ಮುಂಜಾನೆಯ ಹಗಲಲ್ಲಿ

ಮುಂಜಾನೆಯ ಹಗಲಲ್ಲಿ
ಮಿಂದ ಬೆಳ್ಳಿ ನಾನಾಗಿ
ಹಸನಾದ ಬಾಳಿಗೆ
ಹೊಸತಾದ ಪ್ರೀತಿ
ತುಂಬಿದ ಭಾಸ್ಕರ ನೀನಾಗಿ ||

ಋತು ಚಕ್ರಧಾರೆ ಹೊನಲಲ್ಲಿ
ಓಕುಳಿ ಚೆಲ್ಲಿದ
ವಸಂತ ನೀನಾಗಿ
ನಿನ್ನಲಿ ಬೆರೆತ ಮನವು
ತಂಪನೊಸೆದ ಪ್ರಕೃತಿ ನಾನಾಗಿ ||

ಹೊಂಬೆಳಕ ಸಂಜೆಯಲಿ
ಮೇಘದಲೆ ಚಿತ್ತಾರ ಬಿಡಿಸಿ
ಅನಂತ ನೀನಾಗಿ
ರೂಪ ಮಾಲಿಕೆಯ ಬಣ್ಣಹೊಯ್ದ
ಸ್ವರೂಪ ನಾನಾಗಿ ||

ಹುಣ್ಣಿಮೆಯ ರಾತ್ರಿಯಲಿ
ಚಂದ್ರಮನ ಬೆಳಕಲಿ ಬೀಸುವ
ತಂಗಾಳಿ ನೀನಾಗಿ
ಹಸಿರಾದ ಒಡಲಲಿ ಹಸನಾದ ಒಲುಮೆಯ
ಇಬ್ಬನಿ ನಾನಾಗಿ ||

ಮೂಡಣದಾ ಭಾಸ್ಕರ
ನಿನ್ನಲಿ ನಾನಿ ಕಿರಣವಾಗಿ
ಬೆಳ್ಳಿ ನಾನಾಗಿ ಭಾಸ್ಕರ ನೀನಾಗಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಕಿ
Next post ಸುಗ್ಗಿಯ ಸಂಭ್ರಮ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…