ಪೊಸಗಾರ

ಮೋಡನ ಮನೆಯೊಳಗೆ
ಸರಿಗಮ ಸ್ವರ ಏರಿಳಿತ
ಕಪ್ಪು ಬಿಳಿ ಚಿತ್ತಾರ
ಆಗಾಗ ನೇಸರನ ಕಣ್ಣು ಮುಚ್ಚಾಲೆ
ಕೆಂಬಣ್ಣ ರಾಚಿದ ಚಿತ್ರದಲಿ ಭೂಮಿ ವಧು

ಸುಳಿಗಾಳಿ ಬೀಸುತಿದೆ
ಬಿಸಿಲ ಕಾವಿಗೆ ಹುಡಿ
ನೆಲ ಗರ್ಭದಿ ಏರಿ ಮುಗಿಲ ತಬ್ಬಿ

ಆಹಾ! ಎದೆಯಲ್ಲಿ ಏನೋ ಸುಳಿದಂತೆ
ತುಯ್ದಾಟ, ಓಲಾಟ ಸೃಷ್ಟಿ
ಅಮಲುಗೊಂಡಂತೆ!

ಚಳಕ್! ಸಿಡಿಲು ಹೊಡೆದಂತೆ
ಮಿಂಚು ಜಗಮಗಿಸಿ
ಜಗವ ಕೋರೈಸಿದೆ-ಬೆಳಕುಗುಳಿ

ಸೌಮ್ಯವದನೆ ಭೂ ವಧು
ರಜಸ್ವಾಲೆ ದಾಟಿ
ಚಾತಕ ಪಕ್ಷಿ-ಪಲ್ಲಕ್ಕಿ ಏರಿ
ಗುಡುಗು ಸಿಡಿಲ ಗುದಮುರಿಗೆ ರುದ್ರ ನರ್ತನ

ಹನಿಹನಿ ಆಪೋಶನ
ಉರಿಬಿದ್ದ ಒಡಲಿಗೆ
ಮಂದಸೌರಭ ಮಣ್ಣ
ಮಧುರ ಗಂಧ

ಬಸಿರು ನಿಲ್ಲುವ ಸಮಯ
ಉತ್ತಿಟ್ಟು ಬಿತ್ತಿದರೆ ಚಿನ್ನವದು ಬೆಳೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಡು ನಿನ್ನ ದುಃಖ
Next post ರೂಪಮಹಲಿನ ರಾಣಿ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys