Home / ಕವನ / ಕವಿತೆ / ಬೂಟ್ ಪಾಲಿಶ್ ಹುಡುಗನ ಜೋಳಿಗೆ

ಬೂಟ್ ಪಾಲಿಶ್ ಹುಡುಗನ ಜೋಳಿಗೆ

ಮತ್ತೇನಿಲ್ಲ ಅಲ್ಲಿ ಒಂದು ಬ್ರಷು
ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ
ಕರಿ ಮಸಿಯ ಚಿತ್ತಾರ
ತೊಟ್ಟಂಗಿಯ ಸುತ್ತ

ತಂಡಿ ಅಡರಿದ ಕೆಟ್ಟ
ಮುಂಜಾನೆಯಿರಲಿ
ಜಿಟಿಜಿಟಿ ಮಳೆಯ ಜಿಗುಟು
ಪ್ರಾತಃಕಾಲವೇ ಬರಲಿ
ಉರಿ ಬಿದ್ದ ಬೇಸಿಗೆಯ
ಬಿಸಿ ಬೆಳಗೆ ಆಗಲಿ
ತಟ್ಟಿ ಎಚ್ಚರಿಸೆ ಪುಟ್ಟ ದೇಹದ
ಆ ದಿಟ್ಟ ಬಾಲಕ ಪಟಕ್ಕನೆ
ಎದ್ದು ಬಿಡುವ ದಿನದ ಕಾಯಕಕೆ

ಮನ ಮುದುಡಿರುವಾಗ
ಆ ಕೈಗಳೂ ಮಾತ್ರ ಎಡರಿಲ್ಲದೇ
ಕುಣಿಯತ್ತವೆ ಆಕಾರಕ್ಕೆ ತಕ್ಕಂತೆ
ಕೈಲಿಡಿದ ಚಪ್ಪಲಿಗೆ
ಹೊಳಪು ನೀಡುವ ಕ್ರಿಯೆಗೆ
ಹಸನು ಬಾಳಿನ ಕನಸು
ಕಣ್ಣಾಲಿಯ ಕೊನೆಯಲ್ಲಿ
ಮತ್ತೆ ಹೆಗಲ ಹೊರೆ
ಹೊಣೆಗಾರಿಕೆಯ ಕಟ್ಟು

ಪಾಟಿ ಚೀಲದ ಹುಡುಗ
ಕಣ್ಮುಂದೆ ಸರಿದರೂ ಸಾಕು
ಅತ್ತಲೇ ಕೀಲಿಸಿದ ನೋಟ
ಮತ್ತೆ ಸದ್ದಿಲ್ಲದೇ ತೊಯ್ದ
ಕಣ್ಣ ಕೆಳಗಿನ ಗಲ್ಲ
ಮಸಿಗೊಂಡ ಮೃದು ಹಸ್ತಗಳು
ಹಪಾಹಪಿಸುತ್ತಿವೆ ಹಿಡಿಯಲು
ಹೊತ್ತಿಗೆಯ

ಹಗೆತ್ತಮ್ಮ ಜೊತೆಗೂಡಿ
ಹೆಜ್ಜೆಯಿಡುವುದು ಆಸೆ
ಗೆಳೆಯರೊಂದಿಗೆ ಸೇರಿ
ಚೆಂಡಾಡುವುದು ಆಸೆ

ಆದರೆ,
ಮಸಿಕೊಂಡರಷ್ಟೆ ಆ ಕೈಗಳು
ತುಂಬುವುದು ಒಡಲು
ಹೆತ್ತವರು ಅಳಲು

ಎಂತಲೇ
ಆಸೆಯೆಂಬ ಬುಟ್ಟಿಗೆ
ಬಟ್ಟೆಯ ಕಟ್ಟಿ
ಮುಚ್ಚಿಡುವ ಮುಗುದನ
ಅದೇ ಕೈಗಳು
ಜೋತು ಬೀಳುತ್ತಿವೆ
ಅದೇ ಕಾಯಕಕೆ ಹೊರತಿಲ್ಲದೇ

ಟಾಕು ಟೀಕಾದ ಸೂಟುಧಾರಿಯ
ಬೂಟು ಮಿರಿಮಿರಿ ಮಿಂಚಿದಷ್ಟು
ಆಸೆಗಂಗಳ ಆ ಹುಡುಗ
ಕರಿಕೈಯ ಚಾಚುತ್ತಾನೆ
ಎರಡು ರೂಪಾಯಿ ನೋಟಿಗಾಗಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...