ಯಾರ ಹಂಗೂ ಇಲ್ಲದೇ

ನೀನು ಬರಿ ನೋವ ಕೊಟ್ಟೆ,
ಚಿಂತಿಸುವ ಭಾರ ಎನ್ನದೆ.
ಈಗ ನಂಬಿಕೂಡುವ ಕಾಲ ಇಲ್ಲ,
ಯಾಕೆಂದರೆ ದಬ್ಬಾಳಿಕೆ ನಡೆಯೋಲ್ಲ.
ಗೊತ್ತು ನನ್ನ ಹಾಗೆ ವಿಚಾರಿಸುವರು
ಬಹಳ ಮಂದಿ ಇದ್ದಾರೆ ಯಾರ ಹಂಗೂ ಇಲ್ಲದೇ.

ನೀನು ಬರೀ ನೆನಪು ಬಟ್ಟೆ
ಅದರಪಟ್ಟಿಗೆ ಗುದ್ದಾಡುತ್ತ ನಾನು
ಬದುಕಲೆತ್ನಿಸಿದೆ, ನೂರು ಮಾತುಗಳು
ಕುಹಕಗಳು, ಮನಸ್ಸನ್ನು ಕೆಡಿಸಲಿಲ್ಲ,
ನನ್ನ ಓಟದ ಬದುಕು ನನ್ನದಾಗಿತ್ತು,
ಅವರಿವರು ಹೀಗೆ ಯೋಚಿಸುತ್ತಿದ್ದಾರೆ ಯಾರ ಹಂಗೂ ಇಲ್ಲದೇ.

ನೀನು ಬರೀ ಕನಸುಗಳ ಕೊಟ್ಟೆ
ಎಲ್ಲವನು ಉಡಿಯಲಿರಿಸಿ ಬಣ್ಣದ
ಕಾಮನ ಬಿಲ್ಲನ್ನೇರಿ ಪಯಣಿಸಿದೆ,
ಸಾವಿರ ಕಣ್ಣುಗಳ ಚುಚ್ಚು ನೋಟ
ವಿಶಾಲ ಪ್ರೀತಿಗೆ ಎಲ್ಲಿಲ್ಲ ಹೇಳು ನೋವು?
ಕೆಲವರು ನಡೆಯುತ್ತಿದ್ದಾರೆ ಯಾರ ಹಂಗೂ ಇಲ್ಲದೇ.

ನೀನು ಬರೀ ಸುಳ್ಳುಗಳ ಹೇಳಿದೆ
ಸತ್ಯವೆಂದು ನಂಬಿ ಎಳೆ ರಂಗೋಲಿ
ಎಳೆ ಬದುಕು ಚಿತ್ರ ವಿಚಿತ್ರವೆಂದು
ಮಾತಿನ ಮಂಟಪವ ಕಟ್ಟಿದೆ,
ನೋಯಿಸುವ ನುಡಿ ನೊಂದ ತಪ್ತ ಹೃದಯ,
ಆದರೂ ಎಲ್ಲರೂ ಓಡುತ್ತಿದ್ದಾರೆ ಯಾರ ಹಂಗೂ ಇಲ್ಲದೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮರ್ಥನೆ : ಗಂಡ
Next post ಅಲೆಮಾರಿ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…