ಸಮರ್ಥನೆ : ಸೈತಾನ

ಹೆಂಡದಂಗಡಿಯಂತೆ ಕತ್ತಲು ಕೋಣೆ
ನಮ್ಮ ಮನೆ ದೇವರ ಕೋಣೆ
ದಿನಕೆರಡು ಬಾರಿ ಅವನ ಸ್ನಾನ
ಊಟ ಉಪಚಾರ ಧೂಮಪಾನ
ಈಸಾಯಿ ಧಪನದಂತೆ
ಧೂಪಾನದ ಹೊಗೆ
ಹಿತ್ತಾಳೆ ತಟ್ಟೆಯಲಿ ಕೆಂಪು
ದಾಸವಾಳದ ಹೂವು
ಆಗತಾನೇ ಕೊರೆದಿಟ್ಟ ಮಾಂಸದ ಹಾಗೆ!
ಮೌನ!
ತಲೆ ಕೆಳಗೆ ಕಾಲು ಮೇಲೆ
ಶೀರ್ಷಾಸನ ಹಾಕಿರುವ
ಬಾವಲಿಗಳ ಗಂಟೆ

ನಾನು ಬೆಳೆದಿದ್ದೇನೆ
ದೇವರಮನೆ ಗುಹೆ ಬಾಗಿಲಿಗೆ ನನ್ನ
ತಲೆ ಮರೆತು ಢಿಕ್ಕಿ ಹೊಡೆದೀತು
ಚೌಕಟ್ಟು ಬೆಳೆದಿಲ್ಲ
ನಾ ಹುಟ್ಟುವಾಗಲೂ ಇತ್ತಂತೆ ಹೀಗೆ
ಸತ್ತಮೇಲೂ ಇರಬಹುದು
ಆದರೂ ನಾನೀಗ ಬೆಳೆದಿದ್ದೇನೆ
ಈ ಕೋಣೆ ಚಿಕ್ಕದಾಯಿತು
ಅಂಬೆಗಾಲಿನ ನನ್ನ ಬೂಟಿನ ಹಾಗೆ
ಎಲ್ಲೊ ಮೂಲೆಯಲಿ ಇತ್ತು
ಕೆಲವು ದಿನ ನನ್ನ ಮಗ ಹಾಕಿ ಮೆರೆದಾಡಿದ ಅದನ್ನ
ಆ ಮೇಲೆ ಮನೆನಾಯಿ ಎಲ್ಲೊ ಕೊಂಡೊಯ್ದು
ಹರಿದು ಹಾಕಿರಬೇಕು
ಈಗ ಎಲ್ಲೆಂದು ಕೇಳಿದರೆ ಸೈತಾನ ಹೇಳುತ್ತಾನೆ :
ಸತ್ಯಸಂಗತಿ ಹೀಗೆ –
ನಾವೆಲ್ಲ ಸೇರಿ ಹೆಸರಿಗಾದರು ಇರಲಿ
ಒಬ್ಬ ನೇತಾರ ದೇವರು ಎಂತ ಮಾಡಿದರೆ
ನಮ್ಮ ತಲೆ ಮೇಲೆ ಕುಳಿತು ಪಕ್ಕೆಗೆ ತಿವಿದ!
ಹೆಗಲು ಜಾಡಿಸಿದೆವು ನಾವು
ಈತ ಪಾತಾಳಕ್ಕೆ ತಳ್ಳಿದ ನಮ್ಮ.
ನಾವು ಬಿದ್ದೆವು ಎಂಬುದಕ್ಕಲ್ಲ
ನಮಗೆ ನೈತಿಕ ಪ್ರಶ್ನೆ ಮುಖ್ಯ
ನಾವೇ ನಿಲ್ಲಿಸಿದ ಬೆರ್ಚಪ್ಪ ನಮಗೇ
ಹಾಕಿದ್ದಾನೆ ಪಂಗನಾಮ!
ನಾನು ಹೇಳುವುದಿಷ್ಟೆ : ಈ ಸಂಸ್ಥೆ
ನಮ್ಮ ನುಂಗ ತೊಡಗಿದೆ.
ಆದರೂ ಹೆದರಬೇಡಿ. ಇದು ಬರೇ
ರಟ್ಟಿನ ಸೆಟ್ಟು – ಸಿನಿಮಾದಲ್ಲಿ
ಕಾಣುವ ಹಾಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ಹೀಗೆ ಇರಬಾರದೆ
Next post ದಾರಿ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…