ಮುಂಗಾರು

ಮುಂಗಾರು ನನ್ನ ಮುಂದಾರೆಂಬ ಬಿಂಕದಲಿ
ಮುಂದಲೆಯ ಕೇಶರಾಶಿಯನೆತ್ತಿ ಕಣ್ಕಿಸಿದು,
ಎಬ್ಬಿಸಿದ ಕೆಂಧೂಳಿ ಕಾರ್‍ಮುಗಿಲ ಮುಟ್ಟಲದು
ರಕ್ಕಸಿಯ ರಕ್ಕಸದಿ ನಿಂತಿದೆ ದಿಗಂತದಲಿ
ಮುಂಗಾರ ಸಿಂಗಾರವಿದು ನಿರಾತಂಕದಲಿ
ಮುಚ್ಚಿಹುದು ಹಗಲ ಬಂಗಾರವನು ಬೆಚ್ಚಿಹುದು
ಮುಂಗಾರ ಸಿಡಿಲು-ಮಿಂಚನು ಮೊದಲುಸಲ ಕಂಡು
ಮಗುವೊಂದು ನಿದ್ದೆ ತೊಲಗಿರೆ ಮಾತೆಯಂಕದಲಿ

ಮರುಕ್ಷಣವೆ ನಗುತಿಹುದು ಓ! ಎಲ್ಲ ಬಯಲಾಗಿ
ಕೊನರಿತ್ತು ರವಿಯ ನಗೆ. ಪ್ರೀತಳು ಧರಾಂಗನೆಯು.
ಅಲ್ಲಲ್ಲಿ ನಿಂತ ಕಿರಿಗೊಳದಿ, ನವ ಮಾಸಗಳು
ಮಾಸಿರುವ ಮೈಯ್ಯ ತೊಳೆವವು ಹಕ್ಕಿ, ನೆರೆಯಾಗಿ
ತಂಪು-ಬರುತಿದೆ ಕಂಪು: ಶಾಂತ ಮೌನದ ಮುಗುಳು
ಬಿಚ್ಚಿಹುದು ಮುಂಗಾರು ಇಂಥ ಸೊಬಗಿನ ನನೆಯು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದ್ದು ಕಂದನ ವಚನಗಳು: ಎರಡು
Next post ಗಾಜಿನ ಅರಮನೆ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys