Home / ಕವನ / ಕವಿತೆ / ಪಂಚ ಕನ್ಯೆಯರು

ಪಂಚ ಕನ್ಯೆಯರು

ಬ್ರಿಟೀಷ್ ಏರ್‌ವೇಸ್ ಪಯಣ
ಒಳಗಡೆ ಬಿಳಿಯ ಐದೂ ಹುಡುಗಿಯರ ಕಲವರ;
ಇವರು ಪಂಚಕನ್ಯೆಯರೆ…..
ಹಾಗೆಂದೇ ಕರೆಯುತ್ತಿದ್ದಾರೆ ಸಹ
ಭಾರತೀಯ ಪಯಣಿಗರು. ಜೊತೆಗೆ
ಹಸಿರು ಕಣ್ಣಿನ ಕೆಂಪು ತುಟಿಯ
ಈಗಷ್ಟೇ ಅರಳಿದಂತಿರುವ ಗುಲಾಬಿ ಸಖಿಯರು.

ತೂಗುಬಿಟ್ಟ ಗೊಂಡೆಜಡೆ, ಎತ್ತಿ ಕಟ್ಟಿದ
ಕೂದಲಗಂಟು ಸುತ್ತಲೂ ಮಲ್ಲಿಗೆ ಮಾಲೆ
ಶಂಕಚಕ್ರ ಚಿಪ್ಪು ಮಣಿ ಹವಳ
ರುದ್ರಾಕ್ಷಿ ತಾಯಿತ ಕರಿಮಣಿಗಳ ಸರಗಳು
ಕತ್ತಿಗೆ ಭಾರವಾದರೂ ಸಂತೋಷಿಸುವ ರೀತಿ

ಕೊಲ್ಹಾಪೂರಿ ಚಪ್ಪಲಿ, ಬಣ್ಣಬಣ್ಣದ
ಹಾವು ಚೇಳಿನ ಅಂದದ ಕುಂಕುಮ ಬಿಂದಿಗಳು
ಕೈತುಂಬಾ ಗಾಜಿನ ಬಳೆ, ಕಾಲಿಗೆ ಗೆಜ್ಜೆ, ಮೂಗಿಗೆ ನತ್ತು
ಚೂಡಿದಾರ್‍, ಗಾಗರಾಚೋಲಿ, ಮಿಂಚು ಮಿಂಚಿನ
ಟೀಶರ್ಟ್, ಲಾಲ್ ದುಪ್ಪಟ್ಟಾ
ಹತ್ತಾರು ಹಿಂದಿ ಮಾತು ಕಥೆ ಹಾಡು
(ಹವಾಮೆ ಉಡತೆ ಜಾಯೆ ಮೇರೆ ಲಾಲದುಪಟ್ಟಾ
ಮಲ್ ಮಲ್ ಜಿಹೋ ಜೀ….)

ಇತಿಹಾಸ ಓದಿ ಕೇಳಿ ಬಂದ
ಇಂಗ್ಲೆಂಡ್ ಹುಡುಗಿಯರ ಭಾರತ ಪ್ರವಾಸ
ಕಂಡದ್ದೆಲ್ಲಾ ಕೊಂಡು ನೋಡಿದ ಪ್ರೀತಿ

ಇಡೀ ದೇಶಸುತ್ತಿ ಮೋಜು ಮಜ
ಮಾಡಿದಿರಾ? ಕುಟುಕಿದ್ದಕ್ಕೆ
ಸಂಶೋಧನಾ ವಿದ್ಯಾರ್ಥಿನಿಯರ
“ಸಂಸ್ಕೃತಿ ಅಧ್ಯಯನ” ಪರಿ ಬಿಡಿಬಿಡಿಸಿ
ಹೇಳಿದಂತೆ
ಕುತೂಹಲದ ಬಿಳಿಯ ಬ್ರಿಟೀಷರು
ಸುತ್ತಿ ಸುತ್ತಿ ಕಪ್ಪಾಗಿ ಮುಖತುಂಬ ಬೊಬ್ಬೆದ್ದ
ಪಂಚಕನ್ಯೆಯರನು ತಬ್ಬಿ
“ನಮ್ಮ ಹುಡುಗಿಯರ ಸಾಧನೆ” ಎಂದಾಗ
ಪೆಚ್ಚಾದ ಭಾರತೀಯ ಪಯಣಿಗರ ಮುಖ
ಮಂಗನಂತಾಗಿದ್ದೊಂದು ಬಗೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...