Home / ಕವನ / ಕವಿತೆ / ಹೊಣೆ

ಹೊಣೆ

ಈಗೀಗ ಅವಳು
ನಾಚಿಕೊಳ್ಳುವುದಿಲ್ಲ
ಮೊದಲಿನಂತೆ
ನೀರಾಗುವುದಂತೂ
ದೂರದ ಮಾತೇ ಸರಿ

ಮೂಗುತಿಯ ನತ್ತು
ಅವಳೀಗೀಗ ಭಾರವೆನಿಸುತ್ತಿಲ್ಲ
ಮುಂಗುರುಳು ನಲಿದು
ಮುತ್ತಿಕ್ಕುವುದಿಲ್ಲ
ಗಲ್ಲಗಳ ಚುಂಬಿಸಿ

ಅವಳ ನುಡಿಯಲ್ಲಿ
ಅಂದಿನ ಹುಡುಗಾಟವಿಲ್ಲ
ಕಣ್ಣುಗಳಲ್ಲಿ ಆಗೀನ
ಚಂಚಲತೆಯಿಲ್ಲ
ನೆಟ್ಟ ನೋಟ
ಸ್ಪಷ್ಟ ದಿಕ್ಕಿನತ್ತ
ಹೆಪ್ಪುಗಟ್ಟಿದಂತಿದೆ
ಹೆತ್ತ ಬೀಜಗಳ ಚಿತ್ರವೇ
ಮನ ಭಿತ್ತಿಯಲ್ಲಿ ಅಚ್ಚೊತ್ತಿದೆ

ಅವಳ ಮನ ಮೊಗ್ಗಿನಂತೆ
ಅರಳುವುದಿಲ್ಲ
ಕ್ಷಣ ಭಂಗುರ ಸಂಭ್ರಮಕ್ಕೆ
ಹಿಂದಿನಂತೆ
ಮುಖಮುದ್ರೆ

ಗಾಂಭೀರ್ಯದ ಅಚ್ಚು
ಹಾಕಿದಂತಿದೆ
ಗಡಸುತನ ಗಟ್ಟಿಯಾಗುತ್ತಿದೆ
ಮಾಗಿದಂತೆ ಪ್ರಾಯ
ಬೆಚ್ಚಗಿನ ಬದುಕಿನ
ಹಂಬಲಿಕೆ ಈಗ
ಕನಸಲ್ಲೂ ಇಲ್ಲ

ಬದಲಿಗೆ ಬರುವ
ದಿನಗಳದ್ದೆ ಚಿಂತೆ
ಹೇಗೆ ಕಟ್ಟುವುದು ಸರೀಕರೊಡನೆ
ಸಮಬದುಕು ಎಂಬಂತೆ

ಎಂತಹ ವೈಚಿತ್ರ್‍ಯ ನೋಡಿ
ಒಂದು ಹಡೆದರೆ ಸಾಕು
ಹುಡುಗಿ ಹೆಣ್ಣಾಗಿ ಹೊಣೆಗಾರ್ತಿಯಾಗಲಿಕೆ
ಹೆಂಗಸಾಗಿ ಗಡಸುಗಾರ್ತಿಯಾಗಲಿಕೆ
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...