ಜಗದಳಿಲು

ಧರೆ ಬಿರಿದು ಉರಿಯುತಿದೆ
ಮೆರೆಯುತಿವೆ ಘಾತಕ ಶಕ್ತಿಗಳು
ಪರಿಹಾರ ತೋಚದ ಶ್ರೀ ಸಾಮಾನ್ಯನ
ತೊಳಲು ಕೊಚ್ಚಿ ಹೋಗುತಿದೆ

ನಾ ಮುಂದೆ ನೀ ಮುಂದೆನ್ನುತಾ…
ರಾರಾಜಿಸುತಿಹರು ಸಮಾಜ ಪೀಡೆಗಳು
ನ್ಯಾಯ… ನೀತಿ ಗಾಳಿಗೆ ತೂರಿ
ಅಟ್ಟಹಾಸದಿ ನಗುತ ಮೆರೆಯುತಿಹರು

ಯೋಜನೆ, ಯೋಚನೆಯ, ನೆಪದಲಿ
ಹಣದ ಪೋಲು ಮಾಡುತಿಹರು
ಉದ್ಧಾರ ಅಭಿವೃದ್ಧಿಯೆನ್ನುತಲಿವರು
ದಾರಿದ್ರ್‍ಯದಾಳದಲಿ ತಳ್ಳುತಿಹರು

ನಮ್ಮನು ಬಲಿಪಶುವಾಗಿಸಿ
ಏರುತಿಹರು ಸ್ವಾರ್ಥ ಚುಕ್ಕಾಣಿಕೆಯ
ಇಳಿಸಬೇಕು ನಾವುಗಳು ಒಂದಾಗಿ…
ಕಲಿಸಬೇಕು ನೀತಿ ಪಾಠವನು
ನಡೆಸಬೇಕು ಮನುಷ್ಯ ಪಥದ ದಾರಿಯಲಿ

ಶ್ರೀ ಸಾಮಾನ್ಯನು ಕೊರಗುತ ಮುದುಡದೆ
ಏಳಬೇಕು ಎಚ್ಚರವಾಗಬೇಕು
ಶಿಕ್ಷಣ-ಸಂಘಟನೆ ಅಪ್ಪಿಕೊಳ್ಳುತ…
ಸಾಗಬೇಕು ಹೋರಾಟದ ಹಾದಿ ಹುಡುಕುತ
ಸಮಾನತೆ ಕಹಳೆ ಮೊಳಗಿಸುತ….

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಿಟ್ಟಿಹುಳಗಳು ಎದ್ದಾವು ನೋಡು
Next post ಕಲ್ಲುಗಡಗಿಯ ಒಳಗೆ ಹಕ್ಕಿ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys