Home / ಕವನ / ಕವಿತೆ / ಕ್ಷಮಿಸು ತಂದೆ

ಕ್ಷಮಿಸು ತಂದೆ

ಎಲ್ಲರೆದೆಯೊಳಗೂ ಬಿರುಕಿನ ಗೋಡೆಗಳು
ಅದೇಕೆ ಅಷ್ಟಷ್ಟು ಎತ್ತರ ಇಷ್ಟಿಷ್ಟು ಅಗಲ
ಅಷ್ಟೊಂದು ಆಳ ಕೊಳ್ಳ ಕಣಿವೆಗಳು
ಭಾವನೆಗಳ ತಳಪಾಯ ಅಭದ್ರ ಕೃತಕ- ದೇವರೆ!

ಯುಗಯುಗಾಂತರದ ತಿರುವು ಹೊರಳು
ಗಳೊಳಗೂ ಇತ್ತು ಬಿತ್ತಿ ಬೆಳೆವ
ಪ್ರೀತಿ ಪ್ರೇಮ ವಿಶ್ವಾಸಗಳ ಬೀಜ
ಅದಕೇಕಿಂದು ರಾಹು ಬಡಿದು ಮೊಳಕೆ
ಒಡೆಯದೇ ಮನಮನ ಕಾಡಿಸುತಿವೆ- ದೇವರೆ!

ದಿಕ್ಕುದಿಕ್ಕುಗಳು ಸೀಳಿ ಚಡಪಡಿಸಿ
ಸಮುದ್ರಗಳು ಭೂಕಂಪನಕೆ ಕೋಲಾಹಲಿಸಿ
ಕಾಡು ಮೇಡು ಬೆಟ್ಟಸಾಲಿನ ಮೂಕ ಜೀವಗಳ
ಮೈಸುಟ್ಟ ನೆತ್ತರವಾಸನೆ ಹರಡಿ
ಮನಸಿಗೇಕೋ ತಳಮಳ ದೇವದೇವಾ!

ರಾತ್ರಿಯ ನಿರಮ್ಮಳ ಮೌನ ಸರಿದು
ಹಗಲಾಗುವ ಹಪಹಪಿಕೆಯೊಳಗೆ ಸಂಕಟಗಳ ಸುಳಿ
ಎಲ್ಲೆಲ್ಲೂ ಹಾವು ಏಣಿಯ ಆಟ
ದಾಳಗಳು, ದಾಳಗಳು, ಪ್ರಶ್ನಾರ್ಥಕ ವಿಷವರ್ತುಲ
ಅರ್ಥಸಿಗದ ದಾರಿಯ ತುಂಬಾ ವೇದನೆ ಚಡಪಡಿಕೆ- ದೇವರೆ!

ಕಳಿಸಿರುವೆ ಈ ಜಾತ್ರೆಗೆ ಮತಿತುಂಬಿ
ಕರೆಸಿಕೊಳ್ಳುವವನೂ ನೀನೆ
ಭಕ್ತರೊಳಗೆ ನೀನು, ನಿನ್ನೊಳಗೆ ಭಕ್ತರು
ಕರುಣಿಸು ಕರುಣಾಮಯನೆ ಮತಿಗೆಟ್ಟವರ.

ಸುರಿಸು ಎಲ್ಲರೆದೆಯಂಗಳಕೆ
ಪ್ರೀತಿ ಪ್ರೇಮ ವಿಶ್ವಾಸಗಳ ಧಾರಾಕಾರ ಮಳೆ-
ನಿನ್ನದೇ ಮಕ್ಕಳು, ನಿನ್ನದೇ ಉಸಿರು, ನಿನ್ನದೇ ಹಸಿರು
ತೇಲಿಸಿಬಿಡು ಅವರವರ ಕರ್ಮಕಾಂಡ
ಬಂಜರಿಸದಿರು ಭಾವನೆಗಳ ಭೂಮಿ
ಕ್ಷಮಿಸು, ತಂದೆ, ಶರಣು ಶರಣು ನಿನ್ನ ಪಾದಕೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...