ಗಾಜಿನ ಅರಮನೆ

ತೋಟದಲ್ಲಿ ತಿರುಗುವಾಗ ಭುಜವೇರಿ ಬಂದಿತ್ತು ಒಂದು ಕಂಬಳಿ ಹುಳು. ಮೈ ನವೆ ತಡೆಯಲಾರದೆ ಸಿಟ್ಟಿನಿಂದ ಕಂಬಳಿ ಹುಳುವನ್ನು ಒಂದು ಸೀಸೆಯಲ್ಲಿ ಹಾಕಿ ಬಂಧಿಸಿಟ್ಟ ತೋಟದ ಮಾಲಿ. ಗಿಡಗಳಿಗೆ ನೀರು ಹಾಕುವಾಗ ಕನಿಕರ ಗೊಂಡು ನಾಲಕ್ಕು ಎಲೆ ಆಹಾರ ಹಾಕಿ ದಿನವೂ ನೋಡುತ್ತಿದ್ದ. ಹಲವು ದಿನದೊಳಗೆ ಕಂಬಳಿ ಹುಳು ಚಿಟ್ಟೆಯಾಯಿತು. ಕಪ್ಪು ಕಂಬಳಿಯ ಬಿಟ್ಟು ರಂಗುರಂಗಿನ ರೆಕ್ಕೆ ಹೊದ್ದಿತು. ಪಟಪಟ ರೆಕ್ಕೆ ಬಡಿಯಿತು. ತನ್ನ ರೆಕ್ಕೆ ಸಾಗರ ಭೂಮಿ ಮುಟ್ಟಿದೆ ಎಂದು ಸಂತಸ ಪಟ್ಟಿತು. ತಾನಿರುವಲ್ಲಿಗೆ ಸೂರ್‍ಯ, ಚಂದ್ರ, ಗಾಳಿ, ಆಗಸ ಎಲ್ಲವೂ ಬರುತ್ತಿದೆ, ಎಂಬ ಭ್ರಮೆಯಲ್ಲಿತ್ತು. ಗಾಜಿನ ಮನೆಯ ಬಂಧನದ ಅರಿವು ಅದಕ್ಕೆ ಇರಲಿಲ್ಲ.

ಗಾಜಿನ ಬಾಟಲಿನಲ್ಲಿ ಹಾರುತ್ತಿದ್ದ ಚಿಟ್ಟೆಯನ್ನು ನೋಡಿ ತೋಟದ ಮಾಲಿ ಅದರ ಬಾಯಿಗೆ ಬಿರಟೆ ಇಟ್ಟ. ಚಿಟ್ಟೆ ಚೀರಿತು.

“ಇದೇನು ನಾ ಕಂಡ ಆಗಸ, ಭೂಮಿ, ಸೂರ್‍ಯ ಚಂದ್ರರೆ ನನ್ನ ಉಸುರು ಕಟ್ಟಿಸುತ್ತಿದ್ದಾರೆ” ಎಂದುಕೊಂಡಿತು. ಉಸುರು ಕಟ್ಟಿ ಸಾಯುವಾಗ ಮಾಲಿ ಮಾತು ಕೇಳಿಸಿತು.

“ಗಾಜಿನ ಅರಮನೆ ಹೇಗಿದೆ?” ಎಂದು. ಆಗ ಚಿಟ್ಟೆಗೆ ಜ್ಞಾನೋದಯವಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಗಾರು
Next post ಐರಿಷ್ ವೈಮಾನಿಕನ ಹಾಡು

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys