ಗಂಧವತಿ

ಅವನ ಮಣ್ಣ ಪ್ರೀತಿ
ಬಾಳಿಗೆ ಬಂಗಾರ ಸಿಂಗಾರ
ದಿನಾಲೂ ಬೀಸುವ ಗಾಳಿಯ
ನೆತ್ತಿ ನೇವರಿಸಿ ಮಣ್ಣನೊಡನೆ ಮಾತನಾಡಿ
ಅವಳ ಹಿಗ್ಗಿಸಿ ರೋಮಾಂಚನಗೊಳಿಸುತ್ತಾನೆ
ಗಂಧವತಿ ಅವಳು ಎದೆ ತೆರೆದು ಹಸಿರು ಸೂಸುತ್ತಾಳೆ.

ಮೆದುವಾದ ಅವಳು, ಅವನು
ಬಿತ್ತಿದ ಬೀಜಕೆ ಬಸಿರಾಗಿ,
ಹೊಲದ ತುಂಬೆಲ್ಲಾ ಹಸಿರು ತೆನೆಕಾಳು;
ಒಸರಿದ ಹಾಲು ಹೀರಿದ ಹಕ್ಕಿಗಳು ಹಾರಿವೆ
ನೀಲ ಗಗನದ ತುಂಬ ಗಾಳಿಪಟ ಹಾಸಿವೆ.
ಅವಳೀಗ ಅವನು ಪೂಜಿಸುವ ದೇವತೆ.

ಮೊದಲ ಹನಿ ಸಿಂಚನಕೆ ಅವನು
ಮೋಡಗಳ ತೆಕ್ಕೆಗೆ ಸರಿದು ಹೋಗಿದ್ದಾನೆ,
ಸಂತೆಯಿಂದ ತಂದ ಬೀಜಗಳ ಅವಳ
ಉಡಿತುಂಬ ಸುರಿದಿದ್ದಾನೆ, ಯಾರ
ಮೋಹದಲಿ ಯಾರ ಊಹೆಯಲಿ,
ಯಾವ ಕಾಳಿನ ಮರ್ಮರ ಯೋಗಿಣಿ?

ಅವನ ಒಲವಿಗೆ ಅವಳ ಚಿಗುರು,
ಬಗೆ ಬಗೆದು ಹಬ್ಬಿ ಸಿಂಗರಗೊಂಡ
ಬಯಲು ಧ್ಯಾನ, ಮರದೊಳಗಿನ ಮೌನ,
ಬೆಳಕಿನ ಹಣತೆ ಹಚ್ಚಿದಾಗ ಬೀಗುವ
ಅವನು ಅವಳ ಮಡಿಲ ಕೂಸು
ದಾಯಿನಿ ಗಂಧವತಿಯ ಒಳ ಹೊರಗೂ ಚೈತನ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೈಲಿನ್ಕಂಡಿ
Next post ಸೂರ್ಯಾಲಂಕಾರ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…