Home / ಕವನ / ಕವಿತೆ / ಸಮರ್ಥನೆ : ಸೈತಾನ

ಸಮರ್ಥನೆ : ಸೈತಾನ

ಹೆಂಡದಂಗಡಿಯಂತೆ ಕತ್ತಲು ಕೋಣೆ
ನಮ್ಮ ಮನೆ ದೇವರ ಕೋಣೆ
ದಿನಕೆರಡು ಬಾರಿ ಅವನ ಸ್ನಾನ
ಊಟ ಉಪಚಾರ ಧೂಮಪಾನ
ಈಸಾಯಿ ಧಪನದಂತೆ
ಧೂಪಾನದ ಹೊಗೆ
ಹಿತ್ತಾಳೆ ತಟ್ಟೆಯಲಿ ಕೆಂಪು
ದಾಸವಾಳದ ಹೂವು
ಆಗತಾನೇ ಕೊರೆದಿಟ್ಟ ಮಾಂಸದ ಹಾಗೆ!
ಮೌನ!
ತಲೆ ಕೆಳಗೆ ಕಾಲು ಮೇಲೆ
ಶೀರ್ಷಾಸನ ಹಾಕಿರುವ
ಬಾವಲಿಗಳ ಗಂಟೆ

ನಾನು ಬೆಳೆದಿದ್ದೇನೆ
ದೇವರಮನೆ ಗುಹೆ ಬಾಗಿಲಿಗೆ ನನ್ನ
ತಲೆ ಮರೆತು ಢಿಕ್ಕಿ ಹೊಡೆದೀತು
ಚೌಕಟ್ಟು ಬೆಳೆದಿಲ್ಲ
ನಾ ಹುಟ್ಟುವಾಗಲೂ ಇತ್ತಂತೆ ಹೀಗೆ
ಸತ್ತಮೇಲೂ ಇರಬಹುದು
ಆದರೂ ನಾನೀಗ ಬೆಳೆದಿದ್ದೇನೆ
ಈ ಕೋಣೆ ಚಿಕ್ಕದಾಯಿತು
ಅಂಬೆಗಾಲಿನ ನನ್ನ ಬೂಟಿನ ಹಾಗೆ
ಎಲ್ಲೊ ಮೂಲೆಯಲಿ ಇತ್ತು
ಕೆಲವು ದಿನ ನನ್ನ ಮಗ ಹಾಕಿ ಮೆರೆದಾಡಿದ ಅದನ್ನ
ಆ ಮೇಲೆ ಮನೆನಾಯಿ ಎಲ್ಲೊ ಕೊಂಡೊಯ್ದು
ಹರಿದು ಹಾಕಿರಬೇಕು
ಈಗ ಎಲ್ಲೆಂದು ಕೇಳಿದರೆ ಸೈತಾನ ಹೇಳುತ್ತಾನೆ :
ಸತ್ಯಸಂಗತಿ ಹೀಗೆ –
ನಾವೆಲ್ಲ ಸೇರಿ ಹೆಸರಿಗಾದರು ಇರಲಿ
ಒಬ್ಬ ನೇತಾರ ದೇವರು ಎಂತ ಮಾಡಿದರೆ
ನಮ್ಮ ತಲೆ ಮೇಲೆ ಕುಳಿತು ಪಕ್ಕೆಗೆ ತಿವಿದ!
ಹೆಗಲು ಜಾಡಿಸಿದೆವು ನಾವು
ಈತ ಪಾತಾಳಕ್ಕೆ ತಳ್ಳಿದ ನಮ್ಮ.
ನಾವು ಬಿದ್ದೆವು ಎಂಬುದಕ್ಕಲ್ಲ
ನಮಗೆ ನೈತಿಕ ಪ್ರಶ್ನೆ ಮುಖ್ಯ
ನಾವೇ ನಿಲ್ಲಿಸಿದ ಬೆರ್ಚಪ್ಪ ನಮಗೇ
ಹಾಕಿದ್ದಾನೆ ಪಂಗನಾಮ!
ನಾನು ಹೇಳುವುದಿಷ್ಟೆ : ಈ ಸಂಸ್ಥೆ
ನಮ್ಮ ನುಂಗ ತೊಡಗಿದೆ.
ಆದರೂ ಹೆದರಬೇಡಿ. ಇದು ಬರೇ
ರಟ್ಟಿನ ಸೆಟ್ಟು – ಸಿನಿಮಾದಲ್ಲಿ
ಕಾಣುವ ಹಾಗೆ
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...