ನೆತ್ತಿಯೊಳಗೆ ವಿಷದ ಬ್ರೂಣ
ಮೈಯಲ್ಲಿ ಕಲಬೆರಕೆ ರಕ್ತ ಹೊತ್ತ ದೇಹದ
(ದೇಶದ) ರಾಷ್ಟ್ರನಾಯಕರು
ಹಸಿರು ನೀರಡಿಕೆಗಳ ಜ್ವಲಂತ ಸಮಸ್ಯೆಯಲ್ಲಿ
ಇವರು ಮದಿರಾಪಾನಕ್ಕೆ ಹಾತೊರೆಯುತ್ತಾರೆ.
ಬೆಲೆ ಕಟ್ಟದ ಪ್ರೀತಿ ಪ್ರೇಮಕ್ಕಾಗಿ
ಕೊಲೆಗಳಾಗಿ ಕೊಲೆಗಡುಕರಾಗುತ್ತಿದ್ದರೆ –
ಇವರು ಬೆಲೆಕೊಟ್ಟುಕಾಮಿಸಿ ಕೊಲ್ಲಿಸಿ
ಸಾಧು ಜೀವಿಗಳಾಗುತಿರುವರು.
ರಾಷ್ಟ್ರ ಸೌಧಗಳಲ್ಲೆಲ್ಲ ಢಕಾಯಿತರು
ಬಹಿರಂಗವಾಗಿ ಲೂಟಿ ಮಾಡುತ್ತವೆ
ಶಾಂತಿಯಾತ್ರೆ ಮುಗಿಸಿಕೊಂಡು ಬಂದ ಇವರು
ರಾಮ – ಬುದ್ಧರ ದೇಶದಲ್ಲೇನಾಗುತ್ತಿದೆಯಲ್ಲ
ಎಂದು ಪತ್ರಕರ್ತರಿಗೆ ಭಾಷಣ ಬಿಗಿದು
ಕಳಿಸಿ –
ಮಧಿರೆಯ ಸ್ನೇಹ ಬೆಳಿಸಿ
ಮತ್ತೆ ವಿಷಜಂತುಗಳಿಂದ
ಬ್ರೂಣಗಳನ್ನು ಹುಟ್ಟಿಸಿಕೊಳ್ಳುತ್ತಲೇ
ಯಾವುದಕ್ಕೂ ನ್ಯಾಯಕೊಡದೆ
ಬಿದ್ದುಹೋಗುತ್ತವೆ
*****
Related Post
ಸಣ್ಣ ಕತೆ
-
ರಾಮಿ
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…
-
ಗಂಗೆ ಅಳೆದ ಗಂಗಮ್ಮ
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…
-
ಎರಡು ರೆಕ್ಕೆಗಳು
ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…