ಜೈಲಿನ್ಕಂಡಿ

ರಚನೆ: ೫ನೆಯ ಸೆಪ್ಟೆಂಬರ್ ೧೯೪೨, ಮೈಸೂರು

ಮಾನವ ಜನ್ಮದಾಗ್ ಹುಟ್ಟಿದ್ಮೇಲೆ
ಏನೇನ್ಕಂಡಿ
ಜೀವನ್ದೊಳ್ಗೆ ಸಾಯೋತನ್ಕ
ಗಂಡಾಗುಂಡಿ.

ಲಕ್ಷ್ಮೀಪುರಂ ಸ್ಟೇಷನ್ನೊಳ್ಗೆ
ಕುಳಿತ್ಕೊಂಡಿ
ಬರೀತೇನೆ ಲಾವಣಿ ಒಂದು,
ಜೈಲಿನ್ಕಂಡಿ.

ಹಿಂದೆ ಎಂದೂ ಜೈಲಿನ್ಕಡ್ಗೆ
ಸುಳ್ದಿರ್ಲಿಲ್ಲ
ಜೈಲಿನ್ಜೀವ್ನ ಹೆಂಗಂಬೋದ್
ತಿಳ್ದಿರ್ಲಿಲ್ಲ!

ಸಾವಿರ್ದೊಂಬೈನೂರ ನಲ್ಪ.
ತ್ತೆರ್ಡ್ನೇ ಇಸ್ವಿ
ಸೆಪ್ಟೆಂಬರು ಐದ್ನೇ ತಾರೀಕ್
ಜೈಲಿಬಂದ್ವಿ!

ಪೋಲೀಸ್ನೋರು ಮೀಟಿಂಗಾದ್ಮೇಲ್
ನನ್ನನ್ಹಿಡ್ದ್ರು,
ನನ್ನೇಲ್ನಂಬ್ಕೆ ಇಲ್ದೋರಂಗೆ
ಬೀಗಾ ಜಡ್ದ್ರು;

ಲಾಕಪ್ನಾಗೆ ಸೇರಿತ್ತು
ಎರ್ಡಿಂಚ್ಕಸ
ಮಾಡೋದೆಂಗೆ ಎನ್ನಿಸ್ಬಿಡ್ತು
ಅದ್ರಾಗ್ವಾಸ!

ಮಧ್ಯೆ ಮಧ್ಯೆ ಟೆಲಿಫೋನ್ ಗಂಟೆ
ಹೊಡ್ಕೊಳ್ತಿತ್ತು
ಬೂಡ್ಸಿನ್ಧಕ್ಕೆಯೊಳ್ಗೆ ಎದೆ
ಧಸ್ಸೆನ್ತಿತ್ತು.

ಲಾಕಪ್ನಿಂದ ಹೊರಕ್ನೋಡೋಕ್
ಇತ್ತೊಂದ್ಕಿಂಡಿ
ಅದ್ರಿಂದೊಳ್ಗೆ ಗುಬ್ಬಚ್ಯೊಂದು
ಬರೋದ್ಕಂಡಿ.

ಹೊರಗ್ಗಾಳೀಲ್ ಕುಣ್ದಾಡ್ತಿದ್ವು
ಮರ್ದೆಲ್ಗೊಳು
ನಿಮ್ ಸ್ವಾತಂತ್ರ್ಯ ನಮ್ಗಿಲ್ವಲ್ಲ
ಅಯ್ಯೋ ಗೋಳು!

ಎಂಬೋ ಯೋಚ್ನೆ ತುಂಬಿ ಬಂತು
ಮನಸ್ನೊಳ್ಗೆ
ಕೆನ್ನೀರ್ತುಂಬ್ತು ತಕ್ಷಣ್ವೇನೆ
ಕಣ್ಣಿನೊಳ್ಗೆ!

ಕಣ್ಣೀರ್ನೊಳ್ಗೆ ಕಾಣ್ದೇಹೋಯ್ತು
ಜೈಲಿನ್ಕಟ್ಟು
ಬಿಚ್ಚಿ ಹೋಯ್ತು ಒಂದ್ ಕ್ಷಣ್ದಲ್ಲೆ
ಸ್ಪಪ್ನದ್ಕಟ್ಟು!
***

ಹಿಮಾಲಯ ಮಲೆ ಮೇಲೆ
ನಾಡಿನ್ಬಾವ್ಟ
ಹಾರ್ತಾ ಇದೆ ಅದರ್ಮೇಲೆ
ಬಾನಿನ್ಗುಮ್ಟ!

ಬಾವ್ಟದ್ಪಾದ ತೊಳೀತಿದೆ
ಗಂಗಾ ನದಿ
ಅದ್ಕೇ ಅದು ಭಾರತದಾಗೆ
ಪಾವನ ನದಿ!

ಬಾವ್ಟವನ್ನು ಹಿಡ್ದಿದ್ದಾರೆ
ಗಾಂಧೀಯೋರು
ಎಡ್ಬಲ್ದಲ್ಲಿ ಜವ್ಹರ್ಲಾಲು
ಆಜಾದರು.

ಎಲ್ಲೂ ಕೂಗ್ತಾರ್ “ಬೋಲೋ ಭಾರತ್
ಮಾತಾಕಿ ಜೈ”
ಭಾರತ್ಮಾತೆ ಉತ್ರ ಕೊಟ್ಳು
“ಗಾಂಧೀಕಿ ಜೈ!”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೊಡ್ಡವರು
Next post ಗಂಧವತಿ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…