ಬೆಳ್ದಿಂಗಳು

ಬಂದನೂ ಬಂದನೂ ಚಂದ ಮಾಮಣ್ಣ
ತಂದನೂ ಜಗಕೆಲ್ಲ ಹಾಲಿನಾ ಬಣ್ಣ
ಕುಳಿತಳು ನಮ್ಮಜ್ಜಿ ಅಂಗಳಕೆ ಬಂದು
ಹಾಕಿದೆನು ನಾನಿಂತು ಕುಣಿವ ಕೂಗೊಂದು

ಪಾರ್ವತೀ ಜಯಲಕ್ಷ್ಮೀ ಕೋಮಲೇ ಸೀತೆ
ಸಾವಿತ್ರಿ ಕಾವೇರಿ ರುಕ್ಮಿಣೀ ಲಲಿತೆ
ನಿರ್ಮಲಾ ಕುಂತಳಾ ಕುಮುದಿನೀ ರಾಧೆ
ಭಾರತೀ ಕೌಸಲ್ಯ ವನಜಾಕ್ಷಿ ಶಾರದೆ

ಬನ್ನಿರೇ ಆಡುವಾ ಕಣ್ಣುಮುಚ್ಚಾಲೆ
ಸರಿಸಿರೇ ಕಾಲ್ಗಡಗ ರುಳಿಗಳನು ಮೇಲೆ
ಓಡಿರೇ ಕೈಬಳೆಯ ಸಪ್ಪುಳವ ನಿಲಿಸಿ
ಹಾಡಿರೇ ಗೀತೆಗಳ ಒಂದಾಟ ಮುಗಿಸಿ

ತಟ್ಟಿರೇ ಗುಬ್ಬಿಗಳ ಶ್ರೀ ತುಳಸಿ ಸುತ್ತು
ಮುಡಿಯಿರೇ ಅರಳುತಿಹ ಮೊಗ್ಗುಗಳ ಕಿತ್ತು
ಅಜ್ಜಿ ಮುಚ್ಚುವಳಂತೆ ಕಣ್ಣುಗಳ ನಮಗೆ
ತುತ್ತು ಹಾಕುವಳಂತೆ ಬೆಳ್ದಿಂಗಳೊಳಗೆ

ಆಡಿದೆವು ಆಟಗಳ ನಾವೆಲ್ಲ ಕಲೆತು
ಮಾಡಿದೆವು ಊಟಗಳ ಒಟ್ಟಾಗಿ ಕುಳಿತು
ತೀಡಿದನು ತಣ್ಗದಿರ ನಮ್ಮೆಲರೊಳಗೆ
ಹಾಡಿದೆವು ನಾವಿಂತು ಪೂರ್ಣಚಂದ್ರನಿಗೆ

ಬಾರಣ್ಣ ಚಂದದಾ ಚೆಲುವಿನಾ ಕಣಿಯೆ
ಬಾರಣ್ಣ ತಾರೆಗಳ ಧರಿಸಿರುವ ದಣಿಯೆ
ಬಾರಣ್ಣ ರಸಿಕರಾ ಬಾಳಿನಾ ತಿರುಳೆ
ಬಾರಣ್ಣ ಅನುರಾಗದುತ್ಸಹದ ಪ್ರಭೆಯೆ

ಬಾರಣ್ಣ ಪುಷ್ಪಗಳನರಳಿಸುವ ದೊರೆಯೆ
ಬಾರಣ್ಣ ಜಗವೆಲ್ಲ ಬೆಳಗಿಸುವ ಪ್ರಭುವೆ
ಬಾರಣ್ಣ ಬೇಸರವ ನೀಗಿಸುವ ಉಸಿರೆ
ಬಾ ಬಾರ ಜನಕಜೆಯ ಜೀವನವ ನಲಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ಸುಟ್ಟ ರೊಟ್ಟಿ
Next post ದೈವಾದೀನ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…