ಸೂರ್ಯಾಸ್ತಮಾನ ಸಮಯ

ಪಡುವಣ ದಿಗಂತದಲಿ ಅಗ್ನಿದೇವನ ಒಂದು
ಕಾಲ್ಚೆಂಡು ಮೇಲ್ಹಾರಿ ಕೆಳಬೀಳ್ವುದೊ!
ಬ್ರಹ್ಮಗಿರಿ ಎಂದೆಂಬ ಬೆಟ್ಟದಾ ಅರುಗಾಗಿ
ದಿನಕರನು ಇಣಿಕಿಣಿಕಿ ಮರೆಸೇರ್ವನೊ!

ಎಲ್ಲಿಂದ ಯಾವೆಡೆಗೆ?  ಯಾವೂರು ಪೋಗ್ವನೊ
ಅಗ್ನಿಯಾ ಚಂಡು ಈ ಕೆಂಬಣ್ಣದೀ;
ಪಡುವಣದ ಪ್ರಾಂತದಲಿ ನೀರು ನೆಲದಲಿ ಎಲ್ಲ
ರಂಗು ಕುಂಕುಮ ಚೆಲ್ಲಿ-ಮುನ್ನೋಡ್ವನು!

ಜೀವ ರಾಶಿಗಳೆಲ್ಲ ಗೂಡು ಸೇರುವ ಪೊಳ್ತು
ಏಳು ವರ್ಣದ ಬಿಲ್ಲು ನಡುಗೋಲಿಯೊ!
ಹಾರಿ ಬಿದ್ದಿತು ಅಲ್ಲಿ, ಪಾಕಡಾಚೆಲಿ ನೋಡು,
ದೇವ ನಾವೆಯ ಒಳಗೆ ತೇಲಿ ಪೋಪಂ!

ತುಳುನಾಡ ಸಂಪಾಜೆ ಘಾಟಿ ದಾಟುತ ಹಾರ್‍ವ
ಪಕ್ಷಿಗಳೊ ಕೂಹೂಹು ಕೂಗಿ ಎಲ್ಲ;
ತಪ್ಪಲಿನ ಬಯಲಿನಲಿ ದುಡಿದು ಹಾಡುತ ಪೋಪರ್‍
ಕಿನಕಾಪು ನೀರಿ ಬೀಸಿ ಹೆಂಗಳೆಲ್ಲ?

ದನವು ಕರಗಳು ಎಲ್ಲ ಮೇಕೇರಿ ಬಯಲಿನಲಿ
ಕರೆ ಕರೆದು ಸೇರಿದವು ಕೊಟ್ಟೆಯನು;
ಕೋಟೆ ಗಂಟೆಯೊ ಆರು ಬಡಿಯೆ ಸೇರಿದರೆಲ್ಲ
ಆಡುತಿಹ ಮಕ್ಕಳೂ ಮನೆ ಸೇರಲು.

ಸಂಜೆ ಸಮಯವೊ ನೋಡು, ತಂಪುಗಾಳಿಯು ಸುತ್ತು,
ಬಾನ್ಕರೆಯಲೊಂದು ಮಗು ಅಳುತಲಿಹುದು,
ತನ್ನ ಮುಗುಳ್ನಗೆಯನ್ನು ಮುದ್ದು ಮಾತುಗಳನ್ನು
ತೋರಿ, ತಾಸಿನ ಕಾಲ ಬಾಳಿ ಇಲ್ಲಿ!

ಬೆಳಕಿನಲಿ ಸುಖವಿಹುದು, ಅದು ಲೋಕನ್ಯಾಯ,
ರಾತ್ರಿ ಕಷ್ಟದ ನಂಟು, ಶೋಕ ಮೂಲ;
ಅಗಲಬೇಡ ನೀ, ಬೇಡ ಸೂರ್ಯದೇವ
ನೋಡಲಾರೆನು ನೀನು ಅಗಲ್ವುದೆಮ್ಮ!

ಸೃಷ್ಠಿ ಚಿತ್ರವ ಜಗಕೆ ತೋರಿ ನೀ ಮಿಗಿಲಿಂ
ಯಾವ ನಾಡೊಳು ಪೋಗಿ ನಿದ್ರಿಸುವಿಯೊ?
ಕಾಡು ಮಾಡನು ಎಲ್ಲ, ಗುಡ್ಡ ಬಯಲಲಿ ಮಲೆಯೊಳ್
ಹೊಂಬೆಳಕ ಚಿಮುಕಿಸುತ ಪೋಪೆ ಎಲ್ಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೩
Next post ಎಳೆದೂ, ಎಳೆದೂ ಇರುಳು

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys