ಮುದುಕ

ಹೆಗಲೇರಿ ಕುಳಿತುಬಿಟ್ಟಿದ್ದಾನೆ ಮರ್ಕಟಿ ಮುದುಕ
ಇಳಿಯುವುದಿಲ್ಲ ಕೊಡವಿದರೆ ಬೀಳುವುದಿಲ್ಲ
ಕಾಲದ ಆಯಾಮಕ್ಕೆ ಸುತ್ತಿಹಾಕಿದ
ಸ್ಥಿರವಾದ ಬಾಧಕ ಸ್ವಯಂಕೃತ
ಕೃತತ್ರೇತಗಳ ಗೂನು
ನಾನು ನಡೆಯಬೇಕಾದಲ್ಲಿ ನಡೆಯ ಗೊಡದೇ
ನಾನು ಓಡಬೇಕಾದಲ್ಲಿ ಓಡಗೊಡದೇ
ನನಗೆ ವಿಶ್ರಾಂತಿ ಬೇಕಾದಲ್ಲಿ ಬಿಡದೇ
ಹೆಗಲ ಮೇಲೇರಿ ಕುಳಿತ ಅಜೀಗರ್ತ
ಲೆಪ್ರಸಿಯಂತೆ ಮೈಗೆ
ಕ್ಯಾನ್ಸರಿನಂತೆ ಸ್ಮೃತಿಗೆ
ಅಂಟಿಕೊಂಡಿದ್ದಾನೆ ಈತ!

ಮುತ್ತಾತ
ಇವನ ಮೂಗಿನ ತುದಿಗೆ ಬೆವರಿನ ಬಿಂದು ಇಳಿದು
ದಾಡಿಯಲ್ಲಿ ಹರಿದು ಚಹಾದ ಕಪ್ಪಿಗೆ ಬಿದ್ದು
ಮೈ ಬೆವರು ಕರೆದು ನಕ್ಕಿದ್ದ ಬಾಯಿಗಟಾರ
ಈತ ದೊಡ್ಡ ಎರೆಹುಳವಾಗಿ ಉದ್ದಕ್ಕೆ ಹೊದ್ದು
ನಡು ಬಗ್ಗಿಸಿ ಲಾಳದಂತೆದ್ದು ಅಲ್ಲೇ ಬಿದ್ದು
ನಶಾದ ವೃದ್ಧನ ಬೇಡಾದ ರತಿಯ ನಿಷ್ಫಲ
ಕಚಗುಳಿಯ ಹೇಸಿಗೆ ಮೈಮೇಲೆ ಹರಿಸಿ
ಈತ ಲಕ್ವಾ ಹೊಡಿಸಿ ಮೌನಿ!

ಶೂನ್ಯಕ್ಕೆ ನೋಡಿ
ಕೊನೆಗೊಂದು ದಿನ ನನ್ನ ಹೆಗಲ ಮೇಲೆ ಚಟ್ಟಾದಲ್ಲಿ ಸವಾರಿ ಬಿಟ್ಟ
ಕಪ್ಪು ಹೊಗೆಬಂಡಿಯಂತೆ ಕಟ್ಟೆಗೆ ಇವನ ಚುಟ್ಟಾ ಸೇದಿ
ಎಲ್ಲಾ ಮುಗಿಯಿತೆಂದು ಮುಳುಗು ಹಾಕಿದರೆ
ಎದ್ದಾಗ ಹೆಗಲ ಮೇಲೆ ಇವನ ಇಮ್ಮಡಿ ಒಜ್ಜೆ
ಮಂತ್ರದ ಮಾಟದ ಸೋಗು ಹಾಕಿ ವಿಚಿತ್ರ ಮುಖವಾಡದೊಳಗೆ
ಒಸಡು ಬಿರಿಯುವ ಹಾಗೆ ಧ್ವನಿಸುತ್ತದೆ ಇದು
ಇದಕ್ಕೆ ಪ್ರತಿಧ್ವನಿ ಕೊಟ್ಟೆನೇ?
ಇದರ ವರ್ತುಲದಲ್ಲಿ ಸುತ್ತಿದೆನೇ?
ಸುತ್ತಾ ಸುತ್ತಾ ನಾನೂ ಮುದುಕಾ
ಬರಿ ಕಂಬಕ್ಕೆ ನನ್ನ ಕಟ್ಟಿ ನಾನೇ ಕಟ್ಟಿದೆನೇ?
ಕತ್ತಿ ಹಿರಿದು ಹಲ್ಗಿರಿದು
ಬರುತ್ತಿದ್ದಾನೆ-ನಾನೇ ಬಂದೆನೇ?
ಬಲಿ ಕೊಡುವುದಕ್ಕೆ ನನ್ನ ನಾನೇ?

ಏಪ್ರಿಲಿನ ಝಳಕ್ಕೆ ಒಂಟಿ ಹಾಸಿಗೆಯಲ್ಲಿ ಬಿದ್ದು
ಕಣ್ಣರಳಿಸಿ ನೋಡಿದೆ; ಸಿಗಾರು ಹಚ್ಚೆ ಸೇದಿದೆ;
ಆ ಮುದುಕ ಸತ್ತದ್ದು ನಿಜ
ಆದರೆ ಇವರಾರು ಸುತ್ತ ಮುತ್ತ
ದುಃಸ್ವಪ್ನದ ತುಂಡುಗಳು
ಬಿಸಿಲಿಗೆ ಬಿದ್ದ ಎರೆ ಹುಳುಗಳು
ಬೆಂಕಿಗೆ ಬಿದ್ದ ನರೆಳುಗಳು
ಇದು ಯಾರ ಸಂತಾನ?
ನನ್ನದೇ? ಅವನದೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೊಗಸೆಯೊಳಗಿನ ಬಿಂದು
Next post ಕನ್ನಡ ರಕ್ಷಿಸ ಬನ್ನಿರೋ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys