ಐರಿಷ್ ವೈಮಾನಿಕನ ಹಾಡು

ಮೇಲೆ ಅಲೆವ ಮುಗಿಲಿನೊಳಗೆ ಹೀಗೇನೇ ಒಮ್ಮೆ
ಸಂಧಿಸುವೆನು ನನ್ನ ವಿಧಿಯ ಎಂದು ನಾನು ಬಲ್ಲೆ.
ಕಾದುವವರ ಕೂಡ ನನಗೆ ಇಲ್ಲ ಯಾವ ಹಗೆತನ,
ಯಾರಿಗಾಗಿ ಕಾದುವೆನೋ ಅವರೊಳಿಲ್ಲ ಒಗೆತನ.
ಕಿಲ್ಟಾರ್‍ಟನ್ ಕ್ರಾಸ್ ಎನ್ನುವ ದೇಶ ನನ್ನ ನಾಡು
ಕಿಲ್ಟಾರ್ಟನ್ ಬಡವರ ಜೊತೆ ಹಂಚಿಕೊಂಡೆ ಪಾಡು.
ನನ್ನ ಸಾವಿನಿಂದ ಏನೂ ಹಾನಿ ಇಲ್ಲ ಜನರಿಗೆ
ಸಂತಸವೂ ಇಲ್ಲ ನನ್ನ ಸಾವಿನಿಂದ ಅವರಿಗೆ.
ಯಾವುದೊಂದು ನಿಯಮಕೂ ಕರ್‍ತವ್ಯದ ಜ್ಞಾನಕೂ
ಹೋರಾಡುವನಲ್ಲ ಯಾವ ಗುಂಪಿನ ಪ್ರೋತ್ಸಾಹಕೂ;
ಥಟ್ಟನುಕ್ಕಿ ಬಂದ ಒಂದು ಯಾವುದೊ ಸುಮ್ಮಾನಕೆ
ಸಿಕ್ಕಿ ಬಂದೆ ಮುಗಿಲಿನೊಳಗೆ ಈ ಸಂಭ್ರಮಯಾನಕೆ.
ಹಿಂದೆ ಸಂದ ವರ್‍ಷಗಳು ವ್ಯರ್‍ಥಬಾಳು ಎನ್ನಿಸಿ,
ಮುಂದೆ ಬರುವ ವರ್‍ಷಗಳೂ ವ್ಯರ್‍ಥಕಾಲ ಎನ್ನಿಸಿ,
ಬಂದ ಎಲ್ಲ ಚಿಂತಿಸಿ, ಲೆಕ್ಕಾಚಾರ ತೂಗಿಸಿ
ಈ ಬಾಳಿನ ಜೊತೆಗೆ ಈ ಸಾವನು ಸರಿತೂಗಿಸಿ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಏಟ್ಸನ ಜನಪ್ರಿಯ ಕವನಗಳಲ್ಲಿ ಒಂದು. ಇಲ್ಲಿಯ ಐರಿಷ್ ವೈಮಾನಿಕ ಲೇಡಿ ಗ್ರೆಗರಿಯ ಮಗನಾದ ಮೇಜರ್ ರಾಬರ್‍ಟ್ ಗ್ರೆಗರಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಜಿನ ಅರಮನೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೪

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys