ಭಾಗ್ಯನಗರ

ಈ ಚೌಕಾಂಬದಲಿ ನಿಂತು ಕೇಳುವೆನು ನಾನು
ಭಾಗ್ಯ ನಗರವೇ ನಿನ್ನೆ ಭಾಗ್ಯದ ಬಾಗಿಲೆಲ್ಲಿ?
ಇಷ್ಟೆತ್ತರದಿಂದ ಕಾಣಿಸುವುದೇನು-ಜನರು
ಇರುವೆಗಳಂತೆ, ಟ್ರಕ್ಕುಗಳು, ಬಸ್ಸುಗಳು
ಎತ್ತಿನಗಾಡಿಗಳು, ತಲೆಹೊರೆಯ ಮೂಟೆಗಳು
ಯಾರೋ ಆಡುತ್ತಿರುವ ಆಟಿಕೆಗಳಂತೆ
ಮನುಷ್ಯರ ಮಾತುಗಳು ಗೊಂದಲದಂತೆ

ಗಾರೆಯಲಿ ಬರೆದ ಈ ಹೆಸರುಗಳು
ಯಾರವೆಂದು ಹೇಳುವುದು ಹೇಗೆ ?
ಚರಿತ್ರೆಯಲ್ಲಿ ಬರೆದಂತೆ ಬರೆದಿದ್ದಾರೆ ಇಲ್ಲಿ
ಹೆಣ್ಣುಗಂಡುಗಳು ಪ್ರವಾಸಿಗಳು ಪ್ರಣಯಿಗಳು
ಈ ಸುತ್ತು ಮೆಟ್ಟಲುಗಳನೊಂದೊಂದೆ
ಏರಿ ಬಂದವರು ಕಿಂಡಿಗಳ ಬಳಿ ನಿಂತು
ಮೂಸಿ-ಗೊಲ್ಕೊಂಡ-ಫಲಕ್‌ನುಮಾದ
ಮೇಲಿಂದ ಬೀಸಿ ಬರುವ ಗಾಳಿಗೆ ತೆರೆದು
ಮಾಯಾ ಪಕ್ಷಿಗಳಂತೆ ಮಾಯವಾದವರು
ಏನ ಬಿಟ್ಟರು ಏನ ಕೊಂಡೊಯ್ದರು

ಮಾರ್ಗಗಳು ಹೊರಟು ಊರುಗಳ ಸೇರಿದುವು
ಮಿನಾರಗಳ ನೆರಳು ಬಿದ್ದು ಬೆಳೆದುವು
ಅವು ಕೋಟೆಕೊತ್ತಲಗಳ ರೂಪು ತಳೆದುವು
ಅದೊ ಬುರುಜು! ಅದೊ ಸೇನೆ! ಅದೊ
ತೋಫಖಾನೆ! ಅದೋ ಅಂತಃಪುರದಿ೦ದ
ಹೊರಟ ಮೇನೆ! ಜಾಗಟೆಯ ಧ್ವನಿಯೊ
ನಮಾಜಿನ ಕರೆಯೊ ಕಾಳಗದ ಕಹಳೆಯೊ
ಕಂಡರೂ ಕಾಣಿಸದು ಕೇಳಿದರೂ ಕೇಳಿಸದು
ಸಂಜೆಯ ಮಬ್ಬಿನಲಿ ನನ್ನ ಜತೆ ಯಾರಿಲ್ಲ
ನನ್ನ ಹೊರತು ಯಾರೂ ಇರದಲ್ಲಿ? ಆಹ್!

ಯಾರ ಭಾಗದ ಭಾಗ್ಯ! ಭಾಗ್ಯಮತಿಯೇ
ಇನ್ನೂ ಇಲ್ಲೇಕೆ ಕುಳಿತಿರುವೆ ನೀನು?
ನಾಟ್ಯ ಮುಗಿಯಿತು, ದರಬಾರು ಮುಗಿಯಿತು
ಸುಲ್ತಾನನೂ ಹೊರಟು ಹೋದನು ಅರಮನೆಗೆ
ನಗರದ ದೀಪಗಳು ಒಂದೊಂದೆ ಆರಿಹೋಗಿವೆ
ಕತ್ತಲು ಬಂದು ಮಿನಾರಗಳನ್ನು ಮುತ್ತಿವೆ
ತಿಂಗಳಿನ್ನೂ ಮೂಡಿರದ ಹೊತ್ತು ಹೊಳೆಯುವುದು
ಮಾತ್ರ ನನ್ನ ಮೂಗಿನ ನತ್ತು ಬೆಳ್ಳಿ ನಕ್ಷತ್ರ –
ದಂತೆ ನರ್ತಿಸಿ ಆಯಾಸಗೊಂಡವಳೆ ನನ್ನ
ಕಲ್ಪನೆಯಲ್ಲಿ ಬಂದು ಇಡಿಯಾಗಿ ನಿಲ್ಲು
ನಿನ್ನ ಪ್ರೀತಿಯ ಬೆಳಕ ಚೆಲ್ಲು
ನಿನ್ನ ಹೆಸರನೆ ಹೊತ್ತ ನಗರದ ಮೇಲೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊದಮೊದಲು
Next post ಪ್ರಪಾತ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…