ಬೂಟ್ ಪಾಲಿಶ್ ಹುಡುಗನ ಜೋಳಿಗೆ

ಮತ್ತೇನಿಲ್ಲ ಅಲ್ಲಿ ಒಂದು ಬ್ರಷು
ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ
ಕರಿ ಮಸಿಯ ಚಿತ್ತಾರ
ತೊಟ್ಟಂಗಿಯ ಸುತ್ತ

ತಂಡಿ ಅಡರಿದ ಕೆಟ್ಟ
ಮುಂಜಾನೆಯಿರಲಿ
ಜಿಟಿಜಿಟಿ ಮಳೆಯ ಜಿಗುಟು
ಪ್ರಾತಃಕಾಲವೇ ಬರಲಿ
ಉರಿ ಬಿದ್ದ ಬೇಸಿಗೆಯ
ಬಿಸಿ ಬೆಳಗೆ ಆಗಲಿ
ತಟ್ಟಿ ಎಚ್ಚರಿಸೆ ಪುಟ್ಟ ದೇಹದ
ಆ ದಿಟ್ಟ ಬಾಲಕ ಪಟಕ್ಕನೆ
ಎದ್ದು ಬಿಡುವ ದಿನದ ಕಾಯಕಕೆ

ಮನ ಮುದುಡಿರುವಾಗ
ಆ ಕೈಗಳೂ ಮಾತ್ರ ಎಡರಿಲ್ಲದೇ
ಕುಣಿಯತ್ತವೆ ಆಕಾರಕ್ಕೆ ತಕ್ಕಂತೆ
ಕೈಲಿಡಿದ ಚಪ್ಪಲಿಗೆ
ಹೊಳಪು ನೀಡುವ ಕ್ರಿಯೆಗೆ
ಹಸನು ಬಾಳಿನ ಕನಸು
ಕಣ್ಣಾಲಿಯ ಕೊನೆಯಲ್ಲಿ
ಮತ್ತೆ ಹೆಗಲ ಹೊರೆ
ಹೊಣೆಗಾರಿಕೆಯ ಕಟ್ಟು

ಪಾಟಿ ಚೀಲದ ಹುಡುಗ
ಕಣ್ಮುಂದೆ ಸರಿದರೂ ಸಾಕು
ಅತ್ತಲೇ ಕೀಲಿಸಿದ ನೋಟ
ಮತ್ತೆ ಸದ್ದಿಲ್ಲದೇ ತೊಯ್ದ
ಕಣ್ಣ ಕೆಳಗಿನ ಗಲ್ಲ
ಮಸಿಗೊಂಡ ಮೃದು ಹಸ್ತಗಳು
ಹಪಾಹಪಿಸುತ್ತಿವೆ ಹಿಡಿಯಲು
ಹೊತ್ತಿಗೆಯ

ಹಗೆತ್ತಮ್ಮ ಜೊತೆಗೂಡಿ
ಹೆಜ್ಜೆಯಿಡುವುದು ಆಸೆ
ಗೆಳೆಯರೊಂದಿಗೆ ಸೇರಿ
ಚೆಂಡಾಡುವುದು ಆಸೆ

ಆದರೆ,
ಮಸಿಕೊಂಡರಷ್ಟೆ ಆ ಕೈಗಳು
ತುಂಬುವುದು ಒಡಲು
ಹೆತ್ತವರು ಅಳಲು

ಎಂತಲೇ
ಆಸೆಯೆಂಬ ಬುಟ್ಟಿಗೆ
ಬಟ್ಟೆಯ ಕಟ್ಟಿ
ಮುಚ್ಚಿಡುವ ಮುಗುದನ
ಅದೇ ಕೈಗಳು
ಜೋತು ಬೀಳುತ್ತಿವೆ
ಅದೇ ಕಾಯಕಕೆ ಹೊರತಿಲ್ಲದೇ

ಟಾಕು ಟೀಕಾದ ಸೂಟುಧಾರಿಯ
ಬೂಟು ಮಿರಿಮಿರಿ ಮಿಂಚಿದಷ್ಟು
ಆಸೆಗಂಗಳ ಆ ಹುಡುಗ
ಕರಿಕೈಯ ಚಾಚುತ್ತಾನೆ
ಎರಡು ರೂಪಾಯಿ ನೋಟಿಗಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವನಾಲಹರಿ
Next post ಮಧ್ಯಂತರ ೧: ಮೈಖೆಲೇಂಜೆಲೊ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys