ಜಗದಳಿಲು

ಧರೆ ಬಿರಿದು ಉರಿಯುತಿದೆ
ಮೆರೆಯುತಿವೆ ಘಾತಕ ಶಕ್ತಿಗಳು
ಪರಿಹಾರ ತೋಚದ ಶ್ರೀ ಸಾಮಾನ್ಯನ
ತೊಳಲು ಕೊಚ್ಚಿ ಹೋಗುತಿದೆ

ನಾ ಮುಂದೆ ನೀ ಮುಂದೆನ್ನುತಾ…
ರಾರಾಜಿಸುತಿಹರು ಸಮಾಜ ಪೀಡೆಗಳು
ನ್ಯಾಯ… ನೀತಿ ಗಾಳಿಗೆ ತೂರಿ
ಅಟ್ಟಹಾಸದಿ ನಗುತ ಮೆರೆಯುತಿಹರು

ಯೋಜನೆ, ಯೋಚನೆಯ, ನೆಪದಲಿ
ಹಣದ ಪೋಲು ಮಾಡುತಿಹರು
ಉದ್ಧಾರ ಅಭಿವೃದ್ಧಿಯೆನ್ನುತಲಿವರು
ದಾರಿದ್ರ್‍ಯದಾಳದಲಿ ತಳ್ಳುತಿಹರು

ನಮ್ಮನು ಬಲಿಪಶುವಾಗಿಸಿ
ಏರುತಿಹರು ಸ್ವಾರ್ಥ ಚುಕ್ಕಾಣಿಕೆಯ
ಇಳಿಸಬೇಕು ನಾವುಗಳು ಒಂದಾಗಿ…
ಕಲಿಸಬೇಕು ನೀತಿ ಪಾಠವನು
ನಡೆಸಬೇಕು ಮನುಷ್ಯ ಪಥದ ದಾರಿಯಲಿ

ಶ್ರೀ ಸಾಮಾನ್ಯನು ಕೊರಗುತ ಮುದುಡದೆ
ಏಳಬೇಕು ಎಚ್ಚರವಾಗಬೇಕು
ಶಿಕ್ಷಣ-ಸಂಘಟನೆ ಅಪ್ಪಿಕೊಳ್ಳುತ…
ಸಾಗಬೇಕು ಹೋರಾಟದ ಹಾದಿ ಹುಡುಕುತ
ಸಮಾನತೆ ಕಹಳೆ ಮೊಳಗಿಸುತ….

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಿಟ್ಟಿಹುಳಗಳು ಎದ್ದಾವು ನೋಡು
Next post ಕಲ್ಲುಗಡಗಿಯ ಒಳಗೆ ಹಕ್ಕಿ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…