ಗಝಲ್

ಈ ಸಂಜಿ ಈ ರಾತ್ರಿ ಬಂದೇ ಬರುವಿಯೆಂದು ಕಾದೆ
ಮೌನದ ಬೆಳದಿಂಗಳು ಸುಮಧುರಯಾತನೆ ಏಕಾಂಗಿ

ಏನಿದು ಕಾತುರ ಏನಿದು ಬೇಸರ ಎಂತಿಷ್ಟೋ ಉಸಿರು
ಬಾಗಿಲು ತೆರೆದಿದೆ ತೋರಣ ಕರೆದಿದೆ ಬಾಬಾ ಎಂದು

ಅದರುವ ತುಟಿಗಳು ಕಂಬನಿ ಕಣ್ಣುಗಳು ಕಾದಿವೆ
ಜಾರುಗೊಡುವುದಿಲ್ಲ ಈ ಹನಿಗಳನು ಬತ್ತಿಸುವುದಿಲ್ಲ ತುಟಿ

ವಸಂತ ಗಿಡಗಿಡಕೆಲ್ಲ ಆಕ್ರಮಿಸಿ ಜೀಕಾಡಿ ಹರೆನಗುವಾಗ
ನೀನಲ್ಲಿ ಆ ಊರಲ್ಲಿ ಅರ್ಥವಿಲ್ಲದ ರಾತ್ರಿಗಳೊಂದಿಗೆ

ಚಂದ್ರ ಇಣುಕದಂತೆ ಗಾಳಿನೂಕಿ ಮನಕುಗ್ಗದಂತೆ
ಕಿಟಕಿ ಹಾಕಿ ಪರದೆ ಎಳೆದು ದೀಪಸಣ್ಣಾಗಿಸಿ ಒರಗಿರುವೆ

ಭರವಸೆಯೊಳಗೆ ಕನಸು ಕಟ್ಟಿಸಿ ಬರುವಾಗ ಬೇಕೆಂದಿದ್ದೇನು
ಒಗಟಾಗಿಸುತಿರುವೆ ಈ ಚಳಿರಾತ್ರಿಯ ನನಸುಗಳನು

ಬೆಳಕಾಯಿತು, ಹೂವಾಡಗಿತ್ತಿಯ ಮತ್ತೊಂದು ಮಾಲೆ, ರಂಗೋಲಿ ನಗು
ತುಟಿ ಬತ್ತಿ ಕಂಬನಿ ಉದುರಿವೆ ಮೈಮನ ಉರಿದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧೀಜಿಗೆ
Next post ಲಿಂಗಮ್ಮನ ವಚನಗಳು – ೨೯

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys