Home / ಕವನ / ಕವಿತೆ / ಕೊಡು ನಿನ್ನ ದುಃಖ

ಕೊಡು ನಿನ್ನ ದುಃಖ

ನನ್ನ ಸೌಂದರ್ಯವನ್ನು
ಮೆಚ್ಚಿಕೊಂಡ ಜನ
ನನ್ನ ಸರಳತೆಯನ್ನು
ಮೆಚ್ಚಿಕೊಂಡ ಜನ
ನನ್ನ ದುಃಖ ಎಷ್ಟೆಂದು ಕೇಳಲಿಲ್ಲ.

ನನ್ನನ್ನು ಪ್ರೀತಿಸಿದ ತಂದೆ
ನನ್ನನ್ನು ಸಲಹಿದ ತಾಯಿ
ನನ್ನ ಆಸೆಗಳೇನು
ಎಂದು ಕೇಳಲಿಲ್ಲ.

ನಾನು ನೀಲಿ ನಕಾಶೆಯೊಳಗೆ
ಹೊಳೆಯುವ ಕನಸುಗಳನ್ನು
ಗುರುತಿಸುತ್ತಿರುವಾಗ
ನನ್ನ ಜೀವದ ಹುಡುಗ
‘ನೀನೆಷ್ಟು ಮುಗುದೆ’
ಎಂದು ವಿಷಾದದಿಂದ ನಕ್ಕ.

ಆವತ್ತೆ ನನಗೆ ಗೊತ್ತಾಯಿತು,
ಈ ಜಗತ್ತಿನಲ್ಲಿರುವುದು
ಕೊಳೆತ ಹೃದಯಗಳು ಮಾತ್ರ.
ಈ ಜಗತ್ತಿನಲ್ಲಿರುವುದು ಹುಳಿತ ಕಣ್ಣುಗಳು ಮಾತ್ರ.

ಅಂದಿನಿಂದಲೆ ನಾನು
ಎಲ್ಲರ ಬಳಿ ಕಣ್ಣೀರು
ಬೇಡಲು ಶುರುಮಾಡಿದೆ.
ಎಲ್ಲರ ಕನಸುಗಳನ್ನು
ಕುತೂಹಲಿಯಾಗಿ ನೋಡಿದೆ.

ನನ್ನೆದೆಯೊಳಗೆ
ಹರಳುಗಟ್ಟುತ್ತಿತ್ತು ದುಃಖ
ಬೆಟ್ಟವಾಗುತ್ತಿತ್ತು ದುಃಖ
ನಾನು ಎಲ್ಲರಿಗೂ ಕೂಗಿ ಹೇಳುತ್ತಿದ್ದೆ
ನೋಡಿ-
ಈ ಬೆಟ್ಟ ಕಣ್ಣೀರಿನದು
ನನ್ನದು ಹಾಗು ನಿಮ್ಮದು.

ಬೆಟ್ಟ ಕರಗಿ ಪ್ರವಾಹವಾಗಿ
ಹರಿಯುತ್ತಿತ್ತು ದುಃಖ.
ನಾನು ಎಲ್ಲರಿಗೂ ಕೂಗಿ ಹೇಳುತ್ತಿದ್ದೆ
ನೋಡಿ-
ಈ ಪ್ರವಾಹ ಕಣ್ಣೀರಿನದು, ನನ್ನದು ಹಾಗೂ ನಿಮ್ಮದು.

ಎಲ್ಲ ನಕ್ಕರು, ಹೊರಟೇ ಹೋದರು.
ನಾನೊಬ್ಬಳೆ ಆಗಿದ್ದೆ
ಜೊತೆಗೆ ಬೆಟ್ಟ-ಪ್ರವಾಹ.

ಕೊನೆಗೂ ನೆನಪಾಯಿತು
ಹೌದು
ಅದು ಅವನದೆ ಮುಖ.
ಅದು ಕೇಳುತ್ತಿತ್ತು
ಕೊಡು ನಿನ್ನ ದುಃಖ
ಕೊಡು ನಿನ್ನ ದುಃಖ.


Tagged:

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...