ದಾರಿ

ದಾರಿ ಎಂದರೆ ಎಲ್ಲರ
ಪಾದದ ಗುರುತುಗಳು
ಹೊತ್ತ ಭಾರದ ಹೃದಯದ
ಮನ ಕಾಣಿಸುವ ಚಲನೆ,
ಫಳಫಳಿಸಿದ ಬೆವರು ಹನಿಗಳು.

ದಾರಿಗುಂಟ ಸಾಗಿದ
ಕಣ್ಣೋಟಗಳು, ಅಂತರಂಗ
ಕಲುಕಿ ಬೀಸುವ ಗಾಳಿ,
ಪೂರ್ವವಲ್ಲದ ನಡುವೆ,
ಒಮ್ಮೊಮ್ಮೆ ಸೂಸುವ ತಂಗಾಳಿ.

ವರ್ಷಗಳು ಋತುಗಳು
ಮೈಲುಗಲ್ಲುಗಳು, ಬಿಳಿಮೋಡ
ತೇಲಿ ನೀಲಬಾನ ಹರಡಿ,
ಹನಿಸಿ ತೇಲು ಕರೆದು
ಜೊತೆಗೂಡಿ ಬರುವ ಕಾಲ್ಗಳು.

ನನ್ನದು ಅವನದಾಗಿ ಅವನದು
ನನ್ನದಾಗಿ ಬಿಸಿಹಾಯುವ ತಾಪ,
ಭಾರವಾದ ಹೆಜ್ಜೆಗಳು ತಮಗೆ
ತಾವೇ ಜೋಲಿ ಸಂಭಾಳಿಸಿ ಸಾಗಿದ
ಮೇರು ಬದುಕ ಬಟ್ಟೆ.

ದಾರಿ ಯಾವುದಯ್ಯ ವೈಕುಂಠಕೆ
ಎಂದ ದಾಸ ದೀನ ಹೀನ.
ಎಳೆದಾರಗಳು ಹೊಂದಿ ಹೆಣೆದ
ಕರಿಬಟ್ಟೆ ಡಾಂಬರು, ಹೆಜ್ಜೆಯ
ಹೆಜ್ಜೆಗಳೂರಿದ ದಿಂಡೀ ಯಾತ್ರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮರ್ಥನೆ : ಸೈತಾನ
Next post ದುಷ್ಟರು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…