ಒಂದು ಮಧ್ಯಾಹ್ನ

ಮಧ್ಯಾಹ್ನದ ಬಿರು ಬಿಸಿಲು ಹೊರಗೆ
ಒಳಗೆ ತೊಟ್ಟಿಲಲ್ಲಿ ಮಗು ಮಲಗಿದೆ
ಅಡುಗೆ ಮನೆಯಿಂದ ಪರಿಮಳ ಸೂಸಿ
ಗೋಡೆಯ ಮೇಲಿನ ಭಾವಚಿತ್ರಗಳ ಮೂಗರಳಿಸಿವೆ.
ಚಿಟ್ಟೆ ಹರಿದಾಡದೇ ಕುಳಿತಿದೆ ಹೂವ ಮೇಲೆ.

ಹೃದಯ ಮನಸ್ಸು ತಣ್ಣಗೆ ಹೈರಾಣ
ಗೋಡೆಯ ಗಡಿಯಾರ ಸುಮ್ಮನೆ ಚಲಿಸಿದೆ
ಹಣ್ಣು ಹೊತ್ತ ಮರ ಬಾಗಿದೆ ಬಿಸಿಲಿಗೆ
ಕಡಲಿನಾಳಕ್ಕಿಂತ ಮನದ ಆಳ ದೊಡ್ಡದು
ಮಧು ಹೀರಿದ ದುಂಬಿ ತಲ್ಲಣಿಸಿದೆ
ಮಾತುಗಳ ಬಿಮ್ಮನೆ ಮುನಿಸಿಕೊಂಡಿವೆ.

ಪಡಸಾಲೆಯಲಿ ಜೋಕಾಲಿ ಜೀಕಿದೆ
ಅವನಿಲ್ಲದ ಹಗಲು ಭಾರವಾಗಿದೆ
ನೆನಪುಗಳ ಒಗ್ಗರಣೆಗೆ ಸಿಡಿಮಿಡಿಗೊಂಡಿದೆ
ಮಲಗಿದ ಮಗು ರಚ್ಚೇ ಹಿಡಿದು ಅಳುತದೆ
ಅಂಗಳದ ಗಿಡಗಳಲಿ ಒಂದು ಗುಬ್ಬೀ ಚಿಲಿಪಿಲಿ
ತುಂಬಾ ಸುಂದರವಲ್ಲ ಹಿತವಲ್ಲ ಬೆವರ ಹನಿಗಳು.

ನದಿಯ ಹರವಿನಲಿ ಬೆಣಚುಕಲ್ಲುಗಳು
ಬೇರಿನ ನೀರ ಆವಿ ಒಣಗಿ ಹುಡಿ ಮಣ್ಣು
ಬಣ್ಣದ ಬಿಸಿಲಿನ ಸೂರ್ಯನಿಗೆ ಶೃಂಗಾರ
ನೀಲ ಆಕಾಶದ ಕ್ಯಾನ್‌ವಾಸಿನಲಿ ಎಳೆ ಚಿಗುರು
ಬಿಂಬಿಸಿದ ವಸಂತದ ಕನ್ನಡಿ ಹೊಳಪು
ಗಾಬರಿ ಆಗುವುದು ಸಹಜ ಬಿರು ಬಿಸಿಲಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು – ಇಂದು
Next post ಸೂರ್ಯನ ಹೆಜ್ಜೆ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…