ಓಲೆಗೊಂದು ಓಲೆ

ಕನಸು

ಕಂಡೆನು ಓಲೆಗೆ ಓಲೆಯನು
ಅಂಧಳ ನಡಸುವ ಕೋಲಿದನು
ಜಾತ್ರೆಗೆ ಕರೆಯುವ ಭ್ರಾತೃವನು

ಕುರುಡಿಗೆ ಕಂಗಳ ತರಿಸುವನು
ಪರಿಶೆಗೆ ನಾನಿದೊ ಹೊರಡುವೆನು
ಬಯಸಿದ ಅಣ್ಣನೆ ದೊರೆತಿಹನು

ವಿಷಯದ ವಿಷಮವ ತಳ್ಳುವೆನು
ಚಂಗನೆ ನೆಗೆಯುತ ಹಾರುವೆನು
ಜೀವದ ಪುರದೊಳು ನುಗ್ಗುವೆನು

ಡುಮುಡುಮು ವಾದ್ಯವ ಕೇಳುವೆನು
ತೇರಿನ ಬಾವುಟಕೇರುವೆನು
ಕದಳೀ ದವನವ ಸೂಡುವೆನು

ಭಾವದ ಶಿಖರವ ಸೇರುವೆನು
ಕಮಲದ ಸಾರವ ಹೀರುವೆನು
ಅಣ್ಣನ ಭವನವ ಕಾಣುವೆನು

ಮಿಂಚಿನ ಆಚೆಗೆ ಕರೆಯುವನು
ಕಾಣದ ಒಗಟೆಯ ಬಿಚ್ಚುವನು
ಏನನೊ ಏನನೊ ತೋರುವನು

ಮಾನಸಪುತ್ರನು ನಮ್ಮಣ್ಣ
ಆಗಸದೇಹಿಯು ನಮ್ಮಣ್ಣ
ಭಾವದ ಸಾಗರ ನಮ್ಮಣ್ಣ

ಕುಸಿದರೆ ಅಣ್ಣನೆ ನಡಸುವನು
ಹಸಿದರೆ ಅಣ್ಣನೆ ಉಣಿಸುವನು
ಧನ್ಯಳು ಜನಕಜೆ ಇನ್ನೇನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕೆಂದರೆ…
Next post ದೆವ್ವಗಳ ಹೋರಾಟ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys