ನೆತ್ತಿಯೊಳಗೆ ವಿಷದ ಬ್ರೂಣ
ಮೈಯಲ್ಲಿ ಕಲಬೆರಕೆ ರಕ್ತ ಹೊತ್ತ ದೇಹದ
(ದೇಶದ) ರಾಷ್ಟ್ರನಾಯಕರು
ಹಸಿರು ನೀರಡಿಕೆಗಳ ಜ್ವಲಂತ ಸಮಸ್ಯೆಯಲ್ಲಿ
ಇವರು ಮದಿರಾಪಾನಕ್ಕೆ ಹಾತೊರೆಯುತ್ತಾರೆ.
ಬೆಲೆ ಕಟ್ಟದ ಪ್ರೀತಿ ಪ್ರೇಮಕ್ಕಾಗಿ
ಕೊಲೆಗಳಾಗಿ ಕೊಲೆಗಡುಕರಾಗುತ್ತಿದ್ದರೆ –
ಇವರು ಬೆಲೆಕೊಟ್ಟುಕಾಮಿಸಿ ಕೊಲ್ಲಿಸಿ
ಸಾಧು ಜೀವಿಗಳಾಗುತಿರುವರು.
ರಾಷ್ಟ್ರ ಸೌಧಗಳಲ್ಲೆಲ್ಲ ಢಕಾಯಿತರು
ಬಹಿರಂಗವಾಗಿ ಲೂಟಿ ಮಾಡುತ್ತವೆ
ಶಾಂತಿಯಾತ್ರೆ ಮುಗಿಸಿಕೊಂಡು ಬಂದ ಇವರು
ರಾಮ – ಬುದ್ಧರ ದೇಶದಲ್ಲೇನಾಗುತ್ತಿದೆಯಲ್ಲ
ಎಂದು ಪತ್ರಕರ್ತರಿಗೆ ಭಾಷಣ ಬಿಗಿದು
ಕಳಿಸಿ –
ಮಧಿರೆಯ ಸ್ನೇಹ ಬೆಳಿಸಿ
ಮತ್ತೆ ವಿಷಜಂತುಗಳಿಂದ
ಬ್ರೂಣಗಳನ್ನು ಹುಟ್ಟಿಸಿಕೊಳ್ಳುತ್ತಲೇ
ಯಾವುದಕ್ಕೂ ನ್ಯಾಯಕೊಡದೆ
ಬಿದ್ದುಹೋಗುತ್ತವೆ
*****
Related Post
ಸಣ್ಣ ಕತೆ
-
ಮಲ್ಲೇಶಿಯ ನಲ್ಲೆಯರು
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…