ದೆವ್ವಗಳ ಹೋರಾಟ

ರಾತ್ರಿಯೆಲ್ಲಾ ಅಂಗಳದಲ್ಲಿ
ಏನು ಚೀರಾಟ ಏನು ಕಿರುಚಾಟ
ಏನೆಂದು ನೋಡಿದರೆ ದೆವ್ವಗಳೆರಡರ
ಮಧ್ಯೆ ಭಯಂಕರ ಹೋರಾಟ

ಬಾವಿ ದೆವ್ವ ಹಣ್ಣನು ತಿಂದಿದೆ
ಅಂತ ಹುಣಸೆಯ ಆರೋಪ
ಹುಣಸೆ ದೆವ್ವ ನೀರನು ಕುಡಿದಿದೆ
ಅಂತ ಬಾವಿಗೆ ಕೋಪ

ಕೇಳಿ ಕೇಳಿ ಸಹಿಸಲಾರದೆ
ಆಲದ ಮರದಿಂದ
ಇಳಿದು ಬಂತು ಆಲದ ದೆವ್ವ
ಇದ್ದವರಲದೇ ಹಿರಿ ದೆವ್ವ

ಏನೆಲೊ ಮೂರ್ಖರೆ ಬುದ್ಧಿಯಿದೆಯಾ?
ಕೂತರೆ ಕೂತುದು ಕೂತವರದೆಯಾ?
ಹಣ್ಣು ನೀರು ಸರ್ವರ ಸೊತ್ತು–
ಹಾಗಂತ ಭಗವದ್ಗೀತೆಯಲಿತ್ತು

ಹೇಳಿ ಕೇಳಿ ಈ ಜನ್ಮ ದೆವ್ವ !
ಮುಂದಿನ ಸಲವಾದ್ರು ಬೇಡವೆ ದಿವ್ಯ?
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಗಳಿಸಿಕೊಳ್ಳಿರೋ ಮೋಕ್ಷ!

ಆಕ್ಷ! ಅಂದಿತು ಹುಣಸೆ ದೆವ್ವ
ಮರವ ಹತ್ತಿ ಮುಗುಂ
ಹಾಕ್ಷ! ಅಂದಿತು ಬಾವಿ ದೆವ್ವ
ಬಾವಿಯೊಳಕ್ಕೆ ಧುಡುಂ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓಲೆಗೊಂದು ಓಲೆ
Next post ಕೆಲಸ ಹುಡುಕುವುದರಲ್ಲಿ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…