ಮಧ್ಯಂತರ ೧: ಮೈಖೆಲೇಂಜೆಲೊ

ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? –
ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು
ಒಂಟಿಯಾಗಿ ಈ ಬೆಟ್ಟ ಸುತ್ತಿದವನು
ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು
ಅವುಗಳ ಮೈಯ ಮುಂಜಾನೆಯ ತಂಪು
ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ
ಕೈಯಲ್ಲಿ ಸ್ಪರ್ಶಿಸಿದವನು
ಆಹ! ಅದೆಂಥ ಸಂಗೀತ
ಎಲ್ಲರೂ ಮಲಗಿರುವ ಹೊತ್ತು,
ಸಮುದ್ರದೊಳಗಿಂದ ಬೀಸಿದ ಗಾಳಿ
ಹುಲ್ಲು ಹೂವುಗಳ ನಡುನಡುವೆ ಸುಳಿದು
ಎಬ್ಬಿಸುವುದೇನು ಕಚಗುಳಿ
ತಿಂಗಳ ಬೆಳಕು ನೀರಲಿ ಬಿದ್ದು
ತಳತಳಿಸುತಿರುವಾಗ
ಎಚ್ಚರಾದವರೆಷ್ಟು ಎದ್ದು ಕುಳಿತವರೆಷ್ಟು
ಮೈಖೆಲೇಂಜೆಲೊ ಹೇಳು ಎಲ್ಲ ತಿಳಿದವನು ನೀನು

ಶಬ್ದಗಳ ಹುಡುಕುತ್ತ ನಾನು
ಇಷ್ಟು ದೂರವು ಬಂದೆ
ಇನ್ನು ಇಲ್ಲಿಂದ ಮುಂದರಿಯಲಾರೆ–
ಮುಂದರಿಯದಿರಲಾರೆ ಎನ್ನುತ್ತಲೇ
ನಿನ್ನ ಗುರುತನು ಕಂಡೆ
ಶತಮಾನಗಳು ಕಳೆದುದು ನಿಜ
ಬಿಸಿಲು ಮಳೆಗಳು ಬಂದು ಹೋದುದು ನಿಜ
ಈ ಸಮುದ್ರವೂ ಮೊರೆಯಿತು
ಅದಷ್ಟೋ ಬಾರಿ
ಕಾದು ನಿನ್ನ ದಾರಿ-
ನನ್ನ ತೀರಗಳು ಬೇರೆ
ನನ್ನ ಮಳಲಿನ ಬಣ್ಣ ಬೇರೆ
ನನ್ನ ಶಿಲಾರೂಪಗಳು ಬೇರೆ
ಆದರೇನಾಯಿತು
ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು
ಕಾಲದಿಂದ ಕಾಲಕ್ಕೆ ದೇಶದಿಂದ ದೇಶಕ್ಕೆ
ಹರ್ಷ ಬದಲಾಗುವುದೆ
ಯಾರಲ್ಲೂ ಹೇಳದಂಥ ಸಂ-
ಘರ್ಷ ಬದಲಾಗುವುದೇ
ಅಹ! ಶಬ್ದಗಳ ಹುಡುಕುತ್ತಲೇ
ಕೇಳಿಸುವುದೇನು ಶಬ್ಧ!
ಅಂಬಿಗನ ಹಾಡೆ
ಕಮ್ಮಾರನ ಹೊಡೆತವೆ
ಅತಿ ನಸುಕಿಗೇ ಎದ್ದ
ಬೆಸ್ತನೊಬ್ಬನ ನಡೆತವೆ
ನನ್ನದೇ ಎದೆ ಬಡಿತದ
ಯಾವ ಶಬ್ದಗಳಲ್ಲಿ ಯಾವ ಅರ್ಥಗಳು
ಮೈಖೆಲೇಂಜೆಲೊ ಹೇಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೂಟ್ ಪಾಲಿಶ್ ಹುಡುಗನ ಜೋಳಿಗೆ
Next post ಮಲ್ಲಿಗೆ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…