Home / ಕವನ / ಕವಿತೆ / ಸಮರ್ಥನೆ : ಸೈತಾನ

ಸಮರ್ಥನೆ : ಸೈತಾನ

ಹೆಂಡದಂಗಡಿಯಂತೆ ಕತ್ತಲು ಕೋಣೆ
ನಮ್ಮ ಮನೆ ದೇವರ ಕೋಣೆ
ದಿನಕೆರಡು ಬಾರಿ ಅವನ ಸ್ನಾನ
ಊಟ ಉಪಚಾರ ಧೂಮಪಾನ
ಈಸಾಯಿ ಧಪನದಂತೆ
ಧೂಪಾನದ ಹೊಗೆ
ಹಿತ್ತಾಳೆ ತಟ್ಟೆಯಲಿ ಕೆಂಪು
ದಾಸವಾಳದ ಹೂವು
ಆಗತಾನೇ ಕೊರೆದಿಟ್ಟ ಮಾಂಸದ ಹಾಗೆ!
ಮೌನ!
ತಲೆ ಕೆಳಗೆ ಕಾಲು ಮೇಲೆ
ಶೀರ್ಷಾಸನ ಹಾಕಿರುವ
ಬಾವಲಿಗಳ ಗಂಟೆ

ನಾನು ಬೆಳೆದಿದ್ದೇನೆ
ದೇವರಮನೆ ಗುಹೆ ಬಾಗಿಲಿಗೆ ನನ್ನ
ತಲೆ ಮರೆತು ಢಿಕ್ಕಿ ಹೊಡೆದೀತು
ಚೌಕಟ್ಟು ಬೆಳೆದಿಲ್ಲ
ನಾ ಹುಟ್ಟುವಾಗಲೂ ಇತ್ತಂತೆ ಹೀಗೆ
ಸತ್ತಮೇಲೂ ಇರಬಹುದು
ಆದರೂ ನಾನೀಗ ಬೆಳೆದಿದ್ದೇನೆ
ಈ ಕೋಣೆ ಚಿಕ್ಕದಾಯಿತು
ಅಂಬೆಗಾಲಿನ ನನ್ನ ಬೂಟಿನ ಹಾಗೆ
ಎಲ್ಲೊ ಮೂಲೆಯಲಿ ಇತ್ತು
ಕೆಲವು ದಿನ ನನ್ನ ಮಗ ಹಾಕಿ ಮೆರೆದಾಡಿದ ಅದನ್ನ
ಆ ಮೇಲೆ ಮನೆನಾಯಿ ಎಲ್ಲೊ ಕೊಂಡೊಯ್ದು
ಹರಿದು ಹಾಕಿರಬೇಕು
ಈಗ ಎಲ್ಲೆಂದು ಕೇಳಿದರೆ ಸೈತಾನ ಹೇಳುತ್ತಾನೆ :
ಸತ್ಯಸಂಗತಿ ಹೀಗೆ –
ನಾವೆಲ್ಲ ಸೇರಿ ಹೆಸರಿಗಾದರು ಇರಲಿ
ಒಬ್ಬ ನೇತಾರ ದೇವರು ಎಂತ ಮಾಡಿದರೆ
ನಮ್ಮ ತಲೆ ಮೇಲೆ ಕುಳಿತು ಪಕ್ಕೆಗೆ ತಿವಿದ!
ಹೆಗಲು ಜಾಡಿಸಿದೆವು ನಾವು
ಈತ ಪಾತಾಳಕ್ಕೆ ತಳ್ಳಿದ ನಮ್ಮ.
ನಾವು ಬಿದ್ದೆವು ಎಂಬುದಕ್ಕಲ್ಲ
ನಮಗೆ ನೈತಿಕ ಪ್ರಶ್ನೆ ಮುಖ್ಯ
ನಾವೇ ನಿಲ್ಲಿಸಿದ ಬೆರ್ಚಪ್ಪ ನಮಗೇ
ಹಾಕಿದ್ದಾನೆ ಪಂಗನಾಮ!
ನಾನು ಹೇಳುವುದಿಷ್ಟೆ : ಈ ಸಂಸ್ಥೆ
ನಮ್ಮ ನುಂಗ ತೊಡಗಿದೆ.
ಆದರೂ ಹೆದರಬೇಡಿ. ಇದು ಬರೇ
ರಟ್ಟಿನ ಸೆಟ್ಟು – ಸಿನಿಮಾದಲ್ಲಿ
ಕಾಣುವ ಹಾಗೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...