ಇರುಳು

ರಾತ್ರಿ ಬಯಲಿನಲ್ಲಿ ಚಂದ್ರನ
ಬೆಳಕಿರಲಿಲ್ಲ ಬಾನಿನಲ್ಲಿ ಬರೀ ನಕ್ಷತ್ರಗಳು
ಕಪ್ಪಾದ ನೆರಳು ಕ್ಷಿತಿಜದ ತುಂಬ
ಮತ್ತೆ ಸಂದೇಹ ನರಳಿಕೆಗಳು ಒದ್ದಾಡುತ್ತಿದ್ದವು.

ಕಣ್ಣು ಮುಚ್ಚಿದ ಸೂರ್ಯ ಕನಸಿನಲ್ಲಿ
ತಾರೆಗಳು ಮಹಾಮನೆಯ ಬೆಳಕು ಚೆಲ್ಲಿ
ಮುಗಿಲು ಹರಿದ ದಾರಿ ತುಂಬ ಕನಸುಗಳು
ಮತ್ತೆ ಮೈಯ ಹೊದ್ದ ಚಾದರು ಮುದುಡಿಕೊಂಡಿತ್ತು.

ಅರಮನೆಯ ಅಂಗಳದಲಿ ಪ್ರೀತಿ
ಹುಟ್ಟಿ ಹಾಲೆರೆಯುವ ಪಾಣಿಗ್ರಹಣ
ಕತ್ತಲೆಯ ಒಡ್ಡೋಲಗದಲ್ಲಿ ಸೀರೆ
ಸೆಳೆದುಕೊಂಡ ದ್ರೌಪತಿ ಬತ್ತಲಾದಳು.

ಸುಟ್ಟ ಗಾಯಗಳ ಆಕಾಶ ಪರ್ವ
ಚೆಲ್ಲಿಕೊಂಡ ಮನಸ್ಸುಗಳ ಅಗರ
ಯಾರು ಪೊರೆದರೋ ಇರಿದರೋ
ಕಣ್ಣು ಕಕ್ಷೆಯ ಬೆಳಕು ಕಳೆದುಕೊಂಡ ಗಾಂಧಾರ.

ಕತ್ತಲಿಗೆ ಒಂದು ಶಕ್ತಿ ನಿಗೂಢ
ಬೆಳಕಿನಲಿ ಆಗದ ಕೆಲಸಗಳು
ಒಳಗೊಳಗೆ ಹೊತ್ತಿ ಉರಿವ ಭೂತ ಭಯ
ಲಜ್ಜೆದಾಟದ ಕಣ್ಣು ಮುಚ್ಚಿದ ಕೌ ನೆರಳು ಇರುಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಗಿಲೆಯ ಪಾಡು
Next post ನವ್ಯಕಲಾಕೃತಿ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys