Home / ಕವನ / ಕವಿತೆ / ಅಂತರಾಳ

ಅಂತರಾಳ

ನಾನು ಹೆಣ್ಣು ಯುಗದ ಕಣ್ಣು
ದಾತ ದಾತನ ದಾತೆಯು,
ಮುಗಿಲಿನೆದೆಗೂ ಮಿಗಿಲು ನಾನು
ವಿಶ್ವ ಸೃಷ್ಟಿಯ ತಾಯಿಯು,
ಕಡಲ ಒಡಲಿನಾಳದಾಳ ನಾನು
ಜಗದ ಜೋಗುಳ ಗೀತೆಯು |

ಉರಿಯು ತಂಪು ತಾರಾ ಮಿಣುಪು
ಸಗ್ಗ ಋತುವಿನ ಸೋನೆಯು,
ಶೃಂಗ ಶೃಂಗದ ಶೃಂಗ ನಂದನ
ಭೃಂಗದೆದೆಯ ಮಿಡಿತವು,
ದಟ್ಟ ಝರಿ ವನ ಬನ ರಾಜಿ ನಾನು
ಧಮನಿ ಧಮನಿಗೂ ರುಧಿರವು |

ಇರದ ದೇವರನಿರವ ರೂಪಿನ
ತ್ಯಾಗ ಭೋಗ ಭಾಗ್ಯದ ಭರಣಿಯು,
ಬಿತ್ತು ಬಿತ್ತಿಗೆ ರೂಪ ರೂಹನು
ತಿದ್ದಿ ತೀಡೋ ಭ್ರೂಣ ಲತಿಕೆಯು,
ಪುರುಷ ನಿನಗೆ ಪ್ರಕೃತಿ ನಾನು
ಉಳಿವು ಬೆಳೆವಿನ ನಿಯತಿಯು |

ಅಂದು ಇಂದು ಹಿಂದೆಂದಿನಿಂದೋ
ಬಂಧ ಬಂಧದ ದಿಗ್ಭಂಧನ
ಸೃಷ್ಟಿ ದಿಟ್ಟಿಯ ಪುರುಷ ನಿನ್ನಯ
ಕೈಯಲುಗಿನೆದೆಯ ಚಂದನ
ಪಡೆದ ಕೊಸರೊಲವ ಋಣಿಯು ನಾನು
ತೆರುವ ವಡ್ಡಿ ಚಕ್ರದ ದಾಳವು |

ಆವ ಮನುವಿನ ಸ್ಮೃತಿ ವಿಸ್ಮೃತಿಯೋ
ಸೆಲೆಯ ಬಲೆಯ ಜಾಲವೊ
ಆವಕ್ಕರದಕ್ಕರಕೂ ನನ್ನ ನೆತ್ತರೆ ಶಾಯಿಯು
ವ್ಯಕ್ತಾವ್ಯಕ್ತ ಭೀತಿಯ ಛಾಯೆಯು
ಬರೆದ ಬರಹದ ಹೊಗೆಯ ಹಗೆಯ ನೀನು
ನನ್ನ ಬಸಿರ ಪ್ರಸೂತನು |

ಸುರತಿ ಸುಖದಾ ಬಯಲ ಬತ್ತಲೋ
ಹುತ್ತ ಹೊಕ್ಕ ಶುಕ್ರನ ಧಾರಿಣಿ
ವಿರತಿ ಶೃತಿಗೂ ರಾಗರತಿಯನುರಾಗಿಯು
ಒಲವ ಹೂಮಳೆ ಶೃಂಗಾರಿಣಿ
ಹುಟ್ಟು ಬೆಳೆವು ಮುಳುಗಟ್ಟು ಕಟ್ಟ ಬಟ್ಟೆ ನಾನು
ಭಾವ ಶೂನ್ಯ ಜನದೆದೆ ಜಗದಲಿ |

ಯಶದ ಯಶದಾಧಾರ ಧಾರ ತೊರೆಯು
ಯಶವಂತನಾ ಬೆನ್ನ ನೆರಳಲಿ
ಶೂದ್ರಸ್ಪುಶ್ಯ ಮೋಹ ಕಾಮಿ ಮಾಯೆಯು
ಕ್ರೂರ ಪುರುಷ ಕಲ್ಪದ ಸರಳಲಿ
ರಸದ ಜನನಕೆ ವಿರಸ ಮರಣಕೆ
ಸಮರಸದ ಬದುಕಿನ ದೀಪ ಕನ್ನಿಕೆ |
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ