ರಭೆಯೆ

ಬಾರಣ್ಣ ಪುಷ್ಪಗಳನರಳಿಸುವ ದೊರೆಯೆ
ಬಾರಣ್ಣ ಜಗವೆಲ್ಲ ಬೆಳಗಿಸುವ ಪ್ರಭುವೆ
ಬಾರಣ್ಣ ಬೇಸರವ ನೀಗಿಸುವ ಉಸಿರೆ
ಬಾ ಬಾರ ಜನಕಜೆಯ ಜೀವನವ ನಲಿಸು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...