Home / ಕವನ / ಕವಿತೆ / ಬೆಳ್ದಿಂಗಳು

ಬೆಳ್ದಿಂಗಳು

ಬಂದನೂ ಬಂದನೂ ಚಂದ ಮಾಮಣ್ಣ
ತಂದನೂ ಜಗಕೆಲ್ಲ ಹಾಲಿನಾ ಬಣ್ಣ
ಕುಳಿತಳು ನಮ್ಮಜ್ಜಿ ಅಂಗಳಕೆ ಬಂದು
ಹಾಕಿದೆನು ನಾನಿಂತು ಕುಣಿವ ಕೂಗೊಂದು

ಪಾರ್ವತೀ ಜಯಲಕ್ಷ್ಮೀ ಕೋಮಲೇ ಸೀತೆ
ಸಾವಿತ್ರಿ ಕಾವೇರಿ ರುಕ್ಮಿಣೀ ಲಲಿತೆ
ನಿರ್ಮಲಾ ಕುಂತಳಾ ಕುಮುದಿನೀ ರಾಧೆ
ಭಾರತೀ ಕೌಸಲ್ಯ ವನಜಾಕ್ಷಿ ಶಾರದೆ

ಬನ್ನಿರೇ ಆಡುವಾ ಕಣ್ಣುಮುಚ್ಚಾಲೆ
ಸರಿಸಿರೇ ಕಾಲ್ಗಡಗ ರುಳಿಗಳನು ಮೇಲೆ
ಓಡಿರೇ ಕೈಬಳೆಯ ಸಪ್ಪುಳವ ನಿಲಿಸಿ
ಹಾಡಿರೇ ಗೀತೆಗಳ ಒಂದಾಟ ಮುಗಿಸಿ

ತಟ್ಟಿರೇ ಗುಬ್ಬಿಗಳ ಶ್ರೀ ತುಳಸಿ ಸುತ್ತು
ಮುಡಿಯಿರೇ ಅರಳುತಿಹ ಮೊಗ್ಗುಗಳ ಕಿತ್ತು
ಅಜ್ಜಿ ಮುಚ್ಚುವಳಂತೆ ಕಣ್ಣುಗಳ ನಮಗೆ
ತುತ್ತು ಹಾಕುವಳಂತೆ ಬೆಳ್ದಿಂಗಳೊಳಗೆ

ಆಡಿದೆವು ಆಟಗಳ ನಾವೆಲ್ಲ ಕಲೆತು
ಮಾಡಿದೆವು ಊಟಗಳ ಒಟ್ಟಾಗಿ ಕುಳಿತು
ತೀಡಿದನು ತಣ್ಗದಿರ ನಮ್ಮೆಲರೊಳಗೆ
ಹಾಡಿದೆವು ನಾವಿಂತು ಪೂರ್ಣಚಂದ್ರನಿಗೆ

ಬಾರಣ್ಣ ಚಂದದಾ ಚೆಲುವಿನಾ ಕಣಿಯೆ
ಬಾರಣ್ಣ ತಾರೆಗಳ ಧರಿಸಿರುವ ದಣಿಯೆ
ಬಾರಣ್ಣ ರಸಿಕರಾ ಬಾಳಿನಾ ತಿರುಳೆ
ಬಾರಣ್ಣ ಅನುರಾಗದುತ್ಸಹದ ಪ್ರಭೆಯೆ

ಬಾರಣ್ಣ ಪುಷ್ಪಗಳನರಳಿಸುವ ದೊರೆಯೆ
ಬಾರಣ್ಣ ಜಗವೆಲ್ಲ ಬೆಳಗಿಸುವ ಪ್ರಭುವೆ
ಬಾರಣ್ಣ ಬೇಸರವ ನೀಗಿಸುವ ಉಸಿರೆ
ಬಾ ಬಾರ ಜನಕಜೆಯ ಜೀವನವ ನಲಿಸು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...