ಗಂಧವತಿ

ಅವನ ಮಣ್ಣ ಪ್ರೀತಿ
ಬಾಳಿಗೆ ಬಂಗಾರ ಸಿಂಗಾರ
ದಿನಾಲೂ ಬೀಸುವ ಗಾಳಿಯ
ನೆತ್ತಿ ನೇವರಿಸಿ ಮಣ್ಣನೊಡನೆ ಮಾತನಾಡಿ
ಅವಳ ಹಿಗ್ಗಿಸಿ ರೋಮಾಂಚನಗೊಳಿಸುತ್ತಾನೆ
ಗಂಧವತಿ ಅವಳು ಎದೆ ತೆರೆದು ಹಸಿರು ಸೂಸುತ್ತಾಳೆ.

ಮೆದುವಾದ ಅವಳು, ಅವನು
ಬಿತ್ತಿದ ಬೀಜಕೆ ಬಸಿರಾಗಿ,
ಹೊಲದ ತುಂಬೆಲ್ಲಾ ಹಸಿರು ತೆನೆಕಾಳು;
ಒಸರಿದ ಹಾಲು ಹೀರಿದ ಹಕ್ಕಿಗಳು ಹಾರಿವೆ
ನೀಲ ಗಗನದ ತುಂಬ ಗಾಳಿಪಟ ಹಾಸಿವೆ.
ಅವಳೀಗ ಅವನು ಪೂಜಿಸುವ ದೇವತೆ.

ಮೊದಲ ಹನಿ ಸಿಂಚನಕೆ ಅವನು
ಮೋಡಗಳ ತೆಕ್ಕೆಗೆ ಸರಿದು ಹೋಗಿದ್ದಾನೆ,
ಸಂತೆಯಿಂದ ತಂದ ಬೀಜಗಳ ಅವಳ
ಉಡಿತುಂಬ ಸುರಿದಿದ್ದಾನೆ, ಯಾರ
ಮೋಹದಲಿ ಯಾರ ಊಹೆಯಲಿ,
ಯಾವ ಕಾಳಿನ ಮರ್ಮರ ಯೋಗಿಣಿ?

ಅವನ ಒಲವಿಗೆ ಅವಳ ಚಿಗುರು,
ಬಗೆ ಬಗೆದು ಹಬ್ಬಿ ಸಿಂಗರಗೊಂಡ
ಬಯಲು ಧ್ಯಾನ, ಮರದೊಳಗಿನ ಮೌನ,
ಬೆಳಕಿನ ಹಣತೆ ಹಚ್ಚಿದಾಗ ಬೀಗುವ
ಅವನು ಅವಳ ಮಡಿಲ ಕೂಸು
ದಾಯಿನಿ ಗಂಧವತಿಯ ಒಳ ಹೊರಗೂ ಚೈತನ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೈಲಿನ್ಕಂಡಿ
Next post ಸೂರ್ಯಾಲಂಕಾರ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys