Home / ಕವನ / ಕವಿತೆ / ದಾಟಿ ತಾಗಲಿ ದೃಷ್ಟಿಕಡೆಯ ಪರಿಧಿ

ದಾಟಿ ತಾಗಲಿ ದೃಷ್ಟಿಕಡೆಯ ಪರಿಧಿ

ಪಟ್ಟಿದ್ದೆಲ್ಲ ಕಾಮಕ್ಕೆ, ಪ್ರೀತಿಗಲ್ಲ – ಭಜನೆ
ಕುಟ್ಟಿದ್ದೆಲ್ಲ ಮೋಜಿಗೆ ಭಕ್ತಿಗಲ್ಲ;
ಮೋರಿಯಲ್ಲಿಳಿದ ಜಲ ಪಾತ್ರದಲ್ಲಿದ್ದರೂ
ಕೊಚ್ಚಿ ಹೋಗಲು ಮಾತ್ರ, ಕುಡಿಯಲಲ್ಲ
ಅರ್ಥಸಾಧಕ ಗುರಿಯೆ ಬಿಟ್ಟು ಪಡುತಿರುವ ಸುಖ
ತೀಟೆಗಳ ಪೂರೈಕೆ, ಭೋಗವಲ್ಲ
ನೆರೆ ಹೊರೆಯ ಮೆಟ್ಟಿ ಗಿಟ್ಟಿದ ಅರ್ಥಕಾಮಗಳು
ಪುರುಷಾರ್ಥವೆನ್ನಿಸಲು ತಕ್ಕವಲ್ಲ

ಲಕ್ಷ ವೃಕ್ಷಗಳು ಮೈಲುದ್ದ ನಿಂತಿದ್ದರೂ
ಗುಂಪಾಗಿ ನೆರೆಯದೆ ಅರಣ್ಯವೆಲ್ಲಿ ?
ಗುಂಪಿದ್ದರೂ ಬಂತೆ ತಮತಮಗೆ ಬಂದ ಜನ
ಉದ್ದೇಶ ಸ್ವಂತದ್ದು ಸಂತೆಯಲ್ಲಿ.
ಪಾತ್ರ ಕಥೆ ವಸ್ತು ಸಂವಾದ ಎಲ್ಲಾ ಇದ್ದೂ
ಅರ್ಥವಿದೆ ಕೃತಿಯ ವಿನ್ಯಾಸದಲ್ಲಿ
ಸೂತ್ರ ಕಡಿದರೆ ಮಣಿಯ ಮಾಲೆ ಚೆಲ್ಲಾಪಿಲ್ಲಿ
ವಿನ್ಯಾಸವಿಲ್ಲದೆ ಅರ್ಥವೆಲ್ಲಿ ?

ರಾಮಗಿರಿಯಿಂದ ಹೈಮಾಚಲದ ನೆತ್ತಿಗೆ
ಗಡಿಯ ರಚಿಸಿದ್ದು ಉಜ್ಜಯಿನಿ ಪ್ರತಿಭೆ
ನಾಲ್ಕು ದಿಕ್ಕುಗಳಲ್ಲು ಉಪನಿಷೋದ್ದೇಶಕ್ಕೆ
ದುಡಿದ ತೇಜಕ್ಕೆ ಕೇರಳದ ಮಿತಿಯೆ ?
ಬ್ರಹ್ಮಗಿರಿಯಲ್ಲಿ ಅಶೋಕಚಕ್ರಿಯ ಮಾತು
ಬೋಧಿವೃಕ್ಷದ ನೆರಳು ದಕ್ಷಿಣದಲಿ
ದಕ್ಷಿಣೇಶ್ವರ ಕಾಳಿದೇವಾಲಯದ ಗಂಟೆ
ಮೊಳಗಿತ್ತು ಇಡಿ ಭರತಖಂಡದಲ್ಲಿ

ಕರಿಹಸಿರು ಕೆಂಪುಗಳ ಪಗಡೆಯಾಟದ ಹಾಸು
ಹತ್ತಾರು ದಾನ್ಯ ಬಿತ್ತಿರುವ ಗದ್ದೆ
ಎಲ್ಲ ಕಾಯಿಗೆ ಒಂದೇ ಹಾಸು, ದಾಳದ ಜೋಡಿ
ನೂರು ರುಚಿ ಒಟ್ಟಾಗಿ ಊಟನಿದ್ದೆ
ವ್ಯಕ್ತಿ ಕೇಂದ್ರಕ್ಕೆ ಹತ್ತು ವೃತ್ತಗಳ ಸುತ್ತುವರಿ
ದಾಟಿ ತಾಗಲಿ ದೃಷ್ಟಿ ಕಡೆಯ ಪರಿಧಿ
ಕೋಟಿ ಬಗೆ ಡೊಂಕು ಸಂಕೀರ್ಣ ನರವ್ಯೂಹದಲಿ
ರಕ್ತ ಪರಿಚಲನೆ ಕ್ಷಣ ತಪ್ಪದಿರಲಿ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್