ಗಾಜಿನ ಅರಮನೆ

ತೋಟದಲ್ಲಿ ತಿರುಗುವಾಗ ಭುಜವೇರಿ ಬಂದಿತ್ತು ಒಂದು ಕಂಬಳಿ ಹುಳು. ಮೈ ನವೆ ತಡೆಯಲಾರದೆ ಸಿಟ್ಟಿನಿಂದ ಕಂಬಳಿ ಹುಳುವನ್ನು ಒಂದು ಸೀಸೆಯಲ್ಲಿ ಹಾಕಿ ಬಂಧಿಸಿಟ್ಟ ತೋಟದ ಮಾಲಿ. ಗಿಡಗಳಿಗೆ ನೀರು ಹಾಕುವಾಗ ಕನಿಕರ ಗೊಂಡು ನಾಲಕ್ಕು ಎಲೆ ಆಹಾರ ಹಾಕಿ ದಿನವೂ ನೋಡುತ್ತಿದ್ದ. ಹಲವು ದಿನದೊಳಗೆ ಕಂಬಳಿ ಹುಳು ಚಿಟ್ಟೆಯಾಯಿತು. ಕಪ್ಪು ಕಂಬಳಿಯ ಬಿಟ್ಟು ರಂಗುರಂಗಿನ ರೆಕ್ಕೆ ಹೊದ್ದಿತು. ಪಟಪಟ ರೆಕ್ಕೆ ಬಡಿಯಿತು. ತನ್ನ ರೆಕ್ಕೆ ಸಾಗರ ಭೂಮಿ ಮುಟ್ಟಿದೆ ಎಂದು ಸಂತಸ ಪಟ್ಟಿತು. ತಾನಿರುವಲ್ಲಿಗೆ ಸೂರ್‍ಯ, ಚಂದ್ರ, ಗಾಳಿ, ಆಗಸ ಎಲ್ಲವೂ ಬರುತ್ತಿದೆ, ಎಂಬ ಭ್ರಮೆಯಲ್ಲಿತ್ತು. ಗಾಜಿನ ಮನೆಯ ಬಂಧನದ ಅರಿವು ಅದಕ್ಕೆ ಇರಲಿಲ್ಲ.

ಗಾಜಿನ ಬಾಟಲಿನಲ್ಲಿ ಹಾರುತ್ತಿದ್ದ ಚಿಟ್ಟೆಯನ್ನು ನೋಡಿ ತೋಟದ ಮಾಲಿ ಅದರ ಬಾಯಿಗೆ ಬಿರಟೆ ಇಟ್ಟ. ಚಿಟ್ಟೆ ಚೀರಿತು.

“ಇದೇನು ನಾ ಕಂಡ ಆಗಸ, ಭೂಮಿ, ಸೂರ್‍ಯ ಚಂದ್ರರೆ ನನ್ನ ಉಸುರು ಕಟ್ಟಿಸುತ್ತಿದ್ದಾರೆ” ಎಂದುಕೊಂಡಿತು. ಉಸುರು ಕಟ್ಟಿ ಸಾಯುವಾಗ ಮಾಲಿ ಮಾತು ಕೇಳಿಸಿತು.

“ಗಾಜಿನ ಅರಮನೆ ಹೇಗಿದೆ?” ಎಂದು. ಆಗ ಚಿಟ್ಟೆಗೆ ಜ್ಞಾನೋದಯವಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಗಾರು
Next post ಐರಿಷ್ ವೈಮಾನಿಕನ ಹಾಡು

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…