ಜಗದಳಿಲು

ಧರೆ ಬಿರಿದು ಉರಿಯುತಿದೆ
ಮೆರೆಯುತಿವೆ ಘಾತಕ ಶಕ್ತಿಗಳು
ಪರಿಹಾರ ತೋಚದ ಶ್ರೀ ಸಾಮಾನ್ಯನ
ತೊಳಲು ಕೊಚ್ಚಿ ಹೋಗುತಿದೆ

ನಾ ಮುಂದೆ ನೀ ಮುಂದೆನ್ನುತಾ…
ರಾರಾಜಿಸುತಿಹರು ಸಮಾಜ ಪೀಡೆಗಳು
ನ್ಯಾಯ… ನೀತಿ ಗಾಳಿಗೆ ತೂರಿ
ಅಟ್ಟಹಾಸದಿ ನಗುತ ಮೆರೆಯುತಿಹರು

ಯೋಜನೆ, ಯೋಚನೆಯ, ನೆಪದಲಿ
ಹಣದ ಪೋಲು ಮಾಡುತಿಹರು
ಉದ್ಧಾರ ಅಭಿವೃದ್ಧಿಯೆನ್ನುತಲಿವರು
ದಾರಿದ್ರ್‍ಯದಾಳದಲಿ ತಳ್ಳುತಿಹರು

ನಮ್ಮನು ಬಲಿಪಶುವಾಗಿಸಿ
ಏರುತಿಹರು ಸ್ವಾರ್ಥ ಚುಕ್ಕಾಣಿಕೆಯ
ಇಳಿಸಬೇಕು ನಾವುಗಳು ಒಂದಾಗಿ…
ಕಲಿಸಬೇಕು ನೀತಿ ಪಾಠವನು
ನಡೆಸಬೇಕು ಮನುಷ್ಯ ಪಥದ ದಾರಿಯಲಿ

ಶ್ರೀ ಸಾಮಾನ್ಯನು ಕೊರಗುತ ಮುದುಡದೆ
ಏಳಬೇಕು ಎಚ್ಚರವಾಗಬೇಕು
ಶಿಕ್ಷಣ-ಸಂಘಟನೆ ಅಪ್ಪಿಕೊಳ್ಳುತ…
ಸಾಗಬೇಕು ಹೋರಾಟದ ಹಾದಿ ಹುಡುಕುತ
ಸಮಾನತೆ ಕಹಳೆ ಮೊಳಗಿಸುತ….

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಿಟ್ಟಿಹುಳಗಳು ಎದ್ದಾವು ನೋಡು
Next post ಕಲ್ಲುಗಡಗಿಯ ಒಳಗೆ ಹಕ್ಕಿ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…