Home / ಕವನ / ಕವಿತೆ / ಅಂತರಾಳ

ಅಂತರಾಳ

ನಾನು ಹೆಣ್ಣು ಯುಗದ ಕಣ್ಣು
ದಾತ ದಾತನ ದಾತೆಯು,
ಮುಗಿಲಿನೆದೆಗೂ ಮಿಗಿಲು ನಾನು
ವಿಶ್ವ ಸೃಷ್ಟಿಯ ತಾಯಿಯು,
ಕಡಲ ಒಡಲಿನಾಳದಾಳ ನಾನು
ಜಗದ ಜೋಗುಳ ಗೀತೆಯು |

ಉರಿಯು ತಂಪು ತಾರಾ ಮಿಣುಪು
ಸಗ್ಗ ಋತುವಿನ ಸೋನೆಯು,
ಶೃಂಗ ಶೃಂಗದ ಶೃಂಗ ನಂದನ
ಭೃಂಗದೆದೆಯ ಮಿಡಿತವು,
ದಟ್ಟ ಝರಿ ವನ ಬನ ರಾಜಿ ನಾನು
ಧಮನಿ ಧಮನಿಗೂ ರುಧಿರವು |

ಇರದ ದೇವರನಿರವ ರೂಪಿನ
ತ್ಯಾಗ ಭೋಗ ಭಾಗ್ಯದ ಭರಣಿಯು,
ಬಿತ್ತು ಬಿತ್ತಿಗೆ ರೂಪ ರೂಹನು
ತಿದ್ದಿ ತೀಡೋ ಭ್ರೂಣ ಲತಿಕೆಯು,
ಪುರುಷ ನಿನಗೆ ಪ್ರಕೃತಿ ನಾನು
ಉಳಿವು ಬೆಳೆವಿನ ನಿಯತಿಯು |

ಅಂದು ಇಂದು ಹಿಂದೆಂದಿನಿಂದೋ
ಬಂಧ ಬಂಧದ ದಿಗ್ಭಂಧನ
ಸೃಷ್ಟಿ ದಿಟ್ಟಿಯ ಪುರುಷ ನಿನ್ನಯ
ಕೈಯಲುಗಿನೆದೆಯ ಚಂದನ
ಪಡೆದ ಕೊಸರೊಲವ ಋಣಿಯು ನಾನು
ತೆರುವ ವಡ್ಡಿ ಚಕ್ರದ ದಾಳವು |

ಆವ ಮನುವಿನ ಸ್ಮೃತಿ ವಿಸ್ಮೃತಿಯೋ
ಸೆಲೆಯ ಬಲೆಯ ಜಾಲವೊ
ಆವಕ್ಕರದಕ್ಕರಕೂ ನನ್ನ ನೆತ್ತರೆ ಶಾಯಿಯು
ವ್ಯಕ್ತಾವ್ಯಕ್ತ ಭೀತಿಯ ಛಾಯೆಯು
ಬರೆದ ಬರಹದ ಹೊಗೆಯ ಹಗೆಯ ನೀನು
ನನ್ನ ಬಸಿರ ಪ್ರಸೂತನು |

ಸುರತಿ ಸುಖದಾ ಬಯಲ ಬತ್ತಲೋ
ಹುತ್ತ ಹೊಕ್ಕ ಶುಕ್ರನ ಧಾರಿಣಿ
ವಿರತಿ ಶೃತಿಗೂ ರಾಗರತಿಯನುರಾಗಿಯು
ಒಲವ ಹೂಮಳೆ ಶೃಂಗಾರಿಣಿ
ಹುಟ್ಟು ಬೆಳೆವು ಮುಳುಗಟ್ಟು ಕಟ್ಟ ಬಟ್ಟೆ ನಾನು
ಭಾವ ಶೂನ್ಯ ಜನದೆದೆ ಜಗದಲಿ |

ಯಶದ ಯಶದಾಧಾರ ಧಾರ ತೊರೆಯು
ಯಶವಂತನಾ ಬೆನ್ನ ನೆರಳಲಿ
ಶೂದ್ರಸ್ಪುಶ್ಯ ಮೋಹ ಕಾಮಿ ಮಾಯೆಯು
ಕ್ರೂರ ಪುರುಷ ಕಲ್ಪದ ಸರಳಲಿ
ರಸದ ಜನನಕೆ ವಿರಸ ಮರಣಕೆ
ಸಮರಸದ ಬದುಕಿನ ದೀಪ ಕನ್ನಿಕೆ |
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...