ಅರಿದೆನು ನಿನ್ನ

ಅರಿಯೆ ನಾನು; ದಾರಿ ತೋರೊ ಗುರುವರ
ಊರೂರು ತಿರುಗಿ ಕಣ್ಣೀರ ಕರೆದೆನು
ಆರಾರ ಗುರುತನ ದೊರೆಯಲಿಲ್ಲೋ ಹರ
ವರಗುರು ನೀನೆಂದರಿದು ನಾ ಬಂದೆನು

ನಿನ್ನರವಿನ ಅನುಭವಾಂಮ್ರತವನು
ಎನ್ನ ಬಳಲಿದುದರಕ್ಕೆ ಬಡಿಸು
ನಿನ್ನುಳಿದು ಮುನ್ನು ನನಗಿನ್ನೇನು ?
ನೀ ನನ್ನ ಅಖಿಳ ಜೀವನವ ನಡೆಸು

ಎಲ್ಲಲ್ಲೂ ತಿರುಗಿದೆನು ನಿನ್ನರಿಯದೆ
ಆವಾವ ಪರಿಯಲಿ ನಾ ಕಾಡಿ ಬಂದೆನು
ಎಲ್ಲದೆಶೆಯೊಳು ನಿನ್ನ ನರಸುತ ಕರೆದೆ
ಹಲುಬುತಿರಲು ಹೃದಯ; ನಿನ್ನ ನಾ ಕಂಡೆನು

ನಾ ನಿನ್ನ ಕಂಡೆನೊ, ನೀ ಎನ್ನ ಕಂಡೆಯೋ ?
ನಿನ್ನ ದ್ಭುತ ಲೀಲೆ ವೈಚಿತ್ರ್ಯವೋ?
ನಾ ಸಿಲುಕಿದುದು ನಿನ್ನದೇ ಬಲೆಯೋ
ಓ ನಿನ್ನ ಚಕ್ರ ತಿಳಿಯಲಸದಳವೋ

ಹರ ನೀನು, ಹರಿ ನೀನು, ಎಲ್ಲ ನೀನು
ಆ ಅಲ್ಲಾ ಬುದ್ಧ, ಏಸು ನೀನೆ ನೀನು
ಒಡಕು ತೊಡಕಾಗಿರುವ ಜಗವಿದೇನು ?
ನಾನರಿದಿಹೆನು ಸರ್ವ ರೂಪಿಯೇ ನೀನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಮಿಷ
Next post ಮಿಶ್ಚೀಪೂ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…