Home / ಕವನ / ಕವಿತೆ / ಬೂಟ್ ಪಾಲಿಶ್ ಹುಡುಗನ ಜೋಳಿಗೆ

ಬೂಟ್ ಪಾಲಿಶ್ ಹುಡುಗನ ಜೋಳಿಗೆ

ಮತ್ತೇನಿಲ್ಲ ಅಲ್ಲಿ ಒಂದು ಬ್ರಷು
ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ
ಕರಿ ಮಸಿಯ ಚಿತ್ತಾರ
ತೊಟ್ಟಂಗಿಯ ಸುತ್ತ

ತಂಡಿ ಅಡರಿದ ಕೆಟ್ಟ
ಮುಂಜಾನೆಯಿರಲಿ
ಜಿಟಿಜಿಟಿ ಮಳೆಯ ಜಿಗುಟು
ಪ್ರಾತಃಕಾಲವೇ ಬರಲಿ
ಉರಿ ಬಿದ್ದ ಬೇಸಿಗೆಯ
ಬಿಸಿ ಬೆಳಗೆ ಆಗಲಿ
ತಟ್ಟಿ ಎಚ್ಚರಿಸೆ ಪುಟ್ಟ ದೇಹದ
ಆ ದಿಟ್ಟ ಬಾಲಕ ಪಟಕ್ಕನೆ
ಎದ್ದು ಬಿಡುವ ದಿನದ ಕಾಯಕಕೆ

ಮನ ಮುದುಡಿರುವಾಗ
ಆ ಕೈಗಳೂ ಮಾತ್ರ ಎಡರಿಲ್ಲದೇ
ಕುಣಿಯತ್ತವೆ ಆಕಾರಕ್ಕೆ ತಕ್ಕಂತೆ
ಕೈಲಿಡಿದ ಚಪ್ಪಲಿಗೆ
ಹೊಳಪು ನೀಡುವ ಕ್ರಿಯೆಗೆ
ಹಸನು ಬಾಳಿನ ಕನಸು
ಕಣ್ಣಾಲಿಯ ಕೊನೆಯಲ್ಲಿ
ಮತ್ತೆ ಹೆಗಲ ಹೊರೆ
ಹೊಣೆಗಾರಿಕೆಯ ಕಟ್ಟು

ಪಾಟಿ ಚೀಲದ ಹುಡುಗ
ಕಣ್ಮುಂದೆ ಸರಿದರೂ ಸಾಕು
ಅತ್ತಲೇ ಕೀಲಿಸಿದ ನೋಟ
ಮತ್ತೆ ಸದ್ದಿಲ್ಲದೇ ತೊಯ್ದ
ಕಣ್ಣ ಕೆಳಗಿನ ಗಲ್ಲ
ಮಸಿಗೊಂಡ ಮೃದು ಹಸ್ತಗಳು
ಹಪಾಹಪಿಸುತ್ತಿವೆ ಹಿಡಿಯಲು
ಹೊತ್ತಿಗೆಯ

ಹಗೆತ್ತಮ್ಮ ಜೊತೆಗೂಡಿ
ಹೆಜ್ಜೆಯಿಡುವುದು ಆಸೆ
ಗೆಳೆಯರೊಂದಿಗೆ ಸೇರಿ
ಚೆಂಡಾಡುವುದು ಆಸೆ

ಆದರೆ,
ಮಸಿಕೊಂಡರಷ್ಟೆ ಆ ಕೈಗಳು
ತುಂಬುವುದು ಒಡಲು
ಹೆತ್ತವರು ಅಳಲು

ಎಂತಲೇ
ಆಸೆಯೆಂಬ ಬುಟ್ಟಿಗೆ
ಬಟ್ಟೆಯ ಕಟ್ಟಿ
ಮುಚ್ಚಿಡುವ ಮುಗುದನ
ಅದೇ ಕೈಗಳು
ಜೋತು ಬೀಳುತ್ತಿವೆ
ಅದೇ ಕಾಯಕಕೆ ಹೊರತಿಲ್ಲದೇ

ಟಾಕು ಟೀಕಾದ ಸೂಟುಧಾರಿಯ
ಬೂಟು ಮಿರಿಮಿರಿ ಮಿಂಚಿದಷ್ಟು
ಆಸೆಗಂಗಳ ಆ ಹುಡುಗ
ಕರಿಕೈಯ ಚಾಚುತ್ತಾನೆ
ಎರಡು ರೂಪಾಯಿ ನೋಟಿಗಾಗಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...