ತಪೋಭೂಮಿ – ಭಾರತ ವರ್ಷ

ಧನ್ಯಭೂಮೀ-
ಮಾನ್ಯರೂಪೀ, ಕನ್ಯೆಭಾರತಿ ಪುಣ್ಯೆಯೇ!
ಏಸುಕಾಲದಿ
ಮಾಸದಳಿಯದೆ ಕೋಶಸಲಹಿದೆ-ತಾಯಿಯೆ?

ಆರ್ಯಮೊಗಲರ
ವೀರ್ಯತೇಜರ ಶೌರ್ಯದಿಂದಲಿ ಸಲಹಿದೆ-
ರಾಶಿಜನಗಣ
ಆಶ್ರಯಾ ನಿನ್ನ ಲೇಸು ಪಡೆದರು-ಅಲ್ಲವೇ?

ನೆನೆವೆ ಅಂದಿನ
ಮುನಿಜನ ಮನ, ನಿನ್ನ ವೈಭವ-ವೈಭವ!
ವೇದ ಭೂಮಿಯು-
ಬೋಧದಾಶ್ರಮ-ವಿದುಷಿ ನೀನೇ ಸ್ಫೂರ್ತಿಯು!

ಕರ್ಮಭೂಮೀ
ಧರ್ಮಯಾತ್ರಾ ಮರ್ಮದಿಂದಲಿ ಮಾಡಿದೆ
ಗೀತೆ ಭಾರತ
ಮಾತೆ ವೇದದ ಜಾತೆ ನೀನೇ-ಭಾರತೇ!

ನೆನೆವೆ ಬುದ್ಧನ
ಧಣಿದಶೋಕನ, ಮಣಿವೆ ಸಾವಿರ ಮಾಽತ್ಮಗೆ
ತಪೋಭೂಮಿ
ರೂಪುಗೊಳಿಸು ಶಪಿಸಿದಿಂದಿನ ಸ್ಥಿತಿಯನು!

ಆ ರಾಮ ಕೃಷ್ಣರ
ಶೂರ ಗಾಂಧಿಯ ಪರಮ ಹಂಸರ ಕಂಡೆನೊ;
ಅಮಿತ ದೇಶಾ-
ಭಿಮಾನ ವಾದವ ಸಾಮವಾದದಿ ತೋರಿಸಿ.

ಇಂದು ನಾಳೆಯು
ಮುಂದು ಮುಂದಕು ಸಂದಾಹಿಂಸಾ ರೂಪವ
ಸತ್ಯ ಧರ್ಮದ
ಕೇತು ಹಾರಿಸಿ, ನರ್ತಿಸು-ಎಲೊ ಭಾರತಿ!

ಸ್ಥೈರ್ಯ ಧೈರ್ಯವು
ಸೂರ್ಯಕಾಂತಿಯ ಬೀರ್ಯಮೀರುತ ಬೆಳಗಲಿ,
ಅಮರ ಲೋಕದ
ಸಾಮಗಾನವ ಧರ್ಮರೂಪಿಣಿ-ಹಾಡೆಲೊ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೫
Next post ಉಸಿರಿನ ಹಡಗು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…