ಐರಿಷ್ ವೈಮಾನಿಕನ ಹಾಡು

ಮೇಲೆ ಅಲೆವ ಮುಗಿಲಿನೊಳಗೆ ಹೀಗೇನೇ ಒಮ್ಮೆ
ಸಂಧಿಸುವೆನು ನನ್ನ ವಿಧಿಯ ಎಂದು ನಾನು ಬಲ್ಲೆ.
ಕಾದುವವರ ಕೂಡ ನನಗೆ ಇಲ್ಲ ಯಾವ ಹಗೆತನ,
ಯಾರಿಗಾಗಿ ಕಾದುವೆನೋ ಅವರೊಳಿಲ್ಲ ಒಗೆತನ.
ಕಿಲ್ಟಾರ್‍ಟನ್ ಕ್ರಾಸ್ ಎನ್ನುವ ದೇಶ ನನ್ನ ನಾಡು
ಕಿಲ್ಟಾರ್ಟನ್ ಬಡವರ ಜೊತೆ ಹಂಚಿಕೊಂಡೆ ಪಾಡು.
ನನ್ನ ಸಾವಿನಿಂದ ಏನೂ ಹಾನಿ ಇಲ್ಲ ಜನರಿಗೆ
ಸಂತಸವೂ ಇಲ್ಲ ನನ್ನ ಸಾವಿನಿಂದ ಅವರಿಗೆ.
ಯಾವುದೊಂದು ನಿಯಮಕೂ ಕರ್‍ತವ್ಯದ ಜ್ಞಾನಕೂ
ಹೋರಾಡುವನಲ್ಲ ಯಾವ ಗುಂಪಿನ ಪ್ರೋತ್ಸಾಹಕೂ;
ಥಟ್ಟನುಕ್ಕಿ ಬಂದ ಒಂದು ಯಾವುದೊ ಸುಮ್ಮಾನಕೆ
ಸಿಕ್ಕಿ ಬಂದೆ ಮುಗಿಲಿನೊಳಗೆ ಈ ಸಂಭ್ರಮಯಾನಕೆ.
ಹಿಂದೆ ಸಂದ ವರ್‍ಷಗಳು ವ್ಯರ್‍ಥಬಾಳು ಎನ್ನಿಸಿ,
ಮುಂದೆ ಬರುವ ವರ್‍ಷಗಳೂ ವ್ಯರ್‍ಥಕಾಲ ಎನ್ನಿಸಿ,
ಬಂದ ಎಲ್ಲ ಚಿಂತಿಸಿ, ಲೆಕ್ಕಾಚಾರ ತೂಗಿಸಿ
ಈ ಬಾಳಿನ ಜೊತೆಗೆ ಈ ಸಾವನು ಸರಿತೂಗಿಸಿ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಏಟ್ಸನ ಜನಪ್ರಿಯ ಕವನಗಳಲ್ಲಿ ಒಂದು. ಇಲ್ಲಿಯ ಐರಿಷ್ ವೈಮಾನಿಕ ಲೇಡಿ ಗ್ರೆಗರಿಯ ಮಗನಾದ ಮೇಜರ್ ರಾಬರ್‍ಟ್ ಗ್ರೆಗರಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಜಿನ ಅರಮನೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೪

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…