ನೀ ಹೀಗೆ ಇರಬಾರದೆ

ಅದೇಕೆ ಶರಧಿ ನೀ ಹೀಗೆ
ಉಕ್ಕಿ ಆರ್ಭಟಿಸುವೆ
ಎದೆಯಾಳದ ಭಾವಗಳ
ಹರಿಬಿಡುವೆಯಾ ಹೀಗೆ
ನೀ ಎಷ್ಟೆ ಉಕ್ಕಿದರೂ

ವೇಗೋತ್ಕರ್ಷದಿ
ಬೋರ್ಗರೆದರೂ
ನಿಲ್ಲಲಾರೆ ನೀ
ಕೊನೆಗೂ ದಡದಿ
ಉಕ್ಕಿದಷ್ಟೆ ವೇಗದಿ
ಹಿಂದಕ್ಕೋಡುವೆ

ಪುಟಿದೆದ್ದ ಚಂಡಿನಂತೆ
ಗುರುತ್ವಾಕರ್ಷಣೆಯ
ಮೀರ ಲುಂಟೇ
ನೀ ಉಕ್ಕಿದ್ದೆನ್ನುವ
ಕುರುಹು ಮಾತ್ರ
ಮರಳ ಕಣದೊಳಗುಳಿಸಿ
ತೆರೆಗಳೊಡನಾಡುವ ನಿನ್ನ ಈ ಪರಿ
ಸೋಜಿಗವೋ ಸೋಜಿಗ
ಮರುಕವೋ ಮರುಕ
ಭಾವೋದ್ವೇಗದಿ ನೀ
ಎಷ್ಟೆಷ್ಟೇ ಉಕ್ಕಿದರೂ
ತೊರೆದು ಬಿಡಲಾರೆ
ಈ ಭವ ಬಂಧನವ
ತೆರೆದ ಅಲೆಗಳಂತೆ
ಹೊರಕ್ಕೋಡುವ ತವಕ
ಮತ್ತೂ ಹಿಂದಕೆ
ಭವ ಭಂಧನಕೆ
ಈ ಹುಚ್ಚು ಪರಿಯ
ಬಿಟ್ಟು ಮೌನವಾಗಿ
ಇರಬಾರದೆ ನದಿಯಂತೆ ಕೊಳದಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಣ್ಕಾಪು ಬಿಗಿದ ಕುದುರೆ
Next post ಸಮರ್ಥನೆ : ಸೈತಾನ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys