ಮಗನಿಗೆ

ನಿನ್ನ ಹಸಿವ ಹಿಂಗಿಸಲಿಲ್ಲವೆಂದು
ಬಯ್ಯಬೇಡ.
ಈ ಪುಣ್ಯ ಭೂಮಿಯಲಿ,
ಪವಿತ್ರ ನದಿಗಳ
ಸಂಗಮವಿದೆ
ನಿನ್ನ ಹೊಟ್ಟೆ ತಣ್ಣಗಿಡಲು.

ಪದಕಗಳಿಸುವ ವಿದ್ಯೆ
ಕಲಿಸಲಿಲ್ಲವೆಂದು
ಜರಿಯ ಬೇಡ.
ಋಷಿ ಮುನಿಗಳ
ವೇದ ಗ್ರಂಥಗಳಿವೆ
ನೀನು ಸಂಸ್ಕಾರ ಹೊಂದಲು.

ನಡುರಾತ್ರಿಯ ಕತ್ತಲಲಿ
ಕೈ ಬಿಟ್ಟೆನೆಂದು
ಹಲುಬಬೇಡ.
ರಾತ್ರಿಯ ಕತ್ತಲಲಿ
ಮಿನುಗುತ್ತವೆ ನಕ್ಷತ್ರಗಳು
ನಿನಗೆ ಬೆಳಕು ನೀಡಲು.

ನಿನ್ನ ದೇಶ ಪ್ರೇಮದ ಬಗ್ಗೆ
ಶಂಕಿಸಿದರೆಂದು
ಮರುಗಬೇಡ.
ಆತ್ಮಬಲ ಒಂದಿರಲಿ
ನೀಡುವಳು ಭಾರತಾಂಬೆ
ನಿನಗೆ ಶ್ರೀರಕ್ಷೆ.

ಅಪನಂಬಿಕೆಗೆ ಕುಗ್ಗದಿರು
ಇರಲಿ ದೇಶ ಪ್ರೇಮ
ಕೊನೆತನಕ.
ಇರುಳಿನ ಹಿಂದಿದೆ ಹಗಲು
ಎದ್ದೇಳು!
ಬಿಡುತವಕ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂನನ ಮಗಳು ಕೆಂಚಿಯೂ….
Next post ಕುಂತಿ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys