Home / ಕವನ / ಕವಿತೆ / ಕುಂತಿ

ಕುಂತಿ

ಸೂರ್ಯ ಕಂತಿದ್ದಾನೆ ಅವಳು
ದಿನದ ದಗದ ಮುಗಿಸಿ ಹೊರಳುತ್ತಿದ್ದಾಳೆ
ಧೂಳು ಕಾಲುದಾರಿಯಲ್ಲಿ
ಉಸುಕಿನಲ್ಲಿ ಅವಳ ಹೆಜ್ಜೆಗಳು
ಮೂಡುವದಿಲ್ಲ, ಬರೀ ನಿಟ್ಟುಸಿರು ಕೇಳುತ್ತದೆ.

ಮಗಳು ಈ ದಿನ ಯಾಕೋ
ಮಂಕಾಗಿದ್ದಳು ಹಾರಿ ಬರುವ
ಹಗಲ ಬಿಸಿಲಿಗೆ ಹೆದರಿದ್ದಾಳೆ,
ಅಪ್ಪನ ಕಣ್ಣಲ್ಲಿ ನಿಗಿ ನಿಗಿ ಸೂರ್ಯ!
ಉತ್ತರ ಸಿಗದ ಪ್ರಶ್ನೆ ಪತ್ರಿಕೆಗಳು

ಭ್ರಮೆಯಲಿ ನಡುಗೆಯ ಕನಸು
ತೊಯ್ದ ಒರೆಯಲಿ ಗಂಜೀ
ಬೇಯಿಸುವ ಪರಿಪಾಠ, ಮುಳ್ಳು
ತುಂಬಿದ ಕಳ್ಳೀಕಂಠಿ ಓಣಿ
ನದಿಯೊಳಗೆ ಅತ್ತ ಇತ್ತ ತೇಲುವ ದೋಣಿ.

ತಲೆಯಿರುವ ಜಾಗದಲಿ ಹಣ್ಣಾದ
ಕೂದಲು ಗಂಟು, ಮಾಸಿದ ಚಿಕ್ಕೀ ಬಳೆಗಳು
ಹಚ್ಚಾಗಿವೆ ಎದೆಯ ಭಾರ ಪುಟ್ಟೀ
ಒಂಟಿಯಾಗಿ ನಡೆದಿದ್ದಾಳೆ ಕುಂತೀ
ಎಲ್ಲಾ ಸರಿಯುವ ಜಗದ ಪಾಡು.

ಮಕ್ಕಳು ಕಾಲು ತುಂಬ ಬಿಗಿದ ಸರಪಳಿ
ಹಾಲು ಉಣಿಸಿದ ತಟ್ಟೆಯಲಿ ವಿಷ
ಮನೆತುಂಬ ಹರಡಿದ ಹಗೆ ಹೊಗೆ
ಬೀದಿಗೆ ಬಂದು ಹೊರಳಾಡಿದ ಕವಿತೆ
ಕತ್ತಲು ಆಕಾಶದ ಅಂಬರದಲಿ ಚಿಕ್ಕಿಗಳಿಲ್ಲ.

ಒಂಟಿ ಮನೆಯಲಿ ಹೊರಳಾಡಿದ
ಕುಂತಿ ತಾಯಿ ಮನಸ್ಸು ಮರುಗಿತು
ಬೆನ್ನಿಗಂಟಿದ ಯುದ್ಧ ವಾಸನೆ ತಿಳಿ
ಗೇಡಿನ ಕೇಡಿನ ಆಟದಲಿ ಮೈಮರೆತವರು
ಕೇಳಲಿಲ್ಲ ಅವಳ ಹೃದಯದ ಕೂಗು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...