Home / ಕವನ / ಕವಿತೆ / ಅಂತರಾಳ

ಅಂತರಾಳ

ನಾನು ಹೆಣ್ಣು ಯುಗದ ಕಣ್ಣು
ದಾತ ದಾತನ ದಾತೆಯು,
ಮುಗಿಲಿನೆದೆಗೂ ಮಿಗಿಲು ನಾನು
ವಿಶ್ವ ಸೃಷ್ಟಿಯ ತಾಯಿಯು,
ಕಡಲ ಒಡಲಿನಾಳದಾಳ ನಾನು
ಜಗದ ಜೋಗುಳ ಗೀತೆಯು |

ಉರಿಯು ತಂಪು ತಾರಾ ಮಿಣುಪು
ಸಗ್ಗ ಋತುವಿನ ಸೋನೆಯು,
ಶೃಂಗ ಶೃಂಗದ ಶೃಂಗ ನಂದನ
ಭೃಂಗದೆದೆಯ ಮಿಡಿತವು,
ದಟ್ಟ ಝರಿ ವನ ಬನ ರಾಜಿ ನಾನು
ಧಮನಿ ಧಮನಿಗೂ ರುಧಿರವು |

ಇರದ ದೇವರನಿರವ ರೂಪಿನ
ತ್ಯಾಗ ಭೋಗ ಭಾಗ್ಯದ ಭರಣಿಯು,
ಬಿತ್ತು ಬಿತ್ತಿಗೆ ರೂಪ ರೂಹನು
ತಿದ್ದಿ ತೀಡೋ ಭ್ರೂಣ ಲತಿಕೆಯು,
ಪುರುಷ ನಿನಗೆ ಪ್ರಕೃತಿ ನಾನು
ಉಳಿವು ಬೆಳೆವಿನ ನಿಯತಿಯು |

ಅಂದು ಇಂದು ಹಿಂದೆಂದಿನಿಂದೋ
ಬಂಧ ಬಂಧದ ದಿಗ್ಭಂಧನ
ಸೃಷ್ಟಿ ದಿಟ್ಟಿಯ ಪುರುಷ ನಿನ್ನಯ
ಕೈಯಲುಗಿನೆದೆಯ ಚಂದನ
ಪಡೆದ ಕೊಸರೊಲವ ಋಣಿಯು ನಾನು
ತೆರುವ ವಡ್ಡಿ ಚಕ್ರದ ದಾಳವು |

ಆವ ಮನುವಿನ ಸ್ಮೃತಿ ವಿಸ್ಮೃತಿಯೋ
ಸೆಲೆಯ ಬಲೆಯ ಜಾಲವೊ
ಆವಕ್ಕರದಕ್ಕರಕೂ ನನ್ನ ನೆತ್ತರೆ ಶಾಯಿಯು
ವ್ಯಕ್ತಾವ್ಯಕ್ತ ಭೀತಿಯ ಛಾಯೆಯು
ಬರೆದ ಬರಹದ ಹೊಗೆಯ ಹಗೆಯ ನೀನು
ನನ್ನ ಬಸಿರ ಪ್ರಸೂತನು |

ಸುರತಿ ಸುಖದಾ ಬಯಲ ಬತ್ತಲೋ
ಹುತ್ತ ಹೊಕ್ಕ ಶುಕ್ರನ ಧಾರಿಣಿ
ವಿರತಿ ಶೃತಿಗೂ ರಾಗರತಿಯನುರಾಗಿಯು
ಒಲವ ಹೂಮಳೆ ಶೃಂಗಾರಿಣಿ
ಹುಟ್ಟು ಬೆಳೆವು ಮುಳುಗಟ್ಟು ಕಟ್ಟ ಬಟ್ಟೆ ನಾನು
ಭಾವ ಶೂನ್ಯ ಜನದೆದೆ ಜಗದಲಿ |

ಯಶದ ಯಶದಾಧಾರ ಧಾರ ತೊರೆಯು
ಯಶವಂತನಾ ಬೆನ್ನ ನೆರಳಲಿ
ಶೂದ್ರಸ್ಪುಶ್ಯ ಮೋಹ ಕಾಮಿ ಮಾಯೆಯು
ಕ್ರೂರ ಪುರುಷ ಕಲ್ಪದ ಸರಳಲಿ
ರಸದ ಜನನಕೆ ವಿರಸ ಮರಣಕೆ
ಸಮರಸದ ಬದುಕಿನ ದೀಪ ಕನ್ನಿಕೆ |
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...