ಹೊಣೆ

ಈಗೀಗ ಅವಳು
ನಾಚಿಕೊಳ್ಳುವುದಿಲ್ಲ
ಮೊದಲಿನಂತೆ
ನೀರಾಗುವುದಂತೂ
ದೂರದ ಮಾತೇ ಸರಿ

ಮೂಗುತಿಯ ನತ್ತು
ಅವಳೀಗೀಗ ಭಾರವೆನಿಸುತ್ತಿಲ್ಲ
ಮುಂಗುರುಳು ನಲಿದು
ಮುತ್ತಿಕ್ಕುವುದಿಲ್ಲ
ಗಲ್ಲಗಳ ಚುಂಬಿಸಿ

ಅವಳ ನುಡಿಯಲ್ಲಿ
ಅಂದಿನ ಹುಡುಗಾಟವಿಲ್ಲ
ಕಣ್ಣುಗಳಲ್ಲಿ ಆಗೀನ
ಚಂಚಲತೆಯಿಲ್ಲ
ನೆಟ್ಟ ನೋಟ
ಸ್ಪಷ್ಟ ದಿಕ್ಕಿನತ್ತ
ಹೆಪ್ಪುಗಟ್ಟಿದಂತಿದೆ
ಹೆತ್ತ ಬೀಜಗಳ ಚಿತ್ರವೇ
ಮನ ಭಿತ್ತಿಯಲ್ಲಿ ಅಚ್ಚೊತ್ತಿದೆ

ಅವಳ ಮನ ಮೊಗ್ಗಿನಂತೆ
ಅರಳುವುದಿಲ್ಲ
ಕ್ಷಣ ಭಂಗುರ ಸಂಭ್ರಮಕ್ಕೆ
ಹಿಂದಿನಂತೆ
ಮುಖಮುದ್ರೆ

ಗಾಂಭೀರ್ಯದ ಅಚ್ಚು
ಹಾಕಿದಂತಿದೆ
ಗಡಸುತನ ಗಟ್ಟಿಯಾಗುತ್ತಿದೆ
ಮಾಗಿದಂತೆ ಪ್ರಾಯ
ಬೆಚ್ಚಗಿನ ಬದುಕಿನ
ಹಂಬಲಿಕೆ ಈಗ
ಕನಸಲ್ಲೂ ಇಲ್ಲ

ಬದಲಿಗೆ ಬರುವ
ದಿನಗಳದ್ದೆ ಚಿಂತೆ
ಹೇಗೆ ಕಟ್ಟುವುದು ಸರೀಕರೊಡನೆ
ಸಮಬದುಕು ಎಂಬಂತೆ

ಎಂತಹ ವೈಚಿತ್ರ್‍ಯ ನೋಡಿ
ಒಂದು ಹಡೆದರೆ ಸಾಕು
ಹುಡುಗಿ ಹೆಣ್ಣಾಗಿ ಹೊಣೆಗಾರ್ತಿಯಾಗಲಿಕೆ
ಹೆಂಗಸಾಗಿ ಗಡಸುಗಾರ್ತಿಯಾಗಲಿಕೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗುತ ಬಂದಿತು
Next post ತಾರನಾಕದ ಚೌಕ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…