ಸುಗ್ಗಿಯ ಸಂಭ್ರಮ

ಸುಗ್ಗಿಯ ಹಬ್ಬವು
ಬಂದಿದೆ ಅಣ್ಣ
ತಂದಿದೆ ಸಂಭ್ರಮ
ಸಗ್ಗದ ಬಣ್ಣ

ಹಾಲಕ್ಕಿ ಒಕ್ಕಲ ಕುಂಚವು ಕುಣಿದಿದೆ
ರೈತನ ಬವಣೆಯ ಕಾಲವು ಕರಗಿದೆ
ಖಾಲಿಯಾ ಕಿಸೆಯದು
ಝಣ-ಝಣ ಎಂದಿದೆ
ಬತ್ತದ ಕಣಜವು ಉಕ್ಕೆದ್ದು ಬಂದಿದೆ

ಮಾಮರದ ಸೆರಗಿನಲಿ
ಹೂ ಬಿಸಿಲ ವೈಯಾರ
ಕೋಕಿಲದ ಕುಕಿಲವು
ದುಂಬಿಗಳ ಝೇಂಕಾರ

ಮಲೆನಾಡ ಕಾಡು
ಹಸಿರಿನಾ ತೇರು
ಒತ್ತಾದ ಗಿಡಮರ
ಮುತ್ತಿನ ಸೇರು

ಸುಗ್ಗಿಯಾ ಮುಷ್ಟಿಯಲಿ
ಸೃಷ್ಟಿಯಿದು ಸತ್ಯದಲಿ
ಶಿವನ ಸೌಂದರ್ಯ ಸ್ಪೂರ್ತಿ
ಉಕ್ಕಿಸಿದೆ ಭೂ ವ್ಯೋಮಗಳಲ್ಲಿ

ಹಬ್ಬದ ಹರುಷ
ತುಂಬಿನ ಮನಸ
ಧರಿಸಿದೆ ಜಗವು
ಹಬ್ಬದ ದಿರಿಸ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಜಾನೆಯ ಹಗಲಲ್ಲಿ
Next post ಬಸ್ಸಿನಿಂದ ಇಳಿದವಳಿಗೆ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…