Home / ಕವನ / ಕವಿತೆ / ಕನ್ನಡ ರಕ್ಷಿಸ ಬನ್ನಿರೋ

ಕನ್ನಡ ರಕ್ಷಿಸ ಬನ್ನಿರೋ

ಬನ್ನಿ ಬನ್ನಿ ಕನ್ನಡಿಗರೆ ಒಂದಾಗಿ ಸೇರೋಣ ಬನ್ನಿರೋ
ಕನ್ನಡ ಜ್ಯೋತಿ ಕನ್ನಡದ ಕೀರ್ತಿ ಬೆಳಗಿಸೋಣ ಬನ್ನಿರೋ

ಸಾವಿರಾರು ಜೀವಿಗಳಿಂದ ಕನ್ನಡದ ಕೀರ್ತಿ
ಮೊಳಗಿಸುತ್ತಾ ಬೆಳಗಿಸುತ್ತಾ ಬಂದಿದೆ ರಕ್ಷಿಸೋಣ ಬನ್ನಿರೋ
ಕನ್ನಡ ನಾಡಿನ ಜಲನೆಲ ತಮಗೆಲ್ಲ
ಕಲ್ಪವೃಕ್ಷ ನಾಡು ನುಡಿಯೇ ರಕ್ಷಿಸೋಣ ಬನ್ನಿರೋ

ಕನ್ನಡವೆಂಬ ವಿದ್ಯಾ ಮಂದಿರಲ್ಲಿ ಕುಳಿತು
ಕನ್ನಡಿಗನೆಂಬ ಗುರುವಿನೊಂದಿಗೆ ನಲಿಯುತ್ತ
ಕನ್ನಡವ ಓದು-ಬರಹ ಕಲಿಯಲು ಬನ್ನಿರೋ
ಓ ಕನ್ನಡಿಗರೆ ಓಡೋಡಿ ಬನ್ನಿರೋ

ಕರ್ನಾಟಕ ರಾಜ್ಯದಲ್ಲಿ ಕನ್ನಡವ ಅರಿತು
ಕನ್ನಡ ಭಾಷೆಗೆ ರಕ್ಷಿಸಲು ಮುಂದೆ ಬನ್ನಿರೋ
ಕನ್ನಡಿಗರ ಮನಮನದೂದ್ದಕ್ಕೂ ಕನ್ನಡ ಕಹಳೆ
ಕನ್ನಡವೇ ಉಸಿರಾಗಿಸೋಣ ಬನ್ನಿರೋ

ಜಾತಿ ಮತ ಪಂಥ ಭೇದವ ಮರೆತು
ಕನ್ನಡಕ್ಕಾಗಿ ಹೋರಾಟಕೆ ಹೊರಾಡ ಬನ್ನಿರೋ
ದೇಶದೂದ್ದಕ್ಕೂ ಕನ್ನಡವೆಂಬ ಕಹಳೆ
ಮೊಳಗಿಸಲು ಓ ಪ್ರೀಯ ಕನ್ನಡಿಗರೆ ಬನ್ನಿರೋ

ಕನ್ನಡ ತಾಯಿ ನುಡಿಯೇ ಮಧುರ
ಕನ್ನಡವೇ ಸುಲಭ ಕನ್ನಡವೇ ಸುಂದರ
ಕನ್ನಡಾಂಬೆಯ ತವರು ಕರ್ನಾಟಕವೇ
ಎಂದು ಆತ್ಮ ಸ್ಥೈರ್ಯದಿ ಸಾರಿ ಹೇಳ ಬನ್ನಿರೋ

ಕನ್ನಡವೇ ನಮ್ಮ ನಿಮ್ಮೆಲ್ಲರ
ಉಸಿರಾಗಿಸೋಣ ಬನ್ನಿರೋ ಬೇಗ ಬನ್ನಿರೋ
ಓ ಕನ್ನಡಾಭಿಮಾನಿಗಳೆ ಬನ್ನಿರೋ
ಕನ್ನಡಾಂಬೆಗೆ ನಮೋ ಹೇಳ ಬನ್ನಿರೋ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...