Home / ಲೇಖನ / ವಿಜ್ಞಾನ / ಮೂಗಿನ ಮಹತ್ವ ಮತ್ತು ಮೂಗಿನ ಚಮತ್ಕಾರ!

ಮೂಗಿನ ಮಹತ್ವ ಮತ್ತು ಮೂಗಿನ ಚಮತ್ಕಾರ!

ಮೂಗು ಮನುಷ್ಯನ ಪಂಚೇಂದ್ರಿಯಗಳಲ್ಲಿ ಒಂದು ಪ್ರಮುಖವಾದ ಅಂಗ. ಈ ಮೂಗು ಮೂಸುವ ಶಕ್ತಿಯಿಂದ ಹೆಸರಾಗಿದೆ. ಮೂಗಿನಿಂದಲೇ ಸುವಾಸನೆಯ ಪ್ರಭಾವವನ್ನು ಕಂಡು ಹಿಡಿಯಬಹುಡು. ಕೆಲರೋಗಗಳನ್ನು ಮೂಗಿನಿಂದ ಹೀರಿದ ಸುವಾಸನೆಯಿಂದಲೇ ಸರಿಪಡಿಸಬಹುದು. ಅಲ್ಲದೇ ಈ ವಾಸನೆಯಿಂದಲೇ ದೇಹದ ಸ್ಥಿತಿಯನ್ನೇ ಬದಲಾಯಿಸಬಹುದು. ಬೇಸರವನ್ನು ಹೋಗಲಾಡಿಸಿ ಉತ್ಸಾಹ ಭರಿಸಬಹುದು ಸೆಕೆಯ ಚಡಪಡಿಕೆಯನ್ನು ದೂರಗೊಳಿಸಿ ತಂಪಿನ ಅನುಭವವುಂಟು ಮಾಡಬಹುದು. ಒಂದು ಅನಿಲವನ್ನು ಮೂಸಿ ನಗುವಂತೆ ಮಾಡಬಹುದು. ಈರುಳ್ಳಿ ರಸ ಮೂಸಿ ಕಣ್ಣಲ್ಲಿ ನೀರು ಬರುವಂತೆ ಮಾಡಬಹುದು, ಕ್ಲೋರೋಫಾರಮ್‌ ಮೂಸಿ ಶಸ್ತ್ರ ಚಿಕಿತ್ಸೆಯ ನೋವೆ ಆಗದಂತೆ ಮಾಡಿಕೊಳ್ಳಲೂಬಹುದು. ಅಶ್ರುವಾಯುವಿನ ಮೂಲಕ ಮನುಶ್ಯರನ್ನು ಅಳಿಸಲೂಬಹುದು. ಕೊಳೆತ ವಸ್ತುವಿನ ದುರ್ನಾತದಿಂದ (ವಾಸನೆಯಿಂದ) ಗಬ್ಬೆಂದು ದೂರ ಹೋಗಬಹುದು. ಈ ರೀತಿ ಅನೇಕ ವಾಸನೆಗಳನ್ನು ಗ್ರಹಿಸುವ ಮೂಗಿನ ಮಹತ್ವ ಮನುಷ್ಯನ ಬದುಕಲಿ ಅತ್ಯವಶ್ಯಕವಾಗಿದೆ. ಮೂಗೇ ಇಲ್ಲದಿದ್ದರೆ ಸುವಾಸನೆ, ಅಥವಾ ದುರ್ವಾಸನೆಗಳನ್ನರಿದೇ ಮೂಗನಾಗಿ, ಕೊರಡಾಗಬಹುದುಲ್ಲವೆ? ಒಂದು ವೇಳೆ ಮೂಗಿನಿಂದ ಈ ಯಾವ ವಾಸನೆಗಳನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೂಂಡ ಮನುಷ್ಯರಿಗೆಂದೇ ವಾಸನೆಗಳನ್ನು ಗ್ರಹಿಸುವ ಕೃತಕ ಮೂಗನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ.

ಈ ಮೂಗಿಗೆ “ಸೈರೊನೋಸ್ ೨೦೦೦” ಎಂದು ಹೆಸರಿಟ್ಟಿದೆ. ಇದಕ್ಕೆ ‘ಈನೋಸ್’ ಎಂದೂ ಕೂಡ ಕರೆಯಲಾಗುತ್ತದೆ. ಒಬ್ಬ ಆರೋಗ್ಯವಂತನ ಮೂಗು ೬೫೦ ವಿಧದ ವಾಸನೆಗಳನ್ನು ಗುರುತಿಸಬಲ್ಲದೆಂದು ಮೂಗಿನ ತಜ್ಞರು ಹೇಳುತ್ತಾರೆ. ಈ ಕೃತಕ ಮೂಗಿನ ಸಾಮರ್ಥ್ಯ ಅಷ್ಟಿಲ್ಲದಿದ್ದರೂ ಮುಂದೆ ಇದನ್ನು ಅಭಿವೃದ್ಧಿಪಡಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಇದರ ಬೆಲೆ ೮ ಸಾವಿರ ಡಾಲರ್ ಇದೆ. ಈ ಕೃತಕ ಮೂಗು ಇದ್ದವರಿಗೆ ಉಪಕಾರಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏಕೆಂದರೆ ಇದು ರೋಗಗಳನ್ನು ಮೂಸಬಲ್ಲದು. ಇದನ್ನು ಇಂಗ್ಗೆಂಡ್ ಓಸ್ಮೆಟಿಕ್ ಕಂಪನಿ ತಯಾರಿಸಿದೆ. ಇದು ವಿಷಾಣುಗಳನ್ನು ಗುರುತಿಸಿ ಯಾವುದರಿಂದ ಕಾಯಿಲೆ ಬರುತ್ತದೆಂದು ಕಂಡು ಹಿಡಿದು ಯಾವ ಔಷಧಿಗಳಿಂದ ಗುಣಪಡಿಸಬಹುದೆಂದು ತಿಳಿಸುತ್ತದೆ. (ಸೂಚಿಸುತ್ತದೆ)

ಮುಂದೊಂದು ದಿನ ಇದರ ಬೆಲೆಯಲ್ಲಿ ಇಳಿಕೆಯಾದರೆ ಸಾಮಾನ್ಯ ಜನರೂ ಇದನ್ನು ಉಪಯೋಗಿಸಬಹುದು. ಆಗ ಯಾವ ದಾರಿಯಲ್ಲಿ ಸಾಗಬಹುದು, ಎಲ್ಲಿ ದುರ್ವಾಸನೆ ಇದೆ ಯಾವ ಹೋಟೆಲಿನ ಆಹಾರ ದೇಹಕ್ಕೆ ಒಗ್ಗಲಾರದು. ಯಾವ ತೋಟದ ಹೂವು ಮನಸ್ಸಿಗೆ ಅಲ್ಹಾದಕರ ಎಂಬ ಎಲ್ಲ ಮಾಹಿತಿಗಳು ಈ ಮೂಗು ಹೊಂದುವವರಿಗೆ ತಿಳಿಯಬಹುದು. ಸಹಜ ಮೂಗಿನಂತೆ ಬಳಸಿ ಇದೆಲ್ಲವನ್ನು ತಿಳಿಯಬಹುದು. ಇದು ಇನ್ನು ಬಹಳ ಆವಿಪ್ಕಾರ ಹೊಂದಬೇಕಿದೆ ಅಲ್ಲಿಯವರೆಗೆ ಆಕಾಂಕ್ಷಿಗಳು ಕಾಯಬೇಕಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...