ಮುಂಜಾನೆಯ ಹಗಲಲ್ಲಿ

ಮುಂಜಾನೆಯ ಹಗಲಲ್ಲಿ
ಮಿಂದ ಬೆಳ್ಳಿ ನಾನಾಗಿ
ಹಸನಾದ ಬಾಳಿಗೆ
ಹೊಸತಾದ ಪ್ರೀತಿ
ತುಂಬಿದ ಭಾಸ್ಕರ ನೀನಾಗಿ ||

ಋತು ಚಕ್ರಧಾರೆ ಹೊನಲಲ್ಲಿ
ಓಕುಳಿ ಚೆಲ್ಲಿದ
ವಸಂತ ನೀನಾಗಿ
ನಿನ್ನಲಿ ಬೆರೆತ ಮನವು
ತಂಪನೊಸೆದ ಪ್ರಕೃತಿ ನಾನಾಗಿ ||

ಹೊಂಬೆಳಕ ಸಂಜೆಯಲಿ
ಮೇಘದಲೆ ಚಿತ್ತಾರ ಬಿಡಿಸಿ
ಅನಂತ ನೀನಾಗಿ
ರೂಪ ಮಾಲಿಕೆಯ ಬಣ್ಣಹೊಯ್ದ
ಸ್ವರೂಪ ನಾನಾಗಿ ||

ಹುಣ್ಣಿಮೆಯ ರಾತ್ರಿಯಲಿ
ಚಂದ್ರಮನ ಬೆಳಕಲಿ ಬೀಸುವ
ತಂಗಾಳಿ ನೀನಾಗಿ
ಹಸಿರಾದ ಒಡಲಲಿ ಹಸನಾದ ಒಲುಮೆಯ
ಇಬ್ಬನಿ ನಾನಾಗಿ ||

ಮೂಡಣದಾ ಭಾಸ್ಕರ
ನಿನ್ನಲಿ ನಾನಿ ಕಿರಣವಾಗಿ
ಬೆಳ್ಳಿ ನಾನಾಗಿ ಭಾಸ್ಕರ ನೀನಾಗಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಕಿ
Next post ಸುಗ್ಗಿಯ ಸಂಭ್ರಮ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…