ಅರಿದೆನು ನಿನ್ನ

ಅರಿಯೆ ನಾನು; ದಾರಿ ತೋರೊ ಗುರುವರ
ಊರೂರು ತಿರುಗಿ ಕಣ್ಣೀರ ಕರೆದೆನು
ಆರಾರ ಗುರುತನ ದೊರೆಯಲಿಲ್ಲೋ ಹರ
ವರಗುರು ನೀನೆಂದರಿದು ನಾ ಬಂದೆನು

ನಿನ್ನರವಿನ ಅನುಭವಾಂಮ್ರತವನು
ಎನ್ನ ಬಳಲಿದುದರಕ್ಕೆ ಬಡಿಸು
ನಿನ್ನುಳಿದು ಮುನ್ನು ನನಗಿನ್ನೇನು ?
ನೀ ನನ್ನ ಅಖಿಳ ಜೀವನವ ನಡೆಸು

ಎಲ್ಲಲ್ಲೂ ತಿರುಗಿದೆನು ನಿನ್ನರಿಯದೆ
ಆವಾವ ಪರಿಯಲಿ ನಾ ಕಾಡಿ ಬಂದೆನು
ಎಲ್ಲದೆಶೆಯೊಳು ನಿನ್ನ ನರಸುತ ಕರೆದೆ
ಹಲುಬುತಿರಲು ಹೃದಯ; ನಿನ್ನ ನಾ ಕಂಡೆನು

ನಾ ನಿನ್ನ ಕಂಡೆನೊ, ನೀ ಎನ್ನ ಕಂಡೆಯೋ ?
ನಿನ್ನ ದ್ಭುತ ಲೀಲೆ ವೈಚಿತ್ರ್ಯವೋ?
ನಾ ಸಿಲುಕಿದುದು ನಿನ್ನದೇ ಬಲೆಯೋ
ಓ ನಿನ್ನ ಚಕ್ರ ತಿಳಿಯಲಸದಳವೋ

ಹರ ನೀನು, ಹರಿ ನೀನು, ಎಲ್ಲ ನೀನು
ಆ ಅಲ್ಲಾ ಬುದ್ಧ, ಏಸು ನೀನೆ ನೀನು
ಒಡಕು ತೊಡಕಾಗಿರುವ ಜಗವಿದೇನು ?
ನಾನರಿದಿಹೆನು ಸರ್ವ ರೂಪಿಯೇ ನೀನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಮಿಷ
Next post ಮಿಶ್ಚೀಪೂ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys