ಒಂದು ಮಧ್ಯಾಹ್ನ

ಮಧ್ಯಾಹ್ನದ ಬಿರು ಬಿಸಿಲು ಹೊರಗೆ
ಒಳಗೆ ತೊಟ್ಟಿಲಲ್ಲಿ ಮಗು ಮಲಗಿದೆ
ಅಡುಗೆ ಮನೆಯಿಂದ ಪರಿಮಳ ಸೂಸಿ
ಗೋಡೆಯ ಮೇಲಿನ ಭಾವಚಿತ್ರಗಳ ಮೂಗರಳಿಸಿವೆ.
ಚಿಟ್ಟೆ ಹರಿದಾಡದೇ ಕುಳಿತಿದೆ ಹೂವ ಮೇಲೆ.

ಹೃದಯ ಮನಸ್ಸು ತಣ್ಣಗೆ ಹೈರಾಣ
ಗೋಡೆಯ ಗಡಿಯಾರ ಸುಮ್ಮನೆ ಚಲಿಸಿದೆ
ಹಣ್ಣು ಹೊತ್ತ ಮರ ಬಾಗಿದೆ ಬಿಸಿಲಿಗೆ
ಕಡಲಿನಾಳಕ್ಕಿಂತ ಮನದ ಆಳ ದೊಡ್ಡದು
ಮಧು ಹೀರಿದ ದುಂಬಿ ತಲ್ಲಣಿಸಿದೆ
ಮಾತುಗಳ ಬಿಮ್ಮನೆ ಮುನಿಸಿಕೊಂಡಿವೆ.

ಪಡಸಾಲೆಯಲಿ ಜೋಕಾಲಿ ಜೀಕಿದೆ
ಅವನಿಲ್ಲದ ಹಗಲು ಭಾರವಾಗಿದೆ
ನೆನಪುಗಳ ಒಗ್ಗರಣೆಗೆ ಸಿಡಿಮಿಡಿಗೊಂಡಿದೆ
ಮಲಗಿದ ಮಗು ರಚ್ಚೇ ಹಿಡಿದು ಅಳುತದೆ
ಅಂಗಳದ ಗಿಡಗಳಲಿ ಒಂದು ಗುಬ್ಬೀ ಚಿಲಿಪಿಲಿ
ತುಂಬಾ ಸುಂದರವಲ್ಲ ಹಿತವಲ್ಲ ಬೆವರ ಹನಿಗಳು.

ನದಿಯ ಹರವಿನಲಿ ಬೆಣಚುಕಲ್ಲುಗಳು
ಬೇರಿನ ನೀರ ಆವಿ ಒಣಗಿ ಹುಡಿ ಮಣ್ಣು
ಬಣ್ಣದ ಬಿಸಿಲಿನ ಸೂರ್ಯನಿಗೆ ಶೃಂಗಾರ
ನೀಲ ಆಕಾಶದ ಕ್ಯಾನ್‌ವಾಸಿನಲಿ ಎಳೆ ಚಿಗುರು
ಬಿಂಬಿಸಿದ ವಸಂತದ ಕನ್ನಡಿ ಹೊಳಪು
ಗಾಬರಿ ಆಗುವುದು ಸಹಜ ಬಿರು ಬಿಸಿಲಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು – ಇಂದು
Next post ಸೂರ್ಯನ ಹೆಜ್ಜೆ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys