Home / ಕವನ / ಕವಿತೆ / ಕನ್ನಡ ರಕ್ಷಿಸ ಬನ್ನಿರೋ

ಕನ್ನಡ ರಕ್ಷಿಸ ಬನ್ನಿರೋ

ಬನ್ನಿ ಬನ್ನಿ ಕನ್ನಡಿಗರೆ ಒಂದಾಗಿ ಸೇರೋಣ ಬನ್ನಿರೋ
ಕನ್ನಡ ಜ್ಯೋತಿ ಕನ್ನಡದ ಕೀರ್ತಿ ಬೆಳಗಿಸೋಣ ಬನ್ನಿರೋ

ಸಾವಿರಾರು ಜೀವಿಗಳಿಂದ ಕನ್ನಡದ ಕೀರ್ತಿ
ಮೊಳಗಿಸುತ್ತಾ ಬೆಳಗಿಸುತ್ತಾ ಬಂದಿದೆ ರಕ್ಷಿಸೋಣ ಬನ್ನಿರೋ
ಕನ್ನಡ ನಾಡಿನ ಜಲನೆಲ ತಮಗೆಲ್ಲ
ಕಲ್ಪವೃಕ್ಷ ನಾಡು ನುಡಿಯೇ ರಕ್ಷಿಸೋಣ ಬನ್ನಿರೋ

ಕನ್ನಡವೆಂಬ ವಿದ್ಯಾ ಮಂದಿರಲ್ಲಿ ಕುಳಿತು
ಕನ್ನಡಿಗನೆಂಬ ಗುರುವಿನೊಂದಿಗೆ ನಲಿಯುತ್ತ
ಕನ್ನಡವ ಓದು-ಬರಹ ಕಲಿಯಲು ಬನ್ನಿರೋ
ಓ ಕನ್ನಡಿಗರೆ ಓಡೋಡಿ ಬನ್ನಿರೋ

ಕರ್ನಾಟಕ ರಾಜ್ಯದಲ್ಲಿ ಕನ್ನಡವ ಅರಿತು
ಕನ್ನಡ ಭಾಷೆಗೆ ರಕ್ಷಿಸಲು ಮುಂದೆ ಬನ್ನಿರೋ
ಕನ್ನಡಿಗರ ಮನಮನದೂದ್ದಕ್ಕೂ ಕನ್ನಡ ಕಹಳೆ
ಕನ್ನಡವೇ ಉಸಿರಾಗಿಸೋಣ ಬನ್ನಿರೋ

ಜಾತಿ ಮತ ಪಂಥ ಭೇದವ ಮರೆತು
ಕನ್ನಡಕ್ಕಾಗಿ ಹೋರಾಟಕೆ ಹೊರಾಡ ಬನ್ನಿರೋ
ದೇಶದೂದ್ದಕ್ಕೂ ಕನ್ನಡವೆಂಬ ಕಹಳೆ
ಮೊಳಗಿಸಲು ಓ ಪ್ರೀಯ ಕನ್ನಡಿಗರೆ ಬನ್ನಿರೋ

ಕನ್ನಡ ತಾಯಿ ನುಡಿಯೇ ಮಧುರ
ಕನ್ನಡವೇ ಸುಲಭ ಕನ್ನಡವೇ ಸುಂದರ
ಕನ್ನಡಾಂಬೆಯ ತವರು ಕರ್ನಾಟಕವೇ
ಎಂದು ಆತ್ಮ ಸ್ಥೈರ್ಯದಿ ಸಾರಿ ಹೇಳ ಬನ್ನಿರೋ

ಕನ್ನಡವೇ ನಮ್ಮ ನಿಮ್ಮೆಲ್ಲರ
ಉಸಿರಾಗಿಸೋಣ ಬನ್ನಿರೋ ಬೇಗ ಬನ್ನಿರೋ
ಓ ಕನ್ನಡಾಭಿಮಾನಿಗಳೆ ಬನ್ನಿರೋ
ಕನ್ನಡಾಂಬೆಗೆ ನಮೋ ಹೇಳ ಬನ್ನಿರೋ
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...