ಬೂಟ್ ಪಾಲಿಶ್ ಹುಡುಗನ ಜೋಳಿಗೆ

ಮತ್ತೇನಿಲ್ಲ ಅಲ್ಲಿ ಒಂದು ಬ್ರಷು
ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ
ಕರಿ ಮಸಿಯ ಚಿತ್ತಾರ
ತೊಟ್ಟಂಗಿಯ ಸುತ್ತ

ತಂಡಿ ಅಡರಿದ ಕೆಟ್ಟ
ಮುಂಜಾನೆಯಿರಲಿ
ಜಿಟಿಜಿಟಿ ಮಳೆಯ ಜಿಗುಟು
ಪ್ರಾತಃಕಾಲವೇ ಬರಲಿ
ಉರಿ ಬಿದ್ದ ಬೇಸಿಗೆಯ
ಬಿಸಿ ಬೆಳಗೆ ಆಗಲಿ
ತಟ್ಟಿ ಎಚ್ಚರಿಸೆ ಪುಟ್ಟ ದೇಹದ
ಆ ದಿಟ್ಟ ಬಾಲಕ ಪಟಕ್ಕನೆ
ಎದ್ದು ಬಿಡುವ ದಿನದ ಕಾಯಕಕೆ

ಮನ ಮುದುಡಿರುವಾಗ
ಆ ಕೈಗಳೂ ಮಾತ್ರ ಎಡರಿಲ್ಲದೇ
ಕುಣಿಯತ್ತವೆ ಆಕಾರಕ್ಕೆ ತಕ್ಕಂತೆ
ಕೈಲಿಡಿದ ಚಪ್ಪಲಿಗೆ
ಹೊಳಪು ನೀಡುವ ಕ್ರಿಯೆಗೆ
ಹಸನು ಬಾಳಿನ ಕನಸು
ಕಣ್ಣಾಲಿಯ ಕೊನೆಯಲ್ಲಿ
ಮತ್ತೆ ಹೆಗಲ ಹೊರೆ
ಹೊಣೆಗಾರಿಕೆಯ ಕಟ್ಟು

ಪಾಟಿ ಚೀಲದ ಹುಡುಗ
ಕಣ್ಮುಂದೆ ಸರಿದರೂ ಸಾಕು
ಅತ್ತಲೇ ಕೀಲಿಸಿದ ನೋಟ
ಮತ್ತೆ ಸದ್ದಿಲ್ಲದೇ ತೊಯ್ದ
ಕಣ್ಣ ಕೆಳಗಿನ ಗಲ್ಲ
ಮಸಿಗೊಂಡ ಮೃದು ಹಸ್ತಗಳು
ಹಪಾಹಪಿಸುತ್ತಿವೆ ಹಿಡಿಯಲು
ಹೊತ್ತಿಗೆಯ

ಹಗೆತ್ತಮ್ಮ ಜೊತೆಗೂಡಿ
ಹೆಜ್ಜೆಯಿಡುವುದು ಆಸೆ
ಗೆಳೆಯರೊಂದಿಗೆ ಸೇರಿ
ಚೆಂಡಾಡುವುದು ಆಸೆ

ಆದರೆ,
ಮಸಿಕೊಂಡರಷ್ಟೆ ಆ ಕೈಗಳು
ತುಂಬುವುದು ಒಡಲು
ಹೆತ್ತವರು ಅಳಲು

ಎಂತಲೇ
ಆಸೆಯೆಂಬ ಬುಟ್ಟಿಗೆ
ಬಟ್ಟೆಯ ಕಟ್ಟಿ
ಮುಚ್ಚಿಡುವ ಮುಗುದನ
ಅದೇ ಕೈಗಳು
ಜೋತು ಬೀಳುತ್ತಿವೆ
ಅದೇ ಕಾಯಕಕೆ ಹೊರತಿಲ್ಲದೇ

ಟಾಕು ಟೀಕಾದ ಸೂಟುಧಾರಿಯ
ಬೂಟು ಮಿರಿಮಿರಿ ಮಿಂಚಿದಷ್ಟು
ಆಸೆಗಂಗಳ ಆ ಹುಡುಗ
ಕರಿಕೈಯ ಚಾಚುತ್ತಾನೆ
ಎರಡು ರೂಪಾಯಿ ನೋಟಿಗಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವನಾಲಹರಿ
Next post ಮಧ್ಯಂತರ ೧: ಮೈಖೆಲೇಂಜೆಲೊ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…