ಜಿಟ್ಟಿಹುಳಗಳು ಎದ್ದಾವು ನೋಡು

ಜಿಟ್ಟಿಹುಳಗಳು ಎದ್ದಾವು ಇದು ನೋಡು
ಸೃಷ್ಟಿಪತಿ ಅರಸರಿಗೆಲ್ಲಾ ಕೇಡೋ
ಅಷ್ಟದಶಮಧ್ಯದಲಿ ಒಪ್ಪುವ ನೆಟ್ಟನಾದಿಭೂಮಿ ದಿಲ್ಲಿಗೆ
ಶ್ರೇಷ್ಠಕ್ರಿಸ್ತಾನಬಾದಶಹ ಪಟ್ಟಗಟ್ಟಲು ಕಂಡು ||ಪ||

ವಸುಮತಿಪತಿ ವರದಿಂ ಕುಮಾರ
ಈಶಾನ್ಯೆಂಬುವ ಪರಮನವತಾರಾ
ರೋಸಬಾದಶಾ ಇಂಗ್ಲೀಷಮತವನುದ್ಧರಿಸಲು
ಬಹುಧಾನ್ಯನ ಸಂವತ್ಸರಕೆ ಉತ್ತಮ ಬೇಸಿಗ ಬರಹವ ಕೇಳಿ ||೧||

ಕ್ಷೋಣಿಗೆ ಆಧಿಕಾರಕೊಟ್ಟು ಕಂಪನಿಗೆ
ರಾಣಿ ದೊರೆ ತಾನು ಕಟ್ಟಾಕಾನೂನಿಗೆ
ಜಾಣತನದಲಿ ಇಳಿಯನಾಳುತ ತಾನೇ ತಾನೇ‌ಆಗಿ ಕಲಿಯುಗ
ಪ್ರಾಣ ನಿರ್ಮಲಪಾದದಲಿ ಭೂ ಅಣಿದು ತಲ್ಲಣಿಸಕೆ ||೨||

ಮಜದಲಿ ಪೇಳುವೆ ಮೌಜಿನ ಮಾತು
ಮೂಜಗದೊಳು ಆತಿಕೌತುಕವಾತು
ರಾಜ್ಯದಲಿ ಯಾವತ್ತು ದೇಶದ ಪಾಳ್ಯಾಗಾರರು ಪರಮಡಿಸಿ ಮಹಾ-
ರಾಜ್ಯ ಕೋರ್ಟಿಗೆ ಒಯ್ದರೆಂಬುವ ಸುದ್ಧಿ ಕೇಳಿ ||೩||

ಧರ್ಮದಾತಾ ಶಿಶುವಿನಾಳಧೀಶಾ
ಊರ್ವಿ ಪಾಲಿಸಿದನು ಇಷ್ಟುದಿವಸಾ
ಕರ್ಮಕಟ್ಟಳೆ ತೀರಿಸಿ ಮೂವತ್ತು-
ವರ್ಷ ಮುಂದ ಹದಿನೈದು ಇರುತಿರೆ
ಮೊಗಲ ವಿಲಾಯತಿ ಪಟ್ಟಕ್ಕೆ ಕರ್ಮ ತಟ್ಟಲು ಕಂಡು ಜಿಟ್ಟಿಹುಳ ||೪||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಪಥ
Next post ಜಗದಳಿಲು

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys