Home / ಕವನ / ಕವಿತೆ / ಗ್ನಾನದ್ ದೀಪ

ಗ್ನಾನದ್ ದೀಪ

ಯೆಂಡ ಕುಡದೋನ್ ಕಂತೇಂತ ಯೋಳಿ
ನೆಗದೆ ಯೋಳಾದ್ ಕೇಳು;
ಒಂದ್ ದಿನಾರ ಸಾಜಾ ತಿಳಕೊ-
ಇದ್ದೇ ಇರತೈತ್ ಗೋಳು! ೧

ಬೀದಿ ದೀಪ ಇರತೈತ್ ಅಂಗೇ!
ಇರೋ ಜಾಗದಾಗೇನೆ;
ನಡಿತಾನಿದ್ರೆ ನೆಳ್ಳೊಂದ್ ಮಾತ್ರ
ಬತ್ತೈತ್ ಯಿಂದಾಗೇನೆ. ೨

ದೀಪದ್ ಬೆಳಕು ಬೇಕಂತ್ ಅಂದ್ರೆ
ವೋಗ್ಬೇಕ್ ಅದರ್ ತಾಕೇನೆ!
ನೆಳ್ಳಿನ್ ಕತ್ಲೆ ಬೇಡಾಂತ್ ಅಂದ್ರು
ಬತ್ತೈತ್ ಯಿಂದಾಗೇನೆ. ೩

ಇದನ ಕಾಣ್ತ ಕಾಣ್ತ ನಂಗೆ
ನೆಪ್ಗೆ ಬಂದಂಗ್ ಆತು-
‘ಬೆಳಕೆ ಗ್ನಾನ, ಕತ್ಲ್ ಅಗ್ನಾನ’
ಅನ್ನೋ ದೊಡ್ಡೋರ್ ಮಾತು! ೪

‘ಗ್ನಾನಕ್ ಮನ್ಸ ಕಸ್ಟ್ ಬೀಳ್ಬೇಕು’
ಅನ್ನೋ ದೊಡ್ಡೋರ್ ಮಾತು,
‘ಅಗ್ನಾನ್ಕ್ ಏನೂ ಬೇಡಾನ್ನೋ’ದು
ಸಾಜಾ ಆದಂಗಾತು! ೫

ದೀಪದ್ ತಾಕೆ ಬತ್ತಂದ್ರದೋ
ಕಾಲಿನ್ ಕೆಳಗೆ ನೆಳ್ಳು!
‘ಅಗ್ನಾನೆಲ್ಲ ಗ್ನಾನಕ್ ಸರಣು’
ಅನ್ನೋದ್ ಅದಕೆ ತಿಳ್ಳು! ೬

ದೊಡ್ದೊಡ್ ಸತ್ಯ ನಂ ಮುಂದೇನೆ
ಬಿದ್ಕೊಂಡ್ ಒದ್ದಾಡ್ತಿದ್ರೂ
ಸುಂಕಿದ್ದೇವೆ. ಯಾವಾಗ್ ಅದನ
ನಾವ್ಗೊಳ್ ಕಲಿಯೋದಾದ್ರೂ? ೭

ತಿಳದೋರ್ ಕಾಲ್ ಇಡಕೊಂಡಿ ಕಲಿಯೋರ್
ಯಿಂದಿನ್ ಕಾಲ್ದಾಗ್ ಇದ್ರು;
ಕಲಿಯೋ ಮಂದಿ ಎಲ್ಲೌರೀಗ
ಕಲ್ಸೋರ್ ಮೇಲ್ ಬಂದ್ ಬಿದ್ರೂ! ೮
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...