Home / ಕವನ / ಕವಿತೆ / ಪಂಚ ಕನ್ಯೆಯರು

ಪಂಚ ಕನ್ಯೆಯರು

ಬ್ರಿಟೀಷ್ ಏರ್‌ವೇಸ್ ಪಯಣ
ಒಳಗಡೆ ಬಿಳಿಯ ಐದೂ ಹುಡುಗಿಯರ ಕಲವರ;
ಇವರು ಪಂಚಕನ್ಯೆಯರೆ…..
ಹಾಗೆಂದೇ ಕರೆಯುತ್ತಿದ್ದಾರೆ ಸಹ
ಭಾರತೀಯ ಪಯಣಿಗರು. ಜೊತೆಗೆ
ಹಸಿರು ಕಣ್ಣಿನ ಕೆಂಪು ತುಟಿಯ
ಈಗಷ್ಟೇ ಅರಳಿದಂತಿರುವ ಗುಲಾಬಿ ಸಖಿಯರು.

ತೂಗುಬಿಟ್ಟ ಗೊಂಡೆಜಡೆ, ಎತ್ತಿ ಕಟ್ಟಿದ
ಕೂದಲಗಂಟು ಸುತ್ತಲೂ ಮಲ್ಲಿಗೆ ಮಾಲೆ
ಶಂಕಚಕ್ರ ಚಿಪ್ಪು ಮಣಿ ಹವಳ
ರುದ್ರಾಕ್ಷಿ ತಾಯಿತ ಕರಿಮಣಿಗಳ ಸರಗಳು
ಕತ್ತಿಗೆ ಭಾರವಾದರೂ ಸಂತೋಷಿಸುವ ರೀತಿ

ಕೊಲ್ಹಾಪೂರಿ ಚಪ್ಪಲಿ, ಬಣ್ಣಬಣ್ಣದ
ಹಾವು ಚೇಳಿನ ಅಂದದ ಕುಂಕುಮ ಬಿಂದಿಗಳು
ಕೈತುಂಬಾ ಗಾಜಿನ ಬಳೆ, ಕಾಲಿಗೆ ಗೆಜ್ಜೆ, ಮೂಗಿಗೆ ನತ್ತು
ಚೂಡಿದಾರ್‍, ಗಾಗರಾಚೋಲಿ, ಮಿಂಚು ಮಿಂಚಿನ
ಟೀಶರ್ಟ್, ಲಾಲ್ ದುಪ್ಪಟ್ಟಾ
ಹತ್ತಾರು ಹಿಂದಿ ಮಾತು ಕಥೆ ಹಾಡು
(ಹವಾಮೆ ಉಡತೆ ಜಾಯೆ ಮೇರೆ ಲಾಲದುಪಟ್ಟಾ
ಮಲ್ ಮಲ್ ಜಿಹೋ ಜೀ….)

ಇತಿಹಾಸ ಓದಿ ಕೇಳಿ ಬಂದ
ಇಂಗ್ಲೆಂಡ್ ಹುಡುಗಿಯರ ಭಾರತ ಪ್ರವಾಸ
ಕಂಡದ್ದೆಲ್ಲಾ ಕೊಂಡು ನೋಡಿದ ಪ್ರೀತಿ

ಇಡೀ ದೇಶಸುತ್ತಿ ಮೋಜು ಮಜ
ಮಾಡಿದಿರಾ? ಕುಟುಕಿದ್ದಕ್ಕೆ
ಸಂಶೋಧನಾ ವಿದ್ಯಾರ್ಥಿನಿಯರ
“ಸಂಸ್ಕೃತಿ ಅಧ್ಯಯನ” ಪರಿ ಬಿಡಿಬಿಡಿಸಿ
ಹೇಳಿದಂತೆ
ಕುತೂಹಲದ ಬಿಳಿಯ ಬ್ರಿಟೀಷರು
ಸುತ್ತಿ ಸುತ್ತಿ ಕಪ್ಪಾಗಿ ಮುಖತುಂಬ ಬೊಬ್ಬೆದ್ದ
ಪಂಚಕನ್ಯೆಯರನು ತಬ್ಬಿ
“ನಮ್ಮ ಹುಡುಗಿಯರ ಸಾಧನೆ” ಎಂದಾಗ
ಪೆಚ್ಚಾದ ಭಾರತೀಯ ಪಯಣಿಗರ ಮುಖ
ಮಂಗನಂತಾಗಿದ್ದೊಂದು ಬಗೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...