ಮಗನಿಗೆ

ನಿನ್ನ ಹಸಿವ ಹಿಂಗಿಸಲಿಲ್ಲವೆಂದು
ಬಯ್ಯಬೇಡ.
ಈ ಪುಣ್ಯ ಭೂಮಿಯಲಿ,
ಪವಿತ್ರ ನದಿಗಳ
ಸಂಗಮವಿದೆ
ನಿನ್ನ ಹೊಟ್ಟೆ ತಣ್ಣಗಿಡಲು.

ಪದಕಗಳಿಸುವ ವಿದ್ಯೆ
ಕಲಿಸಲಿಲ್ಲವೆಂದು
ಜರಿಯ ಬೇಡ.
ಋಷಿ ಮುನಿಗಳ
ವೇದ ಗ್ರಂಥಗಳಿವೆ
ನೀನು ಸಂಸ್ಕಾರ ಹೊಂದಲು.

ನಡುರಾತ್ರಿಯ ಕತ್ತಲಲಿ
ಕೈ ಬಿಟ್ಟೆನೆಂದು
ಹಲುಬಬೇಡ.
ರಾತ್ರಿಯ ಕತ್ತಲಲಿ
ಮಿನುಗುತ್ತವೆ ನಕ್ಷತ್ರಗಳು
ನಿನಗೆ ಬೆಳಕು ನೀಡಲು.

ನಿನ್ನ ದೇಶ ಪ್ರೇಮದ ಬಗ್ಗೆ
ಶಂಕಿಸಿದರೆಂದು
ಮರುಗಬೇಡ.
ಆತ್ಮಬಲ ಒಂದಿರಲಿ
ನೀಡುವಳು ಭಾರತಾಂಬೆ
ನಿನಗೆ ಶ್ರೀರಕ್ಷೆ.

ಅಪನಂಬಿಕೆಗೆ ಕುಗ್ಗದಿರು
ಇರಲಿ ದೇಶ ಪ್ರೇಮ
ಕೊನೆತನಕ.
ಇರುಳಿನ ಹಿಂದಿದೆ ಹಗಲು
ಎದ್ದೇಳು!
ಬಿಡುತವಕ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂನನ ಮಗಳು ಕೆಂಚಿಯೂ….
Next post ಕುಂತಿ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…