ಬಡಗಣ ಗಾಳಿ

ಬಡಗಣ ದೆಡೆಗೀಂ
ತೆಂಕಣ ದೆಡೆಗೆ
ಓಡುತಿದೆ ಗಾಳಿ
ತಾ ಮಾಡುತಿದೆ ಧಾಳೀ

ಕಣ್ಣಿಗೆ ಕಾಣದೇ
ಮಾಯದಿ ಮುಸುಕುತ
ಆಡುತಿದೆ ಗಾಳಿ
ತಾ ಮಾಡುತಿದೇ ಧೂಳೀ

ದಣಿದಿಹ ದೇಹಕೆ
ತಂಪಿನ ಕಂಪನು
ತುಂಬುತಿದೇ ಸುತ್ತೀ
ಹರ್ಷವ ತಾನೆತ್ತೀ

ಒಂದುಪಕಾರವ
ನಮ್ಮಿಂದರಿಯದೆ
ಜೀವನವೀಯುತಿದೆ
ಮನವನು ಸೆಳೆಯುತಿದೆ

ಬಡಗಣ ಬನದಲಿ
ಓಡುತ ಬರುತಲಿ
ತೆಂಗಿನ ತೆಂಗಣ
ತಾ ದಾಟುತಿದೆ

ತೆಂಗಿನ ಗರಿಯೊಳು
ಸೋಂಕುತ ಭರದಲಿ
ತುಂಬಿದ ಬನದೊಳು
ತಾ ಸೊ೦ಯ್‌ ಗುಟ್ಟುತಿದೆ

ವಿಶ್ವದ ಅಶ್ವವು
ವಿಶ್ವದ ಕಕ್ಷದಿ
ಉರುಳುತ ಓಡುತಿದೆ
ತಾ ತಿರುಗುತ ಉರುಳುತಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೈ ಸಾಲ
Next post ನನಗೆರಡು ಕಿವಿ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…