ಕನ್ನಡ ರಕ್ಷಿಸ ಬನ್ನಿರೋ

ಬನ್ನಿ ಬನ್ನಿ ಕನ್ನಡಿಗರೆ ಒಂದಾಗಿ ಸೇರೋಣ ಬನ್ನಿರೋ
ಕನ್ನಡ ಜ್ಯೋತಿ ಕನ್ನಡದ ಕೀರ್ತಿ ಬೆಳಗಿಸೋಣ ಬನ್ನಿರೋ

ಸಾವಿರಾರು ಜೀವಿಗಳಿಂದ ಕನ್ನಡದ ಕೀರ್ತಿ
ಮೊಳಗಿಸುತ್ತಾ ಬೆಳಗಿಸುತ್ತಾ ಬಂದಿದೆ ರಕ್ಷಿಸೋಣ ಬನ್ನಿರೋ
ಕನ್ನಡ ನಾಡಿನ ಜಲನೆಲ ತಮಗೆಲ್ಲ
ಕಲ್ಪವೃಕ್ಷ ನಾಡು ನುಡಿಯೇ ರಕ್ಷಿಸೋಣ ಬನ್ನಿರೋ

ಕನ್ನಡವೆಂಬ ವಿದ್ಯಾ ಮಂದಿರಲ್ಲಿ ಕುಳಿತು
ಕನ್ನಡಿಗನೆಂಬ ಗುರುವಿನೊಂದಿಗೆ ನಲಿಯುತ್ತ
ಕನ್ನಡವ ಓದು-ಬರಹ ಕಲಿಯಲು ಬನ್ನಿರೋ
ಓ ಕನ್ನಡಿಗರೆ ಓಡೋಡಿ ಬನ್ನಿರೋ

ಕರ್ನಾಟಕ ರಾಜ್ಯದಲ್ಲಿ ಕನ್ನಡವ ಅರಿತು
ಕನ್ನಡ ಭಾಷೆಗೆ ರಕ್ಷಿಸಲು ಮುಂದೆ ಬನ್ನಿರೋ
ಕನ್ನಡಿಗರ ಮನಮನದೂದ್ದಕ್ಕೂ ಕನ್ನಡ ಕಹಳೆ
ಕನ್ನಡವೇ ಉಸಿರಾಗಿಸೋಣ ಬನ್ನಿರೋ

ಜಾತಿ ಮತ ಪಂಥ ಭೇದವ ಮರೆತು
ಕನ್ನಡಕ್ಕಾಗಿ ಹೋರಾಟಕೆ ಹೊರಾಡ ಬನ್ನಿರೋ
ದೇಶದೂದ್ದಕ್ಕೂ ಕನ್ನಡವೆಂಬ ಕಹಳೆ
ಮೊಳಗಿಸಲು ಓ ಪ್ರೀಯ ಕನ್ನಡಿಗರೆ ಬನ್ನಿರೋ

ಕನ್ನಡ ತಾಯಿ ನುಡಿಯೇ ಮಧುರ
ಕನ್ನಡವೇ ಸುಲಭ ಕನ್ನಡವೇ ಸುಂದರ
ಕನ್ನಡಾಂಬೆಯ ತವರು ಕರ್ನಾಟಕವೇ
ಎಂದು ಆತ್ಮ ಸ್ಥೈರ್ಯದಿ ಸಾರಿ ಹೇಳ ಬನ್ನಿರೋ

ಕನ್ನಡವೇ ನಮ್ಮ ನಿಮ್ಮೆಲ್ಲರ
ಉಸಿರಾಗಿಸೋಣ ಬನ್ನಿರೋ ಬೇಗ ಬನ್ನಿರೋ
ಓ ಕನ್ನಡಾಭಿಮಾನಿಗಳೆ ಬನ್ನಿರೋ
ಕನ್ನಡಾಂಬೆಗೆ ನಮೋ ಹೇಳ ಬನ್ನಿರೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದುಕ
Next post ಅವನ ಹೆಸರಲ್ಲಿ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…