Home / ಕವನ / ಕವಿತೆ / ಕೊಡು ನಿನ್ನ ದುಃಖ

ಕೊಡು ನಿನ್ನ ದುಃಖ

ನನ್ನ ಸೌಂದರ್ಯವನ್ನು
ಮೆಚ್ಚಿಕೊಂಡ ಜನ
ನನ್ನ ಸರಳತೆಯನ್ನು
ಮೆಚ್ಚಿಕೊಂಡ ಜನ
ನನ್ನ ದುಃಖ ಎಷ್ಟೆಂದು ಕೇಳಲಿಲ್ಲ.

ನನ್ನನ್ನು ಪ್ರೀತಿಸಿದ ತಂದೆ
ನನ್ನನ್ನು ಸಲಹಿದ ತಾಯಿ
ನನ್ನ ಆಸೆಗಳೇನು
ಎಂದು ಕೇಳಲಿಲ್ಲ.

ನಾನು ನೀಲಿ ನಕಾಶೆಯೊಳಗೆ
ಹೊಳೆಯುವ ಕನಸುಗಳನ್ನು
ಗುರುತಿಸುತ್ತಿರುವಾಗ
ನನ್ನ ಜೀವದ ಹುಡುಗ
‘ನೀನೆಷ್ಟು ಮುಗುದೆ’
ಎಂದು ವಿಷಾದದಿಂದ ನಕ್ಕ.

ಆವತ್ತೆ ನನಗೆ ಗೊತ್ತಾಯಿತು,
ಈ ಜಗತ್ತಿನಲ್ಲಿರುವುದು
ಕೊಳೆತ ಹೃದಯಗಳು ಮಾತ್ರ.
ಈ ಜಗತ್ತಿನಲ್ಲಿರುವುದು ಹುಳಿತ ಕಣ್ಣುಗಳು ಮಾತ್ರ.

ಅಂದಿನಿಂದಲೆ ನಾನು
ಎಲ್ಲರ ಬಳಿ ಕಣ್ಣೀರು
ಬೇಡಲು ಶುರುಮಾಡಿದೆ.
ಎಲ್ಲರ ಕನಸುಗಳನ್ನು
ಕುತೂಹಲಿಯಾಗಿ ನೋಡಿದೆ.

ನನ್ನೆದೆಯೊಳಗೆ
ಹರಳುಗಟ್ಟುತ್ತಿತ್ತು ದುಃಖ
ಬೆಟ್ಟವಾಗುತ್ತಿತ್ತು ದುಃಖ
ನಾನು ಎಲ್ಲರಿಗೂ ಕೂಗಿ ಹೇಳುತ್ತಿದ್ದೆ
ನೋಡಿ-
ಈ ಬೆಟ್ಟ ಕಣ್ಣೀರಿನದು
ನನ್ನದು ಹಾಗು ನಿಮ್ಮದು.

ಬೆಟ್ಟ ಕರಗಿ ಪ್ರವಾಹವಾಗಿ
ಹರಿಯುತ್ತಿತ್ತು ದುಃಖ.
ನಾನು ಎಲ್ಲರಿಗೂ ಕೂಗಿ ಹೇಳುತ್ತಿದ್ದೆ
ನೋಡಿ-
ಈ ಪ್ರವಾಹ ಕಣ್ಣೀರಿನದು, ನನ್ನದು ಹಾಗೂ ನಿಮ್ಮದು.

ಎಲ್ಲ ನಕ್ಕರು, ಹೊರಟೇ ಹೋದರು.
ನಾನೊಬ್ಬಳೆ ಆಗಿದ್ದೆ
ಜೊತೆಗೆ ಬೆಟ್ಟ-ಪ್ರವಾಹ.

ಕೊನೆಗೂ ನೆನಪಾಯಿತು
ಹೌದು
ಅದು ಅವನದೆ ಮುಖ.
ಅದು ಕೇಳುತ್ತಿತ್ತು
ಕೊಡು ನಿನ್ನ ದುಃಖ
ಕೊಡು ನಿನ್ನ ದುಃಖ.


Tagged:

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...