ನೀ ಹೀಗೆ ಇರಬಾರದೆ

ಅದೇಕೆ ಶರಧಿ ನೀ ಹೀಗೆ
ಉಕ್ಕಿ ಆರ್ಭಟಿಸುವೆ
ಎದೆಯಾಳದ ಭಾವಗಳ
ಹರಿಬಿಡುವೆಯಾ ಹೀಗೆ
ನೀ ಎಷ್ಟೆ ಉಕ್ಕಿದರೂ

ವೇಗೋತ್ಕರ್ಷದಿ
ಬೋರ್ಗರೆದರೂ
ನಿಲ್ಲಲಾರೆ ನೀ
ಕೊನೆಗೂ ದಡದಿ
ಉಕ್ಕಿದಷ್ಟೆ ವೇಗದಿ
ಹಿಂದಕ್ಕೋಡುವೆ

ಪುಟಿದೆದ್ದ ಚಂಡಿನಂತೆ
ಗುರುತ್ವಾಕರ್ಷಣೆಯ
ಮೀರ ಲುಂಟೇ
ನೀ ಉಕ್ಕಿದ್ದೆನ್ನುವ
ಕುರುಹು ಮಾತ್ರ
ಮರಳ ಕಣದೊಳಗುಳಿಸಿ
ತೆರೆಗಳೊಡನಾಡುವ ನಿನ್ನ ಈ ಪರಿ
ಸೋಜಿಗವೋ ಸೋಜಿಗ
ಮರುಕವೋ ಮರುಕ
ಭಾವೋದ್ವೇಗದಿ ನೀ
ಎಷ್ಟೆಷ್ಟೇ ಉಕ್ಕಿದರೂ
ತೊರೆದು ಬಿಡಲಾರೆ
ಈ ಭವ ಬಂಧನವ
ತೆರೆದ ಅಲೆಗಳಂತೆ
ಹೊರಕ್ಕೋಡುವ ತವಕ
ಮತ್ತೂ ಹಿಂದಕೆ
ಭವ ಭಂಧನಕೆ
ಈ ಹುಚ್ಚು ಪರಿಯ
ಬಿಟ್ಟು ಮೌನವಾಗಿ
ಇರಬಾರದೆ ನದಿಯಂತೆ ಕೊಳದಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಣ್ಕಾಪು ಬಿಗಿದ ಕುದುರೆ
Next post ಸಮರ್ಥನೆ : ಸೈತಾನ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…