ಅರಿದೆನು ನಿನ್ನ

ಅರಿಯೆ ನಾನು; ದಾರಿ ತೋರೊ ಗುರುವರ
ಊರೂರು ತಿರುಗಿ ಕಣ್ಣೀರ ಕರೆದೆನು
ಆರಾರ ಗುರುತನ ದೊರೆಯಲಿಲ್ಲೋ ಹರ
ವರಗುರು ನೀನೆಂದರಿದು ನಾ ಬಂದೆನು

ನಿನ್ನರವಿನ ಅನುಭವಾಂಮ್ರತವನು
ಎನ್ನ ಬಳಲಿದುದರಕ್ಕೆ ಬಡಿಸು
ನಿನ್ನುಳಿದು ಮುನ್ನು ನನಗಿನ್ನೇನು ?
ನೀ ನನ್ನ ಅಖಿಳ ಜೀವನವ ನಡೆಸು

ಎಲ್ಲಲ್ಲೂ ತಿರುಗಿದೆನು ನಿನ್ನರಿಯದೆ
ಆವಾವ ಪರಿಯಲಿ ನಾ ಕಾಡಿ ಬಂದೆನು
ಎಲ್ಲದೆಶೆಯೊಳು ನಿನ್ನ ನರಸುತ ಕರೆದೆ
ಹಲುಬುತಿರಲು ಹೃದಯ; ನಿನ್ನ ನಾ ಕಂಡೆನು

ನಾ ನಿನ್ನ ಕಂಡೆನೊ, ನೀ ಎನ್ನ ಕಂಡೆಯೋ ?
ನಿನ್ನ ದ್ಭುತ ಲೀಲೆ ವೈಚಿತ್ರ್ಯವೋ?
ನಾ ಸಿಲುಕಿದುದು ನಿನ್ನದೇ ಬಲೆಯೋ
ಓ ನಿನ್ನ ಚಕ್ರ ತಿಳಿಯಲಸದಳವೋ

ಹರ ನೀನು, ಹರಿ ನೀನು, ಎಲ್ಲ ನೀನು
ಆ ಅಲ್ಲಾ ಬುದ್ಧ, ಏಸು ನೀನೆ ನೀನು
ಒಡಕು ತೊಡಕಾಗಿರುವ ಜಗವಿದೇನು ?
ನಾನರಿದಿಹೆನು ಸರ್ವ ರೂಪಿಯೇ ನೀನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಮಿಷ
Next post ಮಿಶ್ಚೀಪೂ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…