Home / ಕವನ / ಕವಿತೆ / ಗ್ನಾನದ್ ದೀಪ

ಗ್ನಾನದ್ ದೀಪ

ಯೆಂಡ ಕುಡದೋನ್ ಕಂತೇಂತ ಯೋಳಿ
ನೆಗದೆ ಯೋಳಾದ್ ಕೇಳು;
ಒಂದ್ ದಿನಾರ ಸಾಜಾ ತಿಳಕೊ-
ಇದ್ದೇ ಇರತೈತ್ ಗೋಳು! ೧

ಬೀದಿ ದೀಪ ಇರತೈತ್ ಅಂಗೇ!
ಇರೋ ಜಾಗದಾಗೇನೆ;
ನಡಿತಾನಿದ್ರೆ ನೆಳ್ಳೊಂದ್ ಮಾತ್ರ
ಬತ್ತೈತ್ ಯಿಂದಾಗೇನೆ. ೨

ದೀಪದ್ ಬೆಳಕು ಬೇಕಂತ್ ಅಂದ್ರೆ
ವೋಗ್ಬೇಕ್ ಅದರ್ ತಾಕೇನೆ!
ನೆಳ್ಳಿನ್ ಕತ್ಲೆ ಬೇಡಾಂತ್ ಅಂದ್ರು
ಬತ್ತೈತ್ ಯಿಂದಾಗೇನೆ. ೩

ಇದನ ಕಾಣ್ತ ಕಾಣ್ತ ನಂಗೆ
ನೆಪ್ಗೆ ಬಂದಂಗ್ ಆತು-
‘ಬೆಳಕೆ ಗ್ನಾನ, ಕತ್ಲ್ ಅಗ್ನಾನ’
ಅನ್ನೋ ದೊಡ್ಡೋರ್ ಮಾತು! ೪

‘ಗ್ನಾನಕ್ ಮನ್ಸ ಕಸ್ಟ್ ಬೀಳ್ಬೇಕು’
ಅನ್ನೋ ದೊಡ್ಡೋರ್ ಮಾತು,
‘ಅಗ್ನಾನ್ಕ್ ಏನೂ ಬೇಡಾನ್ನೋ’ದು
ಸಾಜಾ ಆದಂಗಾತು! ೫

ದೀಪದ್ ತಾಕೆ ಬತ್ತಂದ್ರದೋ
ಕಾಲಿನ್ ಕೆಳಗೆ ನೆಳ್ಳು!
‘ಅಗ್ನಾನೆಲ್ಲ ಗ್ನಾನಕ್ ಸರಣು’
ಅನ್ನೋದ್ ಅದಕೆ ತಿಳ್ಳು! ೬

ದೊಡ್ದೊಡ್ ಸತ್ಯ ನಂ ಮುಂದೇನೆ
ಬಿದ್ಕೊಂಡ್ ಒದ್ದಾಡ್ತಿದ್ರೂ
ಸುಂಕಿದ್ದೇವೆ. ಯಾವಾಗ್ ಅದನ
ನಾವ್ಗೊಳ್ ಕಲಿಯೋದಾದ್ರೂ? ೭

ತಿಳದೋರ್ ಕಾಲ್ ಇಡಕೊಂಡಿ ಕಲಿಯೋರ್
ಯಿಂದಿನ್ ಕಾಲ್ದಾಗ್ ಇದ್ರು;
ಕಲಿಯೋ ಮಂದಿ ಎಲ್ಲೌರೀಗ
ಕಲ್ಸೋರ್ ಮೇಲ್ ಬಂದ್ ಬಿದ್ರೂ! ೮
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...