ಹೊಣೆ

ಈಗೀಗ ಅವಳು
ನಾಚಿಕೊಳ್ಳುವುದಿಲ್ಲ
ಮೊದಲಿನಂತೆ
ನೀರಾಗುವುದಂತೂ
ದೂರದ ಮಾತೇ ಸರಿ

ಮೂಗುತಿಯ ನತ್ತು
ಅವಳೀಗೀಗ ಭಾರವೆನಿಸುತ್ತಿಲ್ಲ
ಮುಂಗುರುಳು ನಲಿದು
ಮುತ್ತಿಕ್ಕುವುದಿಲ್ಲ
ಗಲ್ಲಗಳ ಚುಂಬಿಸಿ

ಅವಳ ನುಡಿಯಲ್ಲಿ
ಅಂದಿನ ಹುಡುಗಾಟವಿಲ್ಲ
ಕಣ್ಣುಗಳಲ್ಲಿ ಆಗೀನ
ಚಂಚಲತೆಯಿಲ್ಲ
ನೆಟ್ಟ ನೋಟ
ಸ್ಪಷ್ಟ ದಿಕ್ಕಿನತ್ತ
ಹೆಪ್ಪುಗಟ್ಟಿದಂತಿದೆ
ಹೆತ್ತ ಬೀಜಗಳ ಚಿತ್ರವೇ
ಮನ ಭಿತ್ತಿಯಲ್ಲಿ ಅಚ್ಚೊತ್ತಿದೆ

ಅವಳ ಮನ ಮೊಗ್ಗಿನಂತೆ
ಅರಳುವುದಿಲ್ಲ
ಕ್ಷಣ ಭಂಗುರ ಸಂಭ್ರಮಕ್ಕೆ
ಹಿಂದಿನಂತೆ
ಮುಖಮುದ್ರೆ

ಗಾಂಭೀರ್ಯದ ಅಚ್ಚು
ಹಾಕಿದಂತಿದೆ
ಗಡಸುತನ ಗಟ್ಟಿಯಾಗುತ್ತಿದೆ
ಮಾಗಿದಂತೆ ಪ್ರಾಯ
ಬೆಚ್ಚಗಿನ ಬದುಕಿನ
ಹಂಬಲಿಕೆ ಈಗ
ಕನಸಲ್ಲೂ ಇಲ್ಲ

ಬದಲಿಗೆ ಬರುವ
ದಿನಗಳದ್ದೆ ಚಿಂತೆ
ಹೇಗೆ ಕಟ್ಟುವುದು ಸರೀಕರೊಡನೆ
ಸಮಬದುಕು ಎಂಬಂತೆ

ಎಂತಹ ವೈಚಿತ್ರ್‍ಯ ನೋಡಿ
ಒಂದು ಹಡೆದರೆ ಸಾಕು
ಹುಡುಗಿ ಹೆಣ್ಣಾಗಿ ಹೊಣೆಗಾರ್ತಿಯಾಗಲಿಕೆ
ಹೆಂಗಸಾಗಿ ಗಡಸುಗಾರ್ತಿಯಾಗಲಿಕೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗುತ ಬಂದಿತು
Next post ತಾರನಾಕದ ಚೌಕ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…