Home / ಕವನ / ಕವಿತೆ / ಕಾವ್ಯಕಲಾಪಿ

ಕಾವ್ಯಕಲಾಪಿ

ಹೃದಯ ತುಂಬಿ; ದುಂಬಿಯಾಗಿ
ರಸಿಕವರ್ಣ ಮೂಡಲಿ; ಒನಪುಗರಿಯು ಚಿಗುರಲಿ
ಅಂತರಂಗ ಹರ್ಷ ಕೂಗಿ
ಸೃಷ್ಟಿ ಸ್ಪುರಿಸಿ ರಾಗ ಮಾಡಲಿ; ಹೃದಯ ತಾಳ ಹಾಕಲಿ

ಪಕ್ಕ ಬೀಸಿ, ಮುಂದೆ ಈಸಿ
ಚುಕ್ಕೆಯಡೆಗೆ ಓಡಲಿ, ರವಿಯ ಒಡನೆ ಆಡಲಿ
ಮೇಲೆ ಏರಿ, ಹೃದಯ ಸೋಸಿ
ಸತ್ಯ ಶಿವನ ಕಾಣಲಿ; ನಿತ್ಯ ಸೊಗಸು ಸವಿಯಲಿ

ರಸಿಕ ಹಕ್ಕಿ ಹೃದಯ ಕುಕ್ಕಿ
ಚಲ್ವ ಚಣಿಲವೊಲ್ ಜಿಗಿದು ಪುಟಿದು ಆಡಲಿ
ಸೈರವೆಳಸಿ ಸೊಗಸು ಸೊಕ್ಕಿ
ಸಲಿಲ ಸುಧೆಗೆ ಹಾರಲಿ; ಮಿನುಗು ಮೀನವಾಗಿ ಈಸಲಿ

ಪಿಕರುತಿಯ ಕಂಠ ಕರೆದು
ಕಾಡನೆಲ್ಲ ನಗಿಸಲಿ; ಕಾವ್ಯ ಕಿನ್ನರಿಯ ನುಡಿಸಲಿ
ತಂತಿ ಮಿಡಿದು; ಕಾವ್ಯ ಕುಣಿದು
ಹೃದಯ ತಣಿದು ಹಾಡಲಿ; ಬಾಳ ಬನವ ಮಾಡಲಿ

ಹೂವ ಹರಿದು, ಹಣ್ಣ ಕಡಿದು
ಸವಿಯ ರಸವ ಕುಡಿಯಲಿ; ನವಿರು ನಾಡಿ ನುಡಿಯಲಿ
ನೆಲ್ಲಿ ಕವಳಿ ಎಲ್ಲ ಜಗಿದು
ಕಬ್ಬು ಮುರಿದು ಮೆಲ್ಲಲಿ; ಸೃಷ್ಟಿ ಸೊಬಗು ಸವಿಯಲಿ

ಚಲುವು ಚಿಮ್ಮಿ; ಹರ್ಷ ಹೊಮ್ಮಲಿ
ಕಾವ್ಯಲತೆಯು ಕುಡಿಯನೊಡೆದು ನವ್ಯ ವಾಗಿ ನಿಲ್ಲಲಿ
ಸರ್ಗಗಂಗೆ ವರ್ಷ ಕರೆಯಲಿ
ಗರಿಯನುಚ್ಚಿ ಮುದದಿ ಕುಣಿವ ಕಾವ್ಯಕಲಾಪಿಯಾಗಲಿ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...