ಕುಂತಿ

ಸೂರ್ಯ ಕಂತಿದ್ದಾನೆ ಅವಳು
ದಿನದ ದಗದ ಮುಗಿಸಿ ಹೊರಳುತ್ತಿದ್ದಾಳೆ
ಧೂಳು ಕಾಲುದಾರಿಯಲ್ಲಿ
ಉಸುಕಿನಲ್ಲಿ ಅವಳ ಹೆಜ್ಜೆಗಳು
ಮೂಡುವದಿಲ್ಲ, ಬರೀ ನಿಟ್ಟುಸಿರು ಕೇಳುತ್ತದೆ.

ಮಗಳು ಈ ದಿನ ಯಾಕೋ
ಮಂಕಾಗಿದ್ದಳು ಹಾರಿ ಬರುವ
ಹಗಲ ಬಿಸಿಲಿಗೆ ಹೆದರಿದ್ದಾಳೆ,
ಅಪ್ಪನ ಕಣ್ಣಲ್ಲಿ ನಿಗಿ ನಿಗಿ ಸೂರ್ಯ!
ಉತ್ತರ ಸಿಗದ ಪ್ರಶ್ನೆ ಪತ್ರಿಕೆಗಳು

ಭ್ರಮೆಯಲಿ ನಡುಗೆಯ ಕನಸು
ತೊಯ್ದ ಒರೆಯಲಿ ಗಂಜೀ
ಬೇಯಿಸುವ ಪರಿಪಾಠ, ಮುಳ್ಳು
ತುಂಬಿದ ಕಳ್ಳೀಕಂಠಿ ಓಣಿ
ನದಿಯೊಳಗೆ ಅತ್ತ ಇತ್ತ ತೇಲುವ ದೋಣಿ.

ತಲೆಯಿರುವ ಜಾಗದಲಿ ಹಣ್ಣಾದ
ಕೂದಲು ಗಂಟು, ಮಾಸಿದ ಚಿಕ್ಕೀ ಬಳೆಗಳು
ಹಚ್ಚಾಗಿವೆ ಎದೆಯ ಭಾರ ಪುಟ್ಟೀ
ಒಂಟಿಯಾಗಿ ನಡೆದಿದ್ದಾಳೆ ಕುಂತೀ
ಎಲ್ಲಾ ಸರಿಯುವ ಜಗದ ಪಾಡು.

ಮಕ್ಕಳು ಕಾಲು ತುಂಬ ಬಿಗಿದ ಸರಪಳಿ
ಹಾಲು ಉಣಿಸಿದ ತಟ್ಟೆಯಲಿ ವಿಷ
ಮನೆತುಂಬ ಹರಡಿದ ಹಗೆ ಹೊಗೆ
ಬೀದಿಗೆ ಬಂದು ಹೊರಳಾಡಿದ ಕವಿತೆ
ಕತ್ತಲು ಆಕಾಶದ ಅಂಬರದಲಿ ಚಿಕ್ಕಿಗಳಿಲ್ಲ.

ಒಂಟಿ ಮನೆಯಲಿ ಹೊರಳಾಡಿದ
ಕುಂತಿ ತಾಯಿ ಮನಸ್ಸು ಮರುಗಿತು
ಬೆನ್ನಿಗಂಟಿದ ಯುದ್ಧ ವಾಸನೆ ತಿಳಿ
ಗೇಡಿನ ಕೇಡಿನ ಆಟದಲಿ ಮೈಮರೆತವರು
ಕೇಳಲಿಲ್ಲ ಅವಳ ಹೃದಯದ ಕೂಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗನಿಗೆ
Next post ನಿವೇದನೆ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…