ತಪೋಭೂಮಿ – ಭಾರತ ವರ್ಷ

ಧನ್ಯಭೂಮೀ-
ಮಾನ್ಯರೂಪೀ, ಕನ್ಯೆಭಾರತಿ ಪುಣ್ಯೆಯೇ!
ಏಸುಕಾಲದಿ
ಮಾಸದಳಿಯದೆ ಕೋಶಸಲಹಿದೆ-ತಾಯಿಯೆ?

ಆರ್ಯಮೊಗಲರ
ವೀರ್ಯತೇಜರ ಶೌರ್ಯದಿಂದಲಿ ಸಲಹಿದೆ-
ರಾಶಿಜನಗಣ
ಆಶ್ರಯಾ ನಿನ್ನ ಲೇಸು ಪಡೆದರು-ಅಲ್ಲವೇ?

ನೆನೆವೆ ಅಂದಿನ
ಮುನಿಜನ ಮನ, ನಿನ್ನ ವೈಭವ-ವೈಭವ!
ವೇದ ಭೂಮಿಯು-
ಬೋಧದಾಶ್ರಮ-ವಿದುಷಿ ನೀನೇ ಸ್ಫೂರ್ತಿಯು!

ಕರ್ಮಭೂಮೀ
ಧರ್ಮಯಾತ್ರಾ ಮರ್ಮದಿಂದಲಿ ಮಾಡಿದೆ
ಗೀತೆ ಭಾರತ
ಮಾತೆ ವೇದದ ಜಾತೆ ನೀನೇ-ಭಾರತೇ!

ನೆನೆವೆ ಬುದ್ಧನ
ಧಣಿದಶೋಕನ, ಮಣಿವೆ ಸಾವಿರ ಮಾಽತ್ಮಗೆ
ತಪೋಭೂಮಿ
ರೂಪುಗೊಳಿಸು ಶಪಿಸಿದಿಂದಿನ ಸ್ಥಿತಿಯನು!

ಆ ರಾಮ ಕೃಷ್ಣರ
ಶೂರ ಗಾಂಧಿಯ ಪರಮ ಹಂಸರ ಕಂಡೆನೊ;
ಅಮಿತ ದೇಶಾ-
ಭಿಮಾನ ವಾದವ ಸಾಮವಾದದಿ ತೋರಿಸಿ.

ಇಂದು ನಾಳೆಯು
ಮುಂದು ಮುಂದಕು ಸಂದಾಹಿಂಸಾ ರೂಪವ
ಸತ್ಯ ಧರ್ಮದ
ಕೇತು ಹಾರಿಸಿ, ನರ್ತಿಸು-ಎಲೊ ಭಾರತಿ!

ಸ್ಥೈರ್ಯ ಧೈರ್ಯವು
ಸೂರ್ಯಕಾಂತಿಯ ಬೀರ್ಯಮೀರುತ ಬೆಳಗಲಿ,
ಅಮರ ಲೋಕದ
ಸಾಮಗಾನವ ಧರ್ಮರೂಪಿಣಿ-ಹಾಡೆಲೊ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೫
Next post ಉಸಿರಿನ ಹಡಗು

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…