ಕವನ ಸೃಷ್ಠಿ

ಕವನ ಬರೆಯುವುದಷ್ಟು
ಸುಲಭದ ಕೆಲಸವಲ್ಲ
ತರಕಾರಿ ಅಕ್ಕಿ ಮಸಾಲೆ ಉಪ್ಪು
ನೀರು ಪಾತ್ರೆ ಪಡಗ ಎಲ್ಲಾ ಸಾಧನ
ಇದ್ದರೂ ಗೊತ್ತಿರಬೇಕಲ್ಲ
ಅಡುಗೆ ಮಾಡುವ ವಿಧಾನ

ಕವನ ಬರೆಯುವುದಷ್ಟು ಸುಲಭವಲ್ಲ
ಪದಗಳೆಲ್ಲವ ಒಟ್ಟುಗೂಡಿಸಿ
ತೂಗಿಸಿ ಅಳತೆ ಮಾಡಿ
ಜೋಡಿಸಿ ಕಳೆದು ಕೂಡಿ
ಗುಣಾಕಾರ ಭಾಗಾಕಾರ ಲೆಕ್ಕಾಚಾರ
ಮಾಡಿದರಷ್ಟೇ ಕವನ ಪ್ರಕಾರ.

ಕವನ ಬರೆಯುವುದಷ್ಟು ಸುಲಭವಲ್ಲ
ಹಾಲು ಬೆಳದಿಂಗಳ ತೊಟ್ಟಿಲಲ್ಲಿ
ಸಂಜೆಯ ತಂಬೆಲರಿನ ಜೋಗುಳ
ಮಿನುಗುವ ನಕ್ಷತ್ರಗಳ ಲಾಲಿ
ಭಾವನೆಗಳ ತಬ್ಬಿ ರಮಿಸಿ
ಲಾಲಿಸಿ ಲಲ್ಲೆಗರೆದು ಮುದ್ದು
ಮಾಡಿದಾಗಲೇ ಕವನದ ಹುಟ್ಟು.

ಕವನ ಬರೆಯುವುದಷ್ಟು ಸುಲಭವಲ್ಲ
ಚಿನ್ನದ ಅದಿರ ಕುಟ್ಟಿ ಕುಟ್ಟಿ
ಪುಡಿ ಮಾಡಿ ಕಾಯಿಸಿ ಕರಗಿಸಿ
ಪುಟಕ್ಕಿಟ್ಟಾಗಲೇ ಅಪರಂಜಿ
ಮಿಡಿದ ಭಾವನೆಗಳ ಕಟ್ಟಿ
ಉಡಿಸಿ ತೊಡಿಸಿ ಮುಡಿಸಿ
ಒನಪು ವೈಯ್ಯಾರ ಸಿಂಗಾರ
ಅಲಂಕಾರ ದೃಷ್ಟಿ
ಬೊಟ್ಟು ಇಟ್ಟಾಗಲೇ ಕವನದ ಸೃಷ್ಟಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಇದು ಇದ್ದರೆ ಅದು
Next post ಲಕ್ಷಣ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys